ಭಾರತದ ಉಪಖಂಡಗಳಲ್ಲಿ ಕಾಳಿ ಆರಾಧನೆ ಇತಿಹಾಸದಲ್ಲಿ ಆಕೆಯನ್ನು ಮಾತೃ ದೇವತೆಯ ಎಲ್ಲ ಸ್ವರೂಪ ಅಥವಾ ಆದಿ ಶಕ್ತಿಯಾಗಿ ಕಾಣಲಾಗುವುದು. ಕಾಳಿ ತನ್ನ ಉಗ್ರ ಮತ್ತು ಭಯಂಕರ ಸ್ವರೂಪವಾಗಿ ಗುರುತಿಸಲ್ಪಡುವ ದೇವತೆ. ದಕ್ಷಿಣ ಏಷ್ಯಾ, ಬಂಗಾಳ, ಅಸ್ಸಾಂ, ನೇಪಾಳ, ಒಡಿಶಾ, ಭಾರತದ ದಕ್ಷಿಣ ರಾಜ್ಯ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಳಿ ದೇವತೆ ಎಲ್ಲ ಸ್ತರ ಅಥವಾ ಅದರಾಚೆಗೂ ಪ್ರಸ್ತುತವಾಗಿದ್ದಾಳೆ.
![The History Of Kali Worship](https://etvbharatimages.akamaized.net/etvbharat/prod-images/02-09-2024/kali-temple1725259581914-41_0209email_1725259584_1010.jpg)
ಇಟ್ವಾದಲ್ಲಿನ ಸಯ್ಯದ್ ಬಾಬಾ ಮಜಾರ್ ಮತ್ತು ಪಾವಗಡದ ಸದನ್ ಶಾತಂದಹ ಮುಸ್ಲಿಂ ಸೂಫಿ ಸಂತರ ಸ್ಥಳಗಳಲ್ಲೂ ಕಾಳಿ ಆರಾಧನೆ ಪವಿತ್ರ ಸ್ಥಳಗಳಿಂದ ಕೂಡಿವೆ. ಕಾಳಿ ದೇವಿಗೂ ತಲೆಬುರಡೆ, ಮಾನವನ ಕೈಗಳ ಹಾರದಿಂದ ಅಲಕೃತಗೊಂಡ, ರಕ್ತದಿಂದ ತೊಯ್ದ ಕಾಳಿ ಮೃತ್ಯವಿಗೆ ಆಹ್ವಾನ ನೀಡುವಂತೆ ಬಿಂಬಿಸಲಾಗಿದೆ. ಕಾಳಿ ದೇವರ ಚಿತ್ರ ಸ್ವರೂಪದ ಮುಖ್ಯ ಕಾರಣ, ವಸಾಹತುಶಾಹಿ ಕ್ರಿಶ್ಚಿಯನ್ ಮಿಷನರಿಗಳು ಭಾರತೀಯ ಧಾರ್ಮಿಕ ವಿಚಾರಗಳನ್ನು ಉಗ್ರವಾಗಿ ಮತ್ತು ತಕ್ಷಣವೇ ನಾಗರಿಕತೆಯ ಅಗತ್ಯವನ್ನು ಕಂಡು ಕೊಳ್ಳುವುದಾಗಿದೆ.
![The History Of Kali Worship](https://etvbharatimages.akamaized.net/etvbharat/prod-images/02-09-2024/kali-portrayal1725259581919-43_0209email_1725259584_706.jpg)
ತಾಂತ್ರಿಕ್ ಕೃಷ್ಣ: ಕಾಳಿಯು ಭಗವದ್ಗೀತೆಯ ತತ್ವಗಳ ಕ್ಷುದ್ರ ವ್ಯಕ್ತಿತ್ವವಾಗಿದೆ. ಕಾಳಿ ಆಂತರಿಕ ಮತ್ತು ಭಾಗ್ಯ ರಾಕ್ಷಸರ ವಿರುದ್ಧ ಕಾಪಾಡುವ ದೇವಿ. ಹಿಂದೂ ತತ್ವಶಾಸ್ತ್ರದಲ್ಲಿ ಕಾಳಿಯ ಉಗಮನವೂ ವಿಳಂಬವಾಗಿದೆ. ಗೀತಾದ ಬಳಿಕ ಆಕೆಯ ಮೂಲ ಮಾದರಿಯ ಬೆಳವಣಿಗೆ ಅಭಿವೃದ್ಧಿ ಗಮನಾರ್ಹವಾಗಿದೆ.
ಕಾಳಿ ನಂಬಲಾಗದ ರೂಪಗಳು ಮತ್ತು ನಿರಾಕಾರತೆಯಿಂದ ದಿಗ್ಭ್ರಮೆ ರೂಪವಾಗಿದೆ. ತಾಯಿಗೆ ಕವಿ ಮಗುವು ಹೀಗೆ ಕೇಳುತ್ತದೆ. ಬ್ರಹ್ಮಾಂಡವೇ ಇಲ್ಲದೇ ಇದ್ದಾಗ, ನಿನಗೆ ತಲೆಬುರುಡೆಯ ಹಾರ ಎಲ್ಲಿಂದ ಲಭ್ಯವಾಯಿತು ಎಂದು. ಬಂಗಾಳಿಯ ಶಕ್ತಾ ಕವಿತೆಯಲ್ಲಿ ಕಾಳಿಯನ್ನು ಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಹಿಂದೂ ದೇವಿಯಾಗಿ ಹೇಗೆ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಲಾಗಿದೆ.
![The History Of Kali Worship](https://etvbharatimages.akamaized.net/etvbharat/prod-images/02-09-2024/kali-devotees1725259581929-87_0209email_1725259584_1073.jpg)
ಕಾಳಿಯ ಆರಾಧನೆಯಲ್ಲಿ ಪಂಚತತ್ವಗಳು ಒಳಗೊಂಡಿರುವುದನ್ನು ಕಾಣಬಹುದಾಗಿದೆ. ಆ ಐದು ತಾಂತ್ರಿ ಅಂಶವನ್ನು ಸಾಮಾನ್ಯವಾಗಿ ಹಿಂದೂ ಆರಾಧನೆಯ ಅನೇಕ ಮಾದರಿಯಲ್ಲಿ ಸೆನ್ಸಾರ್ ಮಾಡಲಾಗಿದೆ. ಅದರಲ್ಲಿ ಮದ್ಯ, ಮಾಂಸ, ಮತ್ಸ, ಮುದ್ರ ಮತ್ತು ಮೈಥುನವೂ ಒಳಗೊಂಡಿದೆ. ಕಾಳಿ ಆರಾಧನೆಗೆ ಬಳಕೆ ಮಾಡುವ ಈ ಐದು ಪದಾರ್ಥಗಳು ಸೇವನೆ ಮಾಡುವುದಕ್ಕಲ್ಲ. ಬದಲಾಗಿ ಸಾಮಾಜಿಕ ದುಷ್ಟತೆಗಳ ಪ್ರಚೋದನಾಕಾರಿಯಾಗಿ, ಆತಂರಿಕ ಧಾರ್ಮಿಕ ಶುದ್ಧಿಗಾಗಿದೆ.
![The History Of Kali Worship](https://etvbharatimages.akamaized.net/etvbharat/prod-images/02-09-2024/kali-prayagraj1725259581939-15_0209email_1725259584_133.jpg)
ವಿಳಂಬ ಹುಟ್ಟು: ಕಾಳಿ ಎಂಬ ಶಬ್ಧವನ್ನು ಸಂಸ್ಕೃತದ ಕಾಲಾ ಎಂಬ ಪದದಿಂದ ಬಂದಿದೆ. ಇದರರ್ಥ ಸಮಯ ಮತ್ತು ಕಪ್ಪು ಎಂಬುದಾಗಿದೆ. ಈ ಎರಡು ಅಂಶಗಳುನ್ನು ಆಕೆಯಲ್ಲಿ ಗಣನೀಯವಾಗಿ ಸಂಯೋಜಿಸಲಾಗಿದ್ದು, ಆಳವಾದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ಸೂಚನೆಯಾಗಿದೆ. ಇದು ಬ್ರಹ್ಮಾಂಡದ ಶೂನ್ಯ ಮತ್ತು ಜೀವನ ನೋಡುವ ಸಮಯದ ಅನಂತ ಚಕ್ರವನ್ನು ಹೊಂದಿದೆ.
ಕಾಳಿಯ ಹುಟ್ಟು ಮುಖ್ಯವಾಹಿನಿಯ ಹಿಂದೂ ಪುರಾಣ ಮತ್ತು ತತ್ವಶಾಸ್ತ್ರಕ್ಕಿಂತ ಮುನ್ನ ಪೂರ್ವ ವೈದಿಕ ಮತ್ತು ವೈದಿಕೇತರ ಆದಿವಾಸಿ ದೇವಿಯಾಗಿ ಸಂಬಂಧ ಹೊಂದಿದೆ. ಕಾಳಿ ದೇವತೆ ಹೆಸರನ್ನು ಮುಂಡಕ ಉಪನಿಷತ್ನಲ್ಲಿ (ಕ್ರಿ.ಪೂ 500) ಕಾಣಬಹುದಾಗಿದೆ. ಇಲ್ಲಿ ಆಕೆಯನ್ನು ಏಳು ಅಗ್ನಿಯ ನಾಲಿಗೆಯ ದೇವತೆ ಎಂದು ಕರೆಯಲಾಗಿದೆ. ಋಗ್ವೇದ ಮತ್ತು ಅಥರ್ವವೇದದಲ್ಲಿ ಕಾಳಿ ರಾತ್ರಿ ದೇವಿ ಮತ್ತು ನಿರ್ತಿ ಅಂದರೆ ರಾಕ್ಷಸ ದೇವಿಯಾಗಿ ಕಂಡಿದ್ದಾಳೆ.
![The History Of Kali Worship](https://etvbharatimages.akamaized.net/etvbharat/prod-images/02-09-2024/kali1725259581953-60_0209email_1725259584_339.jpg)
ಇದರ ಜೊತೆಗೆ ಮಹಾಭಾರತದಲ್ಲಿ (ಕ್ರಿ. ಶ 300 ರಿಂದ 400) ರಲ್ಲಿ ಕಾಳಿಯನ್ನು ಮೂರು ಪ್ರಮುಖ ಭಾಗಗಳಲ್ಲಿ ಕಾಣಬಹುದು. ಸುಪ್ತಿಕ ಪರ್ವ 8 ವಿರಾಟ ಪರ್ವ 7 ಮತ್ತು ಭೀಷ್ಮ ಪರ್ವದಲ್ಲಿ XXIII ಕಾಳಿ ಉಲ್ಲೇಖನವಿದೆ. ಕ್ರಿ ಶ 300ರ ಮಾರ್ಕಡೇಯ ಪುರಾಣದಲ್ಲಿ ಕೂಡ ಕಾಳಿ ಸ್ಥಾನ ಪಡೆದಿದ್ದು, ದೇವಿ ಮಹಾತ್ಮೆಯಲ್ಲಿ ಆಕೆಯನ್ನು ಕಾಣಬಹುದು.
![The History Of Kali Worship](https://etvbharatimages.akamaized.net/etvbharat/prod-images/02-09-2024/22355242_712_22355242_1725272620144.png)
ದೇವಿ ಮಹಾತ್ಮೆಯ ಹಿಂದೂ ಧರ್ಮದ ಮಹಾನ್ ಸಂಪ್ರದಾಯದ ದೇವತೆಗಳ ಕುರಿತು ತಿಳಿಸುತ್ತದೆ. ಇದರ ಮೂರನೇ ಸಂಚಿಕೆಯಲ್ಲಿ, ಕಾಳಿ ದುರ್ಗೆಯಾಗಿ ಅವತಾರ ತಾಳುತ್ತಾಳೆ. ಚಂಡ, ಮುಂಡಾ, ರಕ್ತಬೀಜ, ಶುಂಭ ಮತ್ತು ನಿಶುಂಭರ ನಂತರ ದುಷ್ಟರನ್ನು ಸಂಹರಿಸಿ ಆಕೆ ಚಾಮುಂಡಿಯಾಗುತ್ತಾಳೆ.
ಕಾಳಿ ಅಥವಾ ಚಾಮುಂಡಿ ಅನೇಕ ತೀವ್ರದ ಉಗ್ರ ಸ್ವರೂಪವನ್ನು ಹೊಂದುತ್ತಾಳೆ. ದುರ್ಗೆಯೂ ಶಿವನ ಮಧ್ಯಸ್ಥಿಕೆಯಲ್ಲಿ ಅನೇಕ ದುರ್ಗೆಯಾಗಿ ರೂಪತಾಳುತ್ತಾಳೆ. ದುರ್ಗೆಯು ತನ್ನ ನಾಲಿಗೆ ಚಾಚಿ, ಆತನ ಎದೆ ಮೇಲೆ ಕಾಲು ಇಟ್ಟು ಉಗ್ರರೂಪದಲ್ಲಿ ಕಾಣುತ್ತಾಳೆ. ಈ ಮಾದರಿಯು ಕಾಳಿಯ ಭಂಗಿಯಲ್ಲಿ ಪ್ರಖ್ಯಾತಿಗೊಂಡಿದೆ.
ಕಾಳಿಯ ಆರಾಧನೆ: ಪುರಾತನ ಸಂಪ್ರದಾಯದ ಶಕ್ತಾ ಆರಾಧನೆಯಲ್ಲಿ ಕಾಳಿ ಆರಾಧನೆ ಅರ್ಥೈಸಿಕೊಳ್ಳುಲಾಗಿದೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಶೈವ ಆರಾಧನೆ ಭಕ್ತರು ಆರಾಧಿಸಿದ್ದಾರೆ. ಕೇರಳದಲ್ಲಿ ಭಗವತಿ ಮತ್ತು ಕರ್ನಾಟಕದಲ್ಲಿ ಎಲ್ಲಮ್ಮ ಕಾಳಿಯ ರೂಪವನ್ನೇ ಹೋಲುತ್ತದೆ.
ತಮಿಳಿನ ನಗ್ನ ದೇವಿ ಕೊರ್ರಾವೈ ಮತ್ತು ಚಾಮುಂಡಾ ಕೂಡ ಕಾಳಿ ಆರಾಧನೆಯ ಹಲವು ಹೋಲಿಕೆಗಳನ್ನು ಹೊಂದಿದೆ. ಕೇರಳದ ಶಕ್ತಾ ಸಂಪ್ರದಾಯದಲ್ಲಿ ಕಾಳಿ ಅಥವಾ ಭದ್ರಕಾಳಿಯು ದುಷ್ಟ ದರಿಕಾ ಸಂಹಾರಕ್ಕೆ ಶಿವನ ಮೂರನೇ ಕಣ್ಣಿನಿಂದ ಉಗಮವಾಗಿದ್ದಾರೆ. ಕಾಳಿಯನ್ನು ಭಾರತದಲ್ಲಿ 10 ಪ್ರಮುಖ ಮಾದರಿಯಲ್ಲಿ ಆರಂಧಿಸಲಾಗುತ್ತದೆ. ಅದರಲ್ಲ ಆದ್ಯ ಕಾಳಿ, ಮಾತಂಗಿ ಕಾಳಿ (ಚಂಡಾಲಿನಿ), ಚುನ್ನಮಸ್ತ (ಪ್ರಚಂಡ ಚಂದ್ರಿಕಾ) ಶಂಸನ ಕಾಳಿ, ಬಂಗಳಾ ಕಾಳಿ, ದಕ್ಷಿಣ ಕಾಳಿ, ಭೈರವಿ ಕಾಳಿ, ತಾರಾ ಕಾಳಿ (ಮಹಾರಾಯನ ಬೌದ್ಧದಲ್ಲಿ ಆರಾಧನೆ) ಕಮಲ ಕಾಳಿ ಮತ್ತು ಧುಮವತಿ ಕಾಳಿ (ವಿಧವೆಯರ ಏಕೈಕ ಹಿಂದೂ ದೇವತೆ)ಯಾಗಿ ಆರಾಧಿಸಲಾಗುವುದು.
ಕಾಳಿ ಆರಾಧನೆ ಇತಿಹಾಸ ಭಾಗವಾಗಿದೆ; ಹಿಂದೂ ಧರ್ಮದಲ್ಲಿ ಕಾಳಿಯನ್ನು ಕಡಿಮೆ ಗ್ರಹಿಸಲಾಗಿದೆ. ಕಾಳಿ ಆರಾಧನೆಯ ಔಪಚಾರಿಕ ಸಂಪ್ರದಾಯಗಳ ಪ್ರಚಾರದ ಇತ್ತೀಚಿನ ಇತಿಹಾಸದ ಭಾಗಶಃ ಕಾರಣವಾಗಿದೆ. ಹದಿನಾರನೇ ಶತಮಾನದ ಬಂಗಾಳದಲ್ಲಿ ಕಾಳಿ ಆರಾಧನೆಯನ್ನು ನಬದ್ವೀಪ್ನ ತಾಂತ್ರಿಕ್ ವಿದ್ವಾಂಸರಾದ ಕೃಷ್ಣಾನಂದ ಆಗಮವಾಗೀಶ್ ಅಥವಾ ಮಹಾಮಹೋಪಾಧ್ಯಾಯ ಕೃಷ್ಣಾನಂದ ಭಟ್ಟಾಚಾರ್ಯ ಜನಪ್ರಿಯಗೊಳಿಸಿದರು.
ಆಗಮವಾಗೀಶ್ ಹೊಸ ತಾಂತ್ರಿಕ್ ಕೃತಿ ತಂತ್ರಸಾರವನ್ನು ಬಂಗಾಳಿಗೆ ಪರಿಚಯಿಸಿದರು. ಈ ಆಗಮವಾಗೀಶದ ಸಂಪ್ರದಾಯಿಕ ಮುನ್ನಡೆಯನ್ನು ನಬದ್ವೀಪ್ನ ರಾಜ ಕೃಷ್ಣದಂದ್ರ ರಾಯ್ 18ನೇ ಶತಮಾನದಲ್ಲಿ ನಡೆಸಿದರು. ಇದು ಬಂಗಾಳದ ಶಕ್ತಾ ಕಾವ್ಯದ ಸುವರ್ಣ ಕಾಲವಾಗಿದ್ದು, ಕಮಲಕಾಂತ್ ಮತ್ತು ರಾಮ್ಪ್ರಸಾದ್ ಪ್ರತಿನಿಧಿಸಿದ್ದಾರೆ.
ಕಾಳಿ ಪೂಜೆಯ ಸಂಸ್ಕೃತಿ ದಿಪನ್ನಿತ ಕಾಳಿ ಪೂಜಾ ಎಂದು ಪರಿಗಣಿಸಲಾಗಿದ್ದು, ಇದನ್ನು ದೀಪಾವಳಿಯ ರಾತ್ರಿ ಆಚರಿಸಲಾಗುವುದು. ಆಗಮವಾಗೀಶ ಮತ್ತು ಕೃಷ್ಣಚಂದ್ರ ರಾಯ್, ಕಾಳಿ ಪೂಜೆಯನ್ನು ಡಕಾಯಿತರು ಮತ್ತು ಇತರ ಪರ್ಯಾಯಕ್ಕೆ ಸಂಬಂಧ ಹೊಂದಿದ್ದು, ಸಾಂಪ್ರದಾಯಿಕ ಹಿಂದೂ ಧರ್ಮದ ಬೇರುಗಳನ್ನು ಅತೀಂದ್ರಿಯ ಪ್ರಯೋಗದ ಅಭ್ಯಾಸಗಳೊಂದಿಗೆ ಸಂಯೋಜಿಸುತ್ತದೆ.
ಮಧ್ಯಕಾಲದ ಅವಧಿಯ ಅಂತ್ಯದಲ್ಲಿ ಅನೇಕ ಡಕಾಯಿತರು ಕಾಳಿಯ ಅನೇಕ ಪುರಾತನ ದೇಗುಲಗಳ ನಿರ್ಮಾಣವನ್ನು ಬಂಗಾಳದಲ್ಲಿ ನಿರ್ಮಾಣ ಮಾಡಿದರು. ಉದಾಹರಣೆಗೆ ಪ್ಲಾಸಿ ಕದನ (1757)ರ ಸಮಯದಲ್ಲಿ ಕೋಲ್ಕತ್ತಾದ ಚಿತ್ರೇಶ್ವರ ಡಾಕಾಯಿತ ಚಿತ್ರೇಶ್ವರಿಯನ್ನು ಆರಾಧಿಸುತ್ತಿದ್ದು, ಇದು ಕಾಳಿ ಮಾತೆಯನ್ನು ಹೋಲುತ್ತದೆ. 19ನೇ ಶತಮಾನದಲ್ಲಿ ಮನೋಹರ್ ಡಕಾಯಿತ ಕೂಡ ಕಾಳಿ ಪೂಜಿಸುತ್ತಿದ್ದ.
ರಘು ಡಕಾಯಿತ ಬನ್ಸಬೆರಿಯಾದಲ್ಲಿ ಐದು ವರ್ಷದ ಕಾಳಿ ಆರಾಧನೆಯನ್ನು ಅದ್ಧೂರಿಯಾಗಿ ಆರಂಭಿಸಿದ. ಹೂಗ್ಲಿಯಲ್ಲಿ 18ನೇ ಶತಮಾನದ ಕವಿ ರಾಮ್ ಪ್ರಸಾದ್ ರಘು ಡಕಾಯಿತ ಗುಂಪಿಗೆ ಸಿಕ್ಕಿ ಬಿದ್ದು, ದೇವಿಗೆ ಆತನನ್ನು ಅರ್ಪಿಸಲಾಯಿತು. ರಾಮ್ಪ್ರಸಾದ್ ತಾಯಿಗೆ ಕೊನೆಯದಾಗಿ ಭಕ್ತಗೀತೆ ಹಾಡಲು ಅನುಮತಿ ನೀಡಲಾಯಿತು. ಈ ಗೀತೆ ಅಲ್ಲಿದ್ದವರನ್ನು ಮಂತ್ರಮುಗ್ದವಾಗಿಸಿದೆ. ರಘು ಅವರು ತಾಯಿಯನ್ನು ಕಣ್ತುಂಬಿಕೊಂಡರು. ಇದಾದ ಬಳಿಕ ರಾಮ್ ಅವರನ್ನು ಬಿಡುಗಡೆ ಬಂಧ ಮುಕ್ತಗೊಳಿಸಲಾಯಿತು. ಇದಾದ ಬಳಿಕ ಮಾನವ ಬಲಿ ಬದಲಾಗಿ ಬಾಂಬೆ ಬಾತುಕೋಳಿ ಬಲಿ ನೀಡುವ ಆಚರಣೆ ಬಂದಿತು.
ವಸಾಹತುಶಾಹಿ ಕಾಲದ ತಾಯಿ: ವಿವೇಕಾನಂದರ ಬಳಿಕ ಸಿಸ್ಟರ್ ನಿವೇದಿತ ತಮ್ಮ ವಸಾಹತು ವಿರೋಧಿ ಚಟುವಟಿಕೆಯಲ್ಲಿ ಕಾಳಿಯನ್ನು ಸ್ಪೂರ್ತಿಯಾಗಿ ಪಡೆದು ವಾದ ಮಂಡಿಸಿದರು. 1980ರಲ್ಲಿ ಬಂಗಾಳದಲ್ಲಿ ವಸಾಹತು ವಿರೋಧಿ ಕ್ರಾಂತಿಯಲ್ಲಿ ಮೊದಲ ಬಾರಿಗೆ ಕಾಳಿ ಪೂಜೆಯನ್ನು ಆರಂಭಿಸಲಾಯಿತು. ನಾಡಿಯಾದಲ್ಲಿ ಬಾಂಬೆಟ್ (ಪೈರೆಟ್ಸ್) ಗುಮಪು ಮೊದಲ ಸಮುದಾಯವೂ ಕಾಳಿ ಪೂಜೆ ಶುರು ಮಾಡಿತು.
1905ರ ಮಹಾಲಯದಲ್ಲಿ ವೈಸರಾಯ್ ಲಾರ್ಡ್ ಕರ್ಜನ್ ಬಂಗಾಳದ ವಿಭಜತೆ ಘೋಷಿಸಿದ. ಸಾವಿರಾರು ಕಾಳಿ ಆರಾಧಕರು ಕೊಲ್ಕತ್ತಾದ ಕಾಳಿಘಾಟ್ನಲ್ಲಿ ದೇಗುಲಕ್ಕೆ ಬಂದದು ಸ್ವದೇಶಿ ಚಳವಳಿಯಲ್ಲಿ ಹೋರಾಟ ಹಿನ್ನೆಲೆ ಶಪಥ ಮಾಡಿದರು. ಇದಾದ ಎರಡು ವರ್ಷದ ಬಳಿಕ ಕಾಳಿ ದೇವಿ ಕೈಯಲ್ಲಿ ಸೀಗರೇಟ್ ಹಿಡಿದಿರುವ ಜಾಹೀರಾತನ್ನು ಕೊಲ್ಕತ್ತಾದ ಆರ್ಟ್ಸ್ ಸ್ಟುಡಿಯೋದಲ್ಲಿ ಪ್ರಕಟಿಸಲಾಯಿತು. ಇದು ಬ್ರಿಟಿಷ್ ಸರ್ಕಾರದ ವಿರುದ್ಧದ ಆಕ್ರೋಶಕ್ಕೆ ಗುರಿಯಾಯಿತು.
ಕಾಳಿ ಮೂಲ, ಅಹಂಕಾರ ಮತ್ತು ಭೌತಿಕ ಪೂರ್ವಾಗ್ರಹಗಳಿಂದ ಮುಕ್ತಗೊಳಿಸುವುದಾಗಿದೆ. ಹದಿನೆಂಟನೇ ಶತಮಾನದ ಮಹಾನಿರ್ವಾಣ ತಂತ್ರವು ಘೋಷಿಸುವಂತೆ, ಎಲ್ಲ ಬಣ್ಣಗಳು ಕಪ್ಪು ಬಣ್ಣದಲ್ಲಿ ಕಣ್ಮರೆಯಾಗುವಂತೆ, ಎಲ್ಲ ಹೆಸರುಗಳು ಮತ್ತು ರೂಪಗಳು ಕಾಳಿಯಲ್ಲಿ ಕಣ್ಮರೆಯಾಗುತ್ತವೆ.
ಲೇಖಕರು: ಅನೂಪ್ ಕೆ ಚಟರ್ಜಿ
ಇದನ್ನೂ ಓದಿ: ಉತ್ತರ ರಾಮಾಯಣ ಘಟಿಸಿದ್ದು ಎಷ್ಟು ಸತ್ಯ? ವಾಸ್ತವಾಂಶಗಳು ಏನು ಹೇಳುತ್ತವೆ?: ವಿಶ್ಲೇಷಣೆ