ETV Bharat / bharat

ಹೈದರಾಬಾದ್​: ಮೂಸಿ ನದಿ ತೀರದ ಅಕ್ರಮ ಕಟ್ಟಡಗಳ ತೆರವಿಗೆ ಸಮೀಕ್ಷೆ ಆರಂಭ - Musi River Front Development

author img

By ETV Bharat Karnataka Team

Published : Sep 26, 2024, 2:21 PM IST

ಪ್ರಾಥಮಿಕ ಸಮೀಕ್ಷೆಯ ಪ್ರಕಾರ ನದಿಪಾತ್ರದಲ್ಲಿ ಅಕ್ರಮವಾಗಿ 2,116 ಕಟ್ಟಡ ಮತ್ತು ಬಫರ್​ ಝೋನ್​ನಲ್ಲಿ 7,850 ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

survey of illegal houses and other structures for demolition of encroachments along Musi River
ಮೂಸಿ ನದಿ (IANS)

ಹೈದರಾಬಾದ್​: ಇಲ್ಲಿನ ಮೂಸಿ ನದಿಪಾತ್ರದಲ್ಲಿ ಅಕ್ರಮವಾಗಿ ಕಟ್ಟಲಾದ ಮನೆಗಳು ಮತ್ತು ಇತರೆ ಕಟ್ಟಡಗಳ ತೆರವಿಗೆ ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್​ ಪ್ರಾಜೆಕ್ಟ್​ ಅಧಿಕಾರಿಗಳು ಸಮೀಕ್ಷಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ಬಳಿಕ ನದಿಪಾತ್ರದ ಕುಟುಂಬಗಳಿಗೆ ಪರಿಹಾರ ಕಾರ್ಯ ನಡೆಯಲಿದೆ. ಅವರನ್ನು ಮತ್ತೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್​ ಪ್ರಾಜೆಕ್ಟ್‌​ ಅಡಿಯಲ್ಲಿ ರಾಜ್ಯ ಸರ್ಕಾರ ನದಿಪಾತ್ರದ ಬಡ ಕುಟುಂಬಗಳಿಗೆ ಎರಡು ಕೋಣೆಯ ಮನೆ ನಿರ್ಮಾಣ ಮಾಡಲಿದ್ದು ಮತ್ತು ಅರ್ಹ ಬಡವರಿಗೆ ಪುನರ್ವಸತೀಕರಣ ಮಾಡಲಿದೆ ಎಂದು ಸಿಎಂ ರೇವಂತ್​ ರೆಡ್ಡಿ ಇತ್ತೀಚಿಗೆ ತಿಳಿಸಿದ್ದರು. ಸರ್ಕಾರದ ಈ ಹೇಳಿಕೆಯ ಬೆನ್ನಲ್ಲೇ ಅಧಿಕಾರಿಗಳು ಸಮೀಕ್ಷೆಗೆ ಮುಂದಾಗಿದ್ದಾರೆ.

ಹೈದರಾಬಾದ್​, ರಂಗಾರೆಡ್ಡಿ ಮತ್ತು ಮೆದ್ಚಲ್​ ಮಲ್ಕಜ್ಗಿರಿ ಜಿಲ್ಲೆಯಲ್ಲಿನ ಜಲಾನಯನ ಪ್ರದೇಶ ಮತ್ತು ಬಫರ್​ ಝೋನ್​ನಲ್ಲಿನ ಅತಿಕ್ರಮಣ ಸಮೀಕ್ಷೆ ನಡೆಸಲು ಪೊಲೀಸರೊಂದಿಗೆ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳ ತಂಡ ನದಿತೀರದ ಮತ್ತು ಬಫರ್​ ಝೋನ್​ನಲ್ಲಿನ ಎಲ್ಲ ಅತಿಕ್ರಮಣ ಕಟ್ಟಡ ವಿನ್ಯಾಸವನ್ನು ಗುರುತಿಸಲಿದ್ದಾರೆ.

ಸಮೀಕ್ಷೆಯು ಲಾಂಗರ್​ ಹೌಸ್​, ಚಂದೇರ್​ಘಾಟ್​, ಮುಸಾ ನಗರ್​, ಶಂಕರ್​ ನಗರ್​ ಮತ್ತಿತರ ಪ್ರದೇಶಗಳಲ್ಲಿ ಸಾಗಲಿದೆ. ಒಟ್ಟು 15 ತಂಡಗಳಿಂದ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ತಂಡ ರಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತು ಐದು ತಂಡ ಮೆದ್ಚಲ್​ ಮಲ್ಕಜ್ಗಿರಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಿದೆ. ಈ ವೇಳೆ ಅಧಿಕಾರಿಗಳು ನದಿಪಾತ್ರದ ನಿವಾಸಿಗಳ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.

ಇನ್ನೂ ಕೆಲವು ಸ್ಥಳಗಳಲ್ಲಿ ನಿವಾಸಿಗಳು ಅಧಿಕಾರಿಗಳ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ವಸತಿ ನೋಂದಣಿ ದಾಖಲೆ ತೋರಿಸಿ, ದಶಕಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ ಎಂದರು ಹೇಳಿದರು. ಅಷ್ಟೇ ಅಲ್ಲದೇ ಆಸ್ತಿ ತೆರಿಗೆ, ವಿದ್ಯುತ್​, ನೀರಿನ ಬಿಲ್​ ತೋರಿಸಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ನದಿ ತೀರದಲ್ಲಿ ಅತಿಕ್ರಮಣ ನಡೆಸಿದ ಕುಟುಂಬಗಳಿಗೆ ಅರ್ಹತೆಯ ಆಧಾರದ ಮೇಲೆ ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೊರೇಷನ್​ (ಜಿಎಚ್​ಎಂಸಿ) ಪ್ರದೇಶದಲ್ಲಿ 2 ಬಿಎಚ್​ಕೆಯ ಮನೆ ನೀಡಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳು ನದಿಪಾತ್ರದಲ್ಲಿ ಅತಿಕ್ರಮಣವಾಗಿರುವ 10 ಸಾವಿರಕ್ಕೂ ಹೆಚ್ಚು ವಸತಿ ಮತ್ತು ವಾಣಿಜ್ಯ ಕಟ್ಟಡ ತೆರವು ಮಾಡಲಿದ್ದಾರೆ. ಪ್ರಾಥಮಿಕ ಸಮೀಕ್ಷೆಯನ್ನು ಕಂದಾಯ ಅಧಿಕಾರಿಗಳು ನಡೆಸಿದ್ದು, ಇದರಲ್ಲಿ ನದಿಪಾತ್ರದಲ್ಲಿ 2,116 ಕಟ್ಟಡ ಮತ್ತು ಬಫರ್​ ಝೋನ್​ನಲ್ಲಿ 7,850 ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಿರುವುದು ಗೊತ್ತಾಗಿದೆ.

ಈ ಕುರಿತು ಮಾತನಾಡಿರುವ ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್‌ ಕಾರ್ಪೊರೇಷನ್​ನ ನಿರ್ವಹಣಾ ನಿರ್ದೇಶಕ ಹಾಗೂ ಮುನ್ಸಿಪಲ್​ ಆಡಳಿತ ಮತ್ತು ನಗರಾಭಿವೃದ್ದಿಯ ಪ್ರಿನ್ಸಿಪಾಲ್​ ಕಾರ್ಯದರ್ಶಿ ಧನಕಿಶೋರ್, ಸರ್ಕಾರ ಅತಿಕ್ರಮಣ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಯೋಜನೆ ಸಿದ್ಧಪಡಿಸಿದೆ ಎಂದರು.(ಐಎಎನ್​ಎಸ್​)

ಇದನ್ನೂ ಓದಿ: ಅರುಣಾಚಲ, ನಾಗಾಲ್ಯಾಂಡ್​ನಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮತ್ತೆ 6 ತಿಂಗಳು ವಿಸ್ತರಣೆ

ಹೈದರಾಬಾದ್​: ಇಲ್ಲಿನ ಮೂಸಿ ನದಿಪಾತ್ರದಲ್ಲಿ ಅಕ್ರಮವಾಗಿ ಕಟ್ಟಲಾದ ಮನೆಗಳು ಮತ್ತು ಇತರೆ ಕಟ್ಟಡಗಳ ತೆರವಿಗೆ ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್​ ಪ್ರಾಜೆಕ್ಟ್​ ಅಧಿಕಾರಿಗಳು ಸಮೀಕ್ಷಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ಬಳಿಕ ನದಿಪಾತ್ರದ ಕುಟುಂಬಗಳಿಗೆ ಪರಿಹಾರ ಕಾರ್ಯ ನಡೆಯಲಿದೆ. ಅವರನ್ನು ಮತ್ತೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್​ ಪ್ರಾಜೆಕ್ಟ್‌​ ಅಡಿಯಲ್ಲಿ ರಾಜ್ಯ ಸರ್ಕಾರ ನದಿಪಾತ್ರದ ಬಡ ಕುಟುಂಬಗಳಿಗೆ ಎರಡು ಕೋಣೆಯ ಮನೆ ನಿರ್ಮಾಣ ಮಾಡಲಿದ್ದು ಮತ್ತು ಅರ್ಹ ಬಡವರಿಗೆ ಪುನರ್ವಸತೀಕರಣ ಮಾಡಲಿದೆ ಎಂದು ಸಿಎಂ ರೇವಂತ್​ ರೆಡ್ಡಿ ಇತ್ತೀಚಿಗೆ ತಿಳಿಸಿದ್ದರು. ಸರ್ಕಾರದ ಈ ಹೇಳಿಕೆಯ ಬೆನ್ನಲ್ಲೇ ಅಧಿಕಾರಿಗಳು ಸಮೀಕ್ಷೆಗೆ ಮುಂದಾಗಿದ್ದಾರೆ.

ಹೈದರಾಬಾದ್​, ರಂಗಾರೆಡ್ಡಿ ಮತ್ತು ಮೆದ್ಚಲ್​ ಮಲ್ಕಜ್ಗಿರಿ ಜಿಲ್ಲೆಯಲ್ಲಿನ ಜಲಾನಯನ ಪ್ರದೇಶ ಮತ್ತು ಬಫರ್​ ಝೋನ್​ನಲ್ಲಿನ ಅತಿಕ್ರಮಣ ಸಮೀಕ್ಷೆ ನಡೆಸಲು ಪೊಲೀಸರೊಂದಿಗೆ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳ ತಂಡ ನದಿತೀರದ ಮತ್ತು ಬಫರ್​ ಝೋನ್​ನಲ್ಲಿನ ಎಲ್ಲ ಅತಿಕ್ರಮಣ ಕಟ್ಟಡ ವಿನ್ಯಾಸವನ್ನು ಗುರುತಿಸಲಿದ್ದಾರೆ.

ಸಮೀಕ್ಷೆಯು ಲಾಂಗರ್​ ಹೌಸ್​, ಚಂದೇರ್​ಘಾಟ್​, ಮುಸಾ ನಗರ್​, ಶಂಕರ್​ ನಗರ್​ ಮತ್ತಿತರ ಪ್ರದೇಶಗಳಲ್ಲಿ ಸಾಗಲಿದೆ. ಒಟ್ಟು 15 ತಂಡಗಳಿಂದ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ತಂಡ ರಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತು ಐದು ತಂಡ ಮೆದ್ಚಲ್​ ಮಲ್ಕಜ್ಗಿರಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಿದೆ. ಈ ವೇಳೆ ಅಧಿಕಾರಿಗಳು ನದಿಪಾತ್ರದ ನಿವಾಸಿಗಳ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.

ಇನ್ನೂ ಕೆಲವು ಸ್ಥಳಗಳಲ್ಲಿ ನಿವಾಸಿಗಳು ಅಧಿಕಾರಿಗಳ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ವಸತಿ ನೋಂದಣಿ ದಾಖಲೆ ತೋರಿಸಿ, ದಶಕಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ ಎಂದರು ಹೇಳಿದರು. ಅಷ್ಟೇ ಅಲ್ಲದೇ ಆಸ್ತಿ ತೆರಿಗೆ, ವಿದ್ಯುತ್​, ನೀರಿನ ಬಿಲ್​ ತೋರಿಸಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ನದಿ ತೀರದಲ್ಲಿ ಅತಿಕ್ರಮಣ ನಡೆಸಿದ ಕುಟುಂಬಗಳಿಗೆ ಅರ್ಹತೆಯ ಆಧಾರದ ಮೇಲೆ ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೊರೇಷನ್​ (ಜಿಎಚ್​ಎಂಸಿ) ಪ್ರದೇಶದಲ್ಲಿ 2 ಬಿಎಚ್​ಕೆಯ ಮನೆ ನೀಡಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳು ನದಿಪಾತ್ರದಲ್ಲಿ ಅತಿಕ್ರಮಣವಾಗಿರುವ 10 ಸಾವಿರಕ್ಕೂ ಹೆಚ್ಚು ವಸತಿ ಮತ್ತು ವಾಣಿಜ್ಯ ಕಟ್ಟಡ ತೆರವು ಮಾಡಲಿದ್ದಾರೆ. ಪ್ರಾಥಮಿಕ ಸಮೀಕ್ಷೆಯನ್ನು ಕಂದಾಯ ಅಧಿಕಾರಿಗಳು ನಡೆಸಿದ್ದು, ಇದರಲ್ಲಿ ನದಿಪಾತ್ರದಲ್ಲಿ 2,116 ಕಟ್ಟಡ ಮತ್ತು ಬಫರ್​ ಝೋನ್​ನಲ್ಲಿ 7,850 ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಿರುವುದು ಗೊತ್ತಾಗಿದೆ.

ಈ ಕುರಿತು ಮಾತನಾಡಿರುವ ಮೂಸಿ ರಿವರ್​ಫ್ರಂಟ್​ ಡೆವಲಪ್‌ಮೆಂಟ್‌ ಕಾರ್ಪೊರೇಷನ್​ನ ನಿರ್ವಹಣಾ ನಿರ್ದೇಶಕ ಹಾಗೂ ಮುನ್ಸಿಪಲ್​ ಆಡಳಿತ ಮತ್ತು ನಗರಾಭಿವೃದ್ದಿಯ ಪ್ರಿನ್ಸಿಪಾಲ್​ ಕಾರ್ಯದರ್ಶಿ ಧನಕಿಶೋರ್, ಸರ್ಕಾರ ಅತಿಕ್ರಮಣ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಯೋಜನೆ ಸಿದ್ಧಪಡಿಸಿದೆ ಎಂದರು.(ಐಎಎನ್​ಎಸ್​)

ಇದನ್ನೂ ಓದಿ: ಅರುಣಾಚಲ, ನಾಗಾಲ್ಯಾಂಡ್​ನಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮತ್ತೆ 6 ತಿಂಗಳು ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.