ETV Bharat / business

ತಲಾ ಆದಾಯ 5 ಪಟ್ಟು ಹೆಚ್ಚಾದರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯ: ಸಿ.ರಂಗರಾಜನ್

author img

By PTI

Published : Feb 13, 2024, 7:55 PM IST

ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ದೇಶವು ಪ್ರತೀ ವರ್ಷ ಶೇ.7ರಿಂದ 8ರಷ್ಟು ಬೆಳವಣಿಗೆ ಸಾಧಿಸುವುದು ಅಗತ್ಯ ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್
former Reserve Bank Governor C Rangarajan

ಹೈದರಾಬಾದ್: "2047ರ ವೇಳೆಗೆ 13,000 ಡಾಲರ್ ತಲಾ ಆದಾಯ ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ವಾರ್ಷಿಕವಾಗಿ ಶೇ.7ರಿಂದ 8ರಷ್ಟು ಬೆಳವಣಿಗೆ ಸಾಧಿಸುವ ಅಗತ್ಯವಿದೆ" ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದರು. ಅಸಮಾನತೆ ಅಥವಾ ಬಡತನವನ್ನು ಕಡಿಮೆ ಮಾಡಲು ನಾವೀನ್ಯತೆ ಒಂದೇ ಪರಿಹಾರವಲ್ಲ ಎಂದು ಪ್ರತಿಪಾದಿಸಿದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ರಂಗರಾಜನ್, "ವೇಗದ ಬೆಳವಣಿಗೆಯ ದರದ ಜೊತೆಗೆ, ದೇಶದ ಜನತೆಗೆ ನಗದು ಮತ್ತು ಮೂಲ ಆದಾಯ ಸಬ್ಸಿಡಿಗಳಂಥ ಸಾಮಾಜಿಕ ಸುರಕ್ಷತಾ ಕ್ರಮಗಳು ಬೇಕಾಗಬಹುದು" ಎಂದು ತಿಳಿಸಿದರು.

"ಶೇ.7ರಿಂದ 8ರ ನಡುವಿನ ವಾಸ್ತವಿಕ ಬೆಳವಣಿಗೆಯು ದೇಶವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಹತ್ತಿರ ಕೊಂಡೊಯ್ಯುತ್ತದೆ. ಏಕೆಂದರೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ವ್ಯಾಖ್ಯಾನದ ಪ್ರಕಾರ ತಲಾ ಆದಾಯ 13,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕಾಗುತ್ತದೆ. ಭಾರತದ ತಲಾ ಆದಾಯ ಈಗ 2,700 ಡಾಲರ್ ಆಗಿದೆ. ಇದರರ್ಥ ತಲಾ ಆದಾಯವು ಐದು ಪಟ್ಟು ಹೆಚ್ಚಾಗಬೇಕಾಗುತ್ತದೆ" ಎಂದು ಅವರು ವಿವರಿಸಿದರು.

"ವಿನಿಮಯ ದರವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಂಡರೆ ಅಥವಾ ಬೆಲೆಗಳು ಹೆಚ್ಚಾದರೆ ನಾಮಮಾತ್ರ ಆದಾಯ ಹೆಚ್ಚಾಗುತ್ತದೆ. ಆಗ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಹುದು. ಆದ್ದರಿಂದ, ಭಾರತೀಯ ಆರ್ಥಿಕತೆಯ ಡಾಲರ್ ಮೌಲ್ಯದ ಲೆಕ್ಕಾಚಾರವು ನಿಜವಾದ ಬೆಳವಣಿಗೆ, ಹಣದುಬ್ಬರದ ಮಟ್ಟ ಮತ್ತು ವಿನಿಮಯ ದರವನ್ನು ಅವಲಂಬಿಸಿರುತ್ತದೆ" ಎಂದರು.

ಇಂದು ನಡೆದ ಐಸಿಎಫ್ಎಐ 13 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‌ (ಸಿಎಸ್ಐಆರ್) ಮಾಜಿ ಮಹಾನಿರ್ದೇಶಕ ರಘುನಾಥ್ ಅನಂತ್ ಮಶೆಲ್ಕರ್ ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಕುಲಪತಿ ರಂಗರಾಜನ್ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೋಡ್​ನಲ್ಲಿ ಪಾಲ್ಗೊಂಡು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಉಲ್ಲೇಖಿಸಿದ ರಂಗರಾಜನ್, ತಂತ್ರಜ್ಞಾನದ ತ್ವರಿತ ಮತ್ತು ನಿರಂತರ ಬೆಳವಣಿಗೆಯಿಂದ ಮಾದರಿ ಆರ್ಥಿಕ ಬೆಳವಣಿಗೆಯು ಉತ್ತೇಜಿತವಾಗಿದೆ ಎಂದು ಅಭಿಪ್ರಾಯಪಟ್ಟರು. "ಕಳೆದ ಒಂದೂವರೆ ಶತಮಾನ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಸಾಧಿಸಿದ ಬೆಳವಣಿಗೆಯ ಅರ್ಧದಷ್ಟು ತಂತ್ರಜ್ಞಾನದಿಂದಾಗಿಯೇ ಬಂದಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ" ಎಂದು ತಿಳಿಸಿದರು.

"ಸಮಾಜದಲ್ಲಿ ಕೆಳಮಟ್ಟದಲ್ಲಿರುವ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವತ್ತ ಹೆಚ್ಚು ಗಮನ ಹರಿಸಬೇಕು ಮತ್ತು ತಂತ್ರಜ್ಞಾನವು ಬಡ ಜನರಿಗೆ ಕೈಗೆಟುಕುವ ಮತ್ತು ಅವರು ಬಳಸಬುದಾದ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು" ಎಂದು ಮಾಜಿ ಆರ್​ಬಿಐ ಗವರ್ನರ್ ಹೇಳಿದರು.

ಇದನ್ನೂ ಓದಿ: ನೆಕ್ಸಾನ್, ಟಿಯಾಗೊ ಎಲೆಕ್ಟ್ರಿಕ್ ಕಾರುಗಳ ಬೆಲೆ ಕಡಿತಗೊಳಿಸಿದ ಟಾಟಾ ಮೋಟರ್ಸ್​

ಹೈದರಾಬಾದ್: "2047ರ ವೇಳೆಗೆ 13,000 ಡಾಲರ್ ತಲಾ ಆದಾಯ ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ವಾರ್ಷಿಕವಾಗಿ ಶೇ.7ರಿಂದ 8ರಷ್ಟು ಬೆಳವಣಿಗೆ ಸಾಧಿಸುವ ಅಗತ್ಯವಿದೆ" ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದರು. ಅಸಮಾನತೆ ಅಥವಾ ಬಡತನವನ್ನು ಕಡಿಮೆ ಮಾಡಲು ನಾವೀನ್ಯತೆ ಒಂದೇ ಪರಿಹಾರವಲ್ಲ ಎಂದು ಪ್ರತಿಪಾದಿಸಿದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ರಂಗರಾಜನ್, "ವೇಗದ ಬೆಳವಣಿಗೆಯ ದರದ ಜೊತೆಗೆ, ದೇಶದ ಜನತೆಗೆ ನಗದು ಮತ್ತು ಮೂಲ ಆದಾಯ ಸಬ್ಸಿಡಿಗಳಂಥ ಸಾಮಾಜಿಕ ಸುರಕ್ಷತಾ ಕ್ರಮಗಳು ಬೇಕಾಗಬಹುದು" ಎಂದು ತಿಳಿಸಿದರು.

"ಶೇ.7ರಿಂದ 8ರ ನಡುವಿನ ವಾಸ್ತವಿಕ ಬೆಳವಣಿಗೆಯು ದೇಶವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಹತ್ತಿರ ಕೊಂಡೊಯ್ಯುತ್ತದೆ. ಏಕೆಂದರೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ವ್ಯಾಖ್ಯಾನದ ಪ್ರಕಾರ ತಲಾ ಆದಾಯ 13,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕಾಗುತ್ತದೆ. ಭಾರತದ ತಲಾ ಆದಾಯ ಈಗ 2,700 ಡಾಲರ್ ಆಗಿದೆ. ಇದರರ್ಥ ತಲಾ ಆದಾಯವು ಐದು ಪಟ್ಟು ಹೆಚ್ಚಾಗಬೇಕಾಗುತ್ತದೆ" ಎಂದು ಅವರು ವಿವರಿಸಿದರು.

"ವಿನಿಮಯ ದರವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಂಡರೆ ಅಥವಾ ಬೆಲೆಗಳು ಹೆಚ್ಚಾದರೆ ನಾಮಮಾತ್ರ ಆದಾಯ ಹೆಚ್ಚಾಗುತ್ತದೆ. ಆಗ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಹುದು. ಆದ್ದರಿಂದ, ಭಾರತೀಯ ಆರ್ಥಿಕತೆಯ ಡಾಲರ್ ಮೌಲ್ಯದ ಲೆಕ್ಕಾಚಾರವು ನಿಜವಾದ ಬೆಳವಣಿಗೆ, ಹಣದುಬ್ಬರದ ಮಟ್ಟ ಮತ್ತು ವಿನಿಮಯ ದರವನ್ನು ಅವಲಂಬಿಸಿರುತ್ತದೆ" ಎಂದರು.

ಇಂದು ನಡೆದ ಐಸಿಎಫ್ಎಐ 13 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‌ (ಸಿಎಸ್ಐಆರ್) ಮಾಜಿ ಮಹಾನಿರ್ದೇಶಕ ರಘುನಾಥ್ ಅನಂತ್ ಮಶೆಲ್ಕರ್ ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಕುಲಪತಿ ರಂಗರಾಜನ್ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೋಡ್​ನಲ್ಲಿ ಪಾಲ್ಗೊಂಡು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಉಲ್ಲೇಖಿಸಿದ ರಂಗರಾಜನ್, ತಂತ್ರಜ್ಞಾನದ ತ್ವರಿತ ಮತ್ತು ನಿರಂತರ ಬೆಳವಣಿಗೆಯಿಂದ ಮಾದರಿ ಆರ್ಥಿಕ ಬೆಳವಣಿಗೆಯು ಉತ್ತೇಜಿತವಾಗಿದೆ ಎಂದು ಅಭಿಪ್ರಾಯಪಟ್ಟರು. "ಕಳೆದ ಒಂದೂವರೆ ಶತಮಾನ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಸಾಧಿಸಿದ ಬೆಳವಣಿಗೆಯ ಅರ್ಧದಷ್ಟು ತಂತ್ರಜ್ಞಾನದಿಂದಾಗಿಯೇ ಬಂದಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ" ಎಂದು ತಿಳಿಸಿದರು.

"ಸಮಾಜದಲ್ಲಿ ಕೆಳಮಟ್ಟದಲ್ಲಿರುವ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವತ್ತ ಹೆಚ್ಚು ಗಮನ ಹರಿಸಬೇಕು ಮತ್ತು ತಂತ್ರಜ್ಞಾನವು ಬಡ ಜನರಿಗೆ ಕೈಗೆಟುಕುವ ಮತ್ತು ಅವರು ಬಳಸಬುದಾದ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು" ಎಂದು ಮಾಜಿ ಆರ್​ಬಿಐ ಗವರ್ನರ್ ಹೇಳಿದರು.

ಇದನ್ನೂ ಓದಿ: ನೆಕ್ಸಾನ್, ಟಿಯಾಗೊ ಎಲೆಕ್ಟ್ರಿಕ್ ಕಾರುಗಳ ಬೆಲೆ ಕಡಿತಗೊಳಿಸಿದ ಟಾಟಾ ಮೋಟರ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.