ETV Bharat / state

ಕರಾವಳಿ ಜಿಂಕೆಗೆ ಸಿಗುವುದೇ ಚಿನ್ನದ ಗರಿ?: ಪ್ಯಾರಿಸ್​ ಒಲಿಂಪಿಕ್​​ನಲ್ಲಿ ಕರ್ನಾಟಕದ ಅಥ್ಲಿಟಿಕ್​​ ಪೂವಮ್ಮ! - Poovamma

author img

By ETV Bharat Sports Team

Published : Jul 31, 2024, 8:24 PM IST

Updated : Jul 31, 2024, 8:34 PM IST

ಮೂರನೇ ಬಾರಿ ಒಲಿಂಪಿಕ್ಸ್​ನಲ್ಲಿ ಭಾಗಿಯಾಗುತ್ತಿರುವ ಕರ್ನಾಟಕದ ಅಥ್ಲೀಟ್​ ಎಂ.ಆರ್.ಪೂವಮ್ಮ ಅವರ ಹಿಂದಿನ ಸಾಧನೆ ಮತ್ತು ಗೆದ್ದ ಪದಕಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅಥ್ಲಿಟಿಕ್​​ ಪೂವಮ್ಮ
ಅಥ್ಲಿಟಿಕ್​​ ಪೂವಮ್ಮ (ETV Bharat)
ಅಥ್ಲೀಟ್ ಪೂವಮ್ಮ ಪೋಷಕರ ಪ್ರತಿಕ್ರಿಯೆ (ETV Bharat)

ಮಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ 2024 ಆರಂಭವಾಗಿ 4 ದಿನಗಳು ಕಳೆದಿವೆ. ಭಾರತ ಇದೂವರೆಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಭಾರತದ ಕ್ರೀಡಾಪಟುಗಳು ಪ್ಯಾರಿಸ್​ಗೆ ತೆರಳಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಮಹಿಳಾ ಅಥ್ಲೀಟ್​ ಕೂಡ ಸೇರಿದ್ದಾರೆ. ರಾಜ್ಯದ ಮಂಗಳೂರಿನಿಂದ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ಅಥ್ಲೀಟ್ ಎಂ.ಆರ್.ಪೂವಮ್ಮ 4x400​ ಮೀಟರ್​ ರಿಲೇಯಲ್ಲಿ ಚಿನ್ನದ ಪದಕ ಬೇಟೆಯ ನಿರೀಕ್ಷೆಯಲ್ಲಿದ್ದಾರೆ. ಆಕೆಯ ಹೆತ್ತವರು ಕೂಡು ಮಗಳು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಪೂವಮ್ಮ ಪ್ಯಾರೀಸ್ ತಲುಪಿದ್ದಾರೆ. 4x400 ಮೀಟರ್ ರಿಲೇಯಲ್ಲಿ ನಾಲ್ಕು ಜನರ ತಂಡದಲ್ಲಿ ಪೂವಮ್ಮ ಕೂಡ ಒಬ್ಬರಾಗಿದ್ದಾರೆ. ಆಗಸ್ಟ್​ 9 ರಂದು ಅವರ ಸ್ಪರ್ಧೆ ನಡೆಯಲಿದೆ. ಈ ಹಿಂದೆ ಪೂವಮ್ಮ 2008 ಮತ್ತು 2016ರ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿದ್ದರು. ಅವರ ತಂಡ ಗೆಲುವಿಗೆ ಪ್ರಯತ್ನ ಪಟ್ಟಿತ್ತಾದರೂ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್​ಗೆ ಹಾರಿದೆ.

ಮಗಳ ಸಾಧನೆ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಪೂವಮ್ಮ ತಂದೆ ರಾಜು, "20 ವರ್ಷದಿಂದ ಪೂವಮ್ಮ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಪಡುತ್ತಿದ್ದಾರೆ ಜತಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ವಿಶ್ವಾಸ ಇದೆ. ಮೆಡಲ್ ಬರಬಹುದು ಎಂದು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಪೂವಮ್ಮ ಕೂಡ ಅದಕ್ಕೆ ತಕ್ಕಂತೆ ಕಠಿಣ ಅಭ್ಯಾಸವನ್ನೂ ಮಾಡಿಯೇ ಒಲಿಂಪಿಕ್ಸ್​ಗೆ ತೆರಳಿದ್ದಾರೆ" ಎಂದರು.

ಬಳಿಕ ಪೂವಮ್ಮ ತಾಯಿ ಜಾಜಿ ರಾಜು ಮಾತನಾಡಿ, "ಪೂವಮ್ಮ ತನ್ನ ಮದುವೆ ದಿನ ಕೂಡ ಒಲಿಂಪಿಕ್ಸ್ ಕ್ರೀಡೆ ಗೋಸ್ಕರ ಪ್ರಾಕ್ಟಿಸ್ ಮಾಡಿದ್ದಾರೆ. 7ನೇ ತರಗತಿಯಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, ಏಷ್ಯಡ್ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. 2014, 2018ರಲ್ಲಿ ಈ ಸಾಧನೆ ಮಾಡಿದ್ದಾಳೆ. ಜತೆಗೆ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಕ್ರೀಡೆಯಲ್ಲಿ ಇನ್ನೂ ಹೆಚ್ಚು ಸಕ್ರಿಯರಾಗಿರಲು ಸರಕಾರಗಳಿಂದ ಹೆಚ್ಚಿನ ಧನಸಹಾಯ ಸಿಗುತ್ತಿಲ್ಲ. ಈ ಹಿಂದೆ ಇದಕ್ಕಾಗಿ ಅರ್ಜಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ".

"ಈ ಬಾರಿ ಒಲಿಂಪಿಕ್ಸ್​ಗೆ 5 ಲಕ್ಷ ಕೊಟ್ಟಿದ್ದಾರೆ. ಆದರೇ ಒಲಿಂಪಿಕ್ಸ್​ ತಯಾರಿಗಾಗಿ ಸಾಕಷ್ಟು ಖರ್ಚು ಆಗಿದೆ. ಕ್ರೀಡಾ ಪಟುಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಬೇರೆ ರಾಜ್ಯಗಳಲ್ಲಿ ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಹೆಚ್ಚಿನ ಧನ ಸಹಾಯ ಸಿಗುತ್ತದೆ. 2018 ರಿಂದ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವವರಿಗೆ ಕೇವಲ ಐದು ಲಕ್ಷ‌ ಮಾತ್ರ ಕೊಡುತ್ತಿದ್ದಾರೆ. ಹಾಗಾಗಿ ಇದನ್ನು ಹೆಚ್ಚಿಸಬೇಕು" ಎಂದು ಮನವಿ ಮಾಡಿದರು.

ಇದನ್ನೂ ಓದಿ: ಟೇಬಲ್​ ಟೆನಿಸ್​​: ಸಿಂಗಾಪುರ ವಿರುದ್ಧ ಶ್ರೀಜಾ ಅಕುಲಾಗೆ ಗೆಲುವು: ಪ್ರೀ - ಕ್ವಾರ್ಟರ್​ ಫೈನಲ್​ಗೆ ಪ್ರವೇಶ - paris olympics 2024

ಅಥ್ಲೀಟ್ ಪೂವಮ್ಮ ಪೋಷಕರ ಪ್ರತಿಕ್ರಿಯೆ (ETV Bharat)

ಮಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ 2024 ಆರಂಭವಾಗಿ 4 ದಿನಗಳು ಕಳೆದಿವೆ. ಭಾರತ ಇದೂವರೆಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಭಾರತದ ಕ್ರೀಡಾಪಟುಗಳು ಪ್ಯಾರಿಸ್​ಗೆ ತೆರಳಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಮಹಿಳಾ ಅಥ್ಲೀಟ್​ ಕೂಡ ಸೇರಿದ್ದಾರೆ. ರಾಜ್ಯದ ಮಂಗಳೂರಿನಿಂದ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ಅಥ್ಲೀಟ್ ಎಂ.ಆರ್.ಪೂವಮ್ಮ 4x400​ ಮೀಟರ್​ ರಿಲೇಯಲ್ಲಿ ಚಿನ್ನದ ಪದಕ ಬೇಟೆಯ ನಿರೀಕ್ಷೆಯಲ್ಲಿದ್ದಾರೆ. ಆಕೆಯ ಹೆತ್ತವರು ಕೂಡು ಮಗಳು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಪೂವಮ್ಮ ಪ್ಯಾರೀಸ್ ತಲುಪಿದ್ದಾರೆ. 4x400 ಮೀಟರ್ ರಿಲೇಯಲ್ಲಿ ನಾಲ್ಕು ಜನರ ತಂಡದಲ್ಲಿ ಪೂವಮ್ಮ ಕೂಡ ಒಬ್ಬರಾಗಿದ್ದಾರೆ. ಆಗಸ್ಟ್​ 9 ರಂದು ಅವರ ಸ್ಪರ್ಧೆ ನಡೆಯಲಿದೆ. ಈ ಹಿಂದೆ ಪೂವಮ್ಮ 2008 ಮತ್ತು 2016ರ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿದ್ದರು. ಅವರ ತಂಡ ಗೆಲುವಿಗೆ ಪ್ರಯತ್ನ ಪಟ್ಟಿತ್ತಾದರೂ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್​ಗೆ ಹಾರಿದೆ.

ಮಗಳ ಸಾಧನೆ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಪೂವಮ್ಮ ತಂದೆ ರಾಜು, "20 ವರ್ಷದಿಂದ ಪೂವಮ್ಮ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಪಡುತ್ತಿದ್ದಾರೆ ಜತಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ವಿಶ್ವಾಸ ಇದೆ. ಮೆಡಲ್ ಬರಬಹುದು ಎಂದು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಪೂವಮ್ಮ ಕೂಡ ಅದಕ್ಕೆ ತಕ್ಕಂತೆ ಕಠಿಣ ಅಭ್ಯಾಸವನ್ನೂ ಮಾಡಿಯೇ ಒಲಿಂಪಿಕ್ಸ್​ಗೆ ತೆರಳಿದ್ದಾರೆ" ಎಂದರು.

ಬಳಿಕ ಪೂವಮ್ಮ ತಾಯಿ ಜಾಜಿ ರಾಜು ಮಾತನಾಡಿ, "ಪೂವಮ್ಮ ತನ್ನ ಮದುವೆ ದಿನ ಕೂಡ ಒಲಿಂಪಿಕ್ಸ್ ಕ್ರೀಡೆ ಗೋಸ್ಕರ ಪ್ರಾಕ್ಟಿಸ್ ಮಾಡಿದ್ದಾರೆ. 7ನೇ ತರಗತಿಯಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, ಏಷ್ಯಡ್ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. 2014, 2018ರಲ್ಲಿ ಈ ಸಾಧನೆ ಮಾಡಿದ್ದಾಳೆ. ಜತೆಗೆ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಕ್ರೀಡೆಯಲ್ಲಿ ಇನ್ನೂ ಹೆಚ್ಚು ಸಕ್ರಿಯರಾಗಿರಲು ಸರಕಾರಗಳಿಂದ ಹೆಚ್ಚಿನ ಧನಸಹಾಯ ಸಿಗುತ್ತಿಲ್ಲ. ಈ ಹಿಂದೆ ಇದಕ್ಕಾಗಿ ಅರ್ಜಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ".

"ಈ ಬಾರಿ ಒಲಿಂಪಿಕ್ಸ್​ಗೆ 5 ಲಕ್ಷ ಕೊಟ್ಟಿದ್ದಾರೆ. ಆದರೇ ಒಲಿಂಪಿಕ್ಸ್​ ತಯಾರಿಗಾಗಿ ಸಾಕಷ್ಟು ಖರ್ಚು ಆಗಿದೆ. ಕ್ರೀಡಾ ಪಟುಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಬೇರೆ ರಾಜ್ಯಗಳಲ್ಲಿ ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಹೆಚ್ಚಿನ ಧನ ಸಹಾಯ ಸಿಗುತ್ತದೆ. 2018 ರಿಂದ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವವರಿಗೆ ಕೇವಲ ಐದು ಲಕ್ಷ‌ ಮಾತ್ರ ಕೊಡುತ್ತಿದ್ದಾರೆ. ಹಾಗಾಗಿ ಇದನ್ನು ಹೆಚ್ಚಿಸಬೇಕು" ಎಂದು ಮನವಿ ಮಾಡಿದರು.

ಇದನ್ನೂ ಓದಿ: ಟೇಬಲ್​ ಟೆನಿಸ್​​: ಸಿಂಗಾಪುರ ವಿರುದ್ಧ ಶ್ರೀಜಾ ಅಕುಲಾಗೆ ಗೆಲುವು: ಪ್ರೀ - ಕ್ವಾರ್ಟರ್​ ಫೈನಲ್​ಗೆ ಪ್ರವೇಶ - paris olympics 2024

Last Updated : Jul 31, 2024, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.