ETV Bharat / sports

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಶಿಷ್ಯನ ಆಟ ಕಣ್ತುಂಬಿಕೊಂಡ ಕೆ.ಎಲ್.ರಾಹುಲ್ ಬಾಲ್ಯದ ಕೋಚ್ - KL Rahul childhood coach

author img

By ETV Bharat Sports Team

Published : Sep 5, 2024, 5:25 PM IST

Updated : Sep 5, 2024, 5:34 PM IST

ಶಿಕ್ಷಕರ ದಿನವಾದು ಇಂದು ಕೆ.ಎಲ್​ ರಾಹುಲ್​ ಅವರ ಬಾಲ್ಯದ ಕೋಚ್​ ದುಲೀಪ್​ ಟ್ರೋಫಿಯಲ್ಲಿ ಆಡುತ್ತಿರುವ ತಮ್ಮ ಶಿಷ್ಯನ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಭೇಟಿ ನೀಡಿ ಪಂದ್ಯ ವೀಕ್ಷಿಸಿದರು.

ಸ್ಯಾಮ್ಯುಯೆಲ್‌ ಜಯರಾಜ್
ಸ್ಯಾಮ್ಯುಯೆಲ್‌ ಜಯರಾಜ್ (ETV Bharat)

ಬೆಂಗಳೂರು: ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ಹಾಗೂ ಭಾರತ ಬಿ ನಡುವಿನ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಶುಭ್ಮನ್ ಗಿಲ್ ನೇತೃತ್ವದ ಭಾರತ ಎ ತಂಡದ ಪರ ಕಣಕ್ಕಿಳಿದಿರುವ ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ.

ಕೆ.ಎಲ್​ ರಾಹುಲ್​
ಕೆ.ಎಲ್​ ರಾಹುಲ್​ (ETV Bharat)

ಜೀವನದ ಮೌಲ್ಯಗಳನ್ನು ಕಲಿಸಿದ ಗುರುಗಳನ್ನ ಸ್ಮರಿಸುವ ಶಿಕ್ಷಕರ ದಿನವಾದ ಇಂದು ತಮ್ಮ ಶಿಷ್ಯ ರಾಹುಲ್ ಆಟವನ್ನು ಕಣ್ತುಂಬಿಕೊಳ್ಳಲು ಅವರ ಗುರು ಸ್ಯಾಮ್ಯುಯೆಲ್‌ ಜಯರಾಜ್ ಮೈದಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಗಳ ನಡುವೆ ಕುಳಿತು ಸ್ಯಾಮ್ಯುಯೆಲ್ ಜಯರಾಜ್ ಪಂದ್ಯ ವೀಕ್ಷಿಸಿದ್ದು, ಗಮನ ಸೆಳೆಯಿತು.

ಸ್ಯಾಮ್ಯುಯೆಲ್ ಜಯರಾಜ್ ಕರ್ನಾಟಕದ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರು. ಹತ್ತನೇ ವಯಸ್ಸಿಗೆ ಕ್ರಿಕೆಟ್ ಆರಂಭಿಸಿದ್ದ ಕೆ.ಎಲ್.ರಾಹುಲ್ ಅವರಿಗೆ ಜಯರಾಜ್ ಅವರೇ ಮೊದಲ ಗುರು. ಮಂಗಳೂರಿನ ನೆಹರು ಮೈದಾನದಲ್ಲಿ ಆರಂಭವಾದ ರಾಹುಲ್ ಕ್ರಿಕೆಟ್ ಜರ್ನಿ ಇಂದು ಅವರನ್ನ ಭಾರತ ತಂಡದ ಮೋಸ್ಟ್ ಡಿಪೆಂಡಬಲ್ ಕ್ರಿಕೆಟರ್ ಆಗಿ ತಂದು ನಿಲ್ಲಿಸಿದೆ.

ಕೆ.ಎಲ್​ ರಾಹುಲ್​ ಮತ್ತು ಅವರ ಬಾಲ್ಯದ ಕೋಚ್​
ಕೆ.ಎಲ್​ ರಾಹುಲ್​ ಮತ್ತು ಅವರ ಬಾಲ್ಯದ ಕೋಚ್​ (ETV Bharat)

ರಾಹುಲ್ ಮಾತ್ರವಲ್ಲದೇ ವೇಗಿ ವಿದ್ವತ್ ಕಾವೇರಪ್ಪ ಅವರ ಪಾಲಿನ ದ್ರೋಣಾಚಾರ್ಯ ಸಹ ಸ್ಯಾಮ್ಯುಯೆಲ್ ಜಯರಾಜ್ ಆಗಿದ್ದಾರೆ. ಗುರುಗಳನ್ನ ಸ್ಮರಿಸುವ ವಿಶೇಷ ದಿನವಾದ ಇಂದು ಶಿಷ್ಯನ ಆಟವನ್ನ ಕಣ್ತುಂಬಿಕೊಳ್ಳಲು ಜಯರಾಜ್ ಅವರು ಮೈದಾನದಲ್ಲಿ ಖುದ್ದು ಹಾಜರಿದ್ದದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಅತೀ ಹೆಚ್ಚು ತೆರಿಗೆ ಪಾವತಿಸಿದ ವಿರಾಟ್​ ಕೊಹ್ಲಿ: ಇದು ಪಾಕ್​ ಆಟಗಾರ ಬಾಬರ್​ ಅಜಮ್​ ಒಟ್ಟು ಆಸ್ತಿಗಿಂತ ಅಧಿಕ! - Highest Tax Payer Cricketer

ಬೆಂಗಳೂರು: ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ಹಾಗೂ ಭಾರತ ಬಿ ನಡುವಿನ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಶುಭ್ಮನ್ ಗಿಲ್ ನೇತೃತ್ವದ ಭಾರತ ಎ ತಂಡದ ಪರ ಕಣಕ್ಕಿಳಿದಿರುವ ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ.

ಕೆ.ಎಲ್​ ರಾಹುಲ್​
ಕೆ.ಎಲ್​ ರಾಹುಲ್​ (ETV Bharat)

ಜೀವನದ ಮೌಲ್ಯಗಳನ್ನು ಕಲಿಸಿದ ಗುರುಗಳನ್ನ ಸ್ಮರಿಸುವ ಶಿಕ್ಷಕರ ದಿನವಾದ ಇಂದು ತಮ್ಮ ಶಿಷ್ಯ ರಾಹುಲ್ ಆಟವನ್ನು ಕಣ್ತುಂಬಿಕೊಳ್ಳಲು ಅವರ ಗುರು ಸ್ಯಾಮ್ಯುಯೆಲ್‌ ಜಯರಾಜ್ ಮೈದಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಗಳ ನಡುವೆ ಕುಳಿತು ಸ್ಯಾಮ್ಯುಯೆಲ್ ಜಯರಾಜ್ ಪಂದ್ಯ ವೀಕ್ಷಿಸಿದ್ದು, ಗಮನ ಸೆಳೆಯಿತು.

ಸ್ಯಾಮ್ಯುಯೆಲ್ ಜಯರಾಜ್ ಕರ್ನಾಟಕದ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರು. ಹತ್ತನೇ ವಯಸ್ಸಿಗೆ ಕ್ರಿಕೆಟ್ ಆರಂಭಿಸಿದ್ದ ಕೆ.ಎಲ್.ರಾಹುಲ್ ಅವರಿಗೆ ಜಯರಾಜ್ ಅವರೇ ಮೊದಲ ಗುರು. ಮಂಗಳೂರಿನ ನೆಹರು ಮೈದಾನದಲ್ಲಿ ಆರಂಭವಾದ ರಾಹುಲ್ ಕ್ರಿಕೆಟ್ ಜರ್ನಿ ಇಂದು ಅವರನ್ನ ಭಾರತ ತಂಡದ ಮೋಸ್ಟ್ ಡಿಪೆಂಡಬಲ್ ಕ್ರಿಕೆಟರ್ ಆಗಿ ತಂದು ನಿಲ್ಲಿಸಿದೆ.

ಕೆ.ಎಲ್​ ರಾಹುಲ್​ ಮತ್ತು ಅವರ ಬಾಲ್ಯದ ಕೋಚ್​
ಕೆ.ಎಲ್​ ರಾಹುಲ್​ ಮತ್ತು ಅವರ ಬಾಲ್ಯದ ಕೋಚ್​ (ETV Bharat)

ರಾಹುಲ್ ಮಾತ್ರವಲ್ಲದೇ ವೇಗಿ ವಿದ್ವತ್ ಕಾವೇರಪ್ಪ ಅವರ ಪಾಲಿನ ದ್ರೋಣಾಚಾರ್ಯ ಸಹ ಸ್ಯಾಮ್ಯುಯೆಲ್ ಜಯರಾಜ್ ಆಗಿದ್ದಾರೆ. ಗುರುಗಳನ್ನ ಸ್ಮರಿಸುವ ವಿಶೇಷ ದಿನವಾದ ಇಂದು ಶಿಷ್ಯನ ಆಟವನ್ನ ಕಣ್ತುಂಬಿಕೊಳ್ಳಲು ಜಯರಾಜ್ ಅವರು ಮೈದಾನದಲ್ಲಿ ಖುದ್ದು ಹಾಜರಿದ್ದದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಅತೀ ಹೆಚ್ಚು ತೆರಿಗೆ ಪಾವತಿಸಿದ ವಿರಾಟ್​ ಕೊಹ್ಲಿ: ಇದು ಪಾಕ್​ ಆಟಗಾರ ಬಾಬರ್​ ಅಜಮ್​ ಒಟ್ಟು ಆಸ್ತಿಗಿಂತ ಅಧಿಕ! - Highest Tax Payer Cricketer

Last Updated : Sep 5, 2024, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.