ETV Bharat / bharat

ಇದು ನನ್ನ ಹೊಸ ಪಯಣ, ನೀವೇ ನನ್ನ ಮಾರ್ಗದರ್ಶಿಗಳು; ಪ್ರಿಯಾಂಕಾ ಗಾಂಧಿ

ನನ್ನ ಸಹೋದರನ ವಿರುದ್ಧ ಜಗತ್ತೇ ತಿರುಗಿ ಬಿದ್ದಾಗ ನೀವು ಅವನ ಪರವಾಗಿ ನಿಂತಿರಿ. ನನ್ನ ಇಡೀ ಕುಟುಂಬ ನಿಮಗೆ ಕೃತಜ್ಞವಾಗಿರುತ್ತದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

priyanka-gandi-speech-in-waynad-this-is-new-journey-for-me-you-are-my-guides
ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್​ ಗಾಂಧಿ (ಎಎನ್​ಐ)
author img

By PTI

Published : 2 hours ago

ವಯನಾಡು (ಕೇರಳ): ವಯನಾಡು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್​ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ನನ್ನ ಹೊಸ ಪ್ರಯಾಣ ಆರಂಭವಾಗಿದ್ದು, ನನಗೆ ಮಾರ್ಗದರ್ಶಕರು ನೀವೇ ಎಂದು ವಯನಾಡಿನ ಜನಕ್ಕೆ ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಮುನ್ನ ತಮ್ಮ ಚೊಚ್ಚಲ ಭಾಷಣ ಮಾಡಿದ ಅವರು, 'ಇದು ನನ್ನ ಹೊಸ ಪಯಣ. ನೀವೇ ನನ್ನ ಮಾರ್ಗದರ್ಶಕರು. ಇದು ನನಗೆ ಜವಾಬ್ದಾರಿ ಕೂಡ. ನಮ್ಮ ಕುಟುಂಬ ನಡುವಿನ ನಂಬಿಕೆಯ ಸಂಕೇತ ನೀವು. ಇಬ್ಬರು ಮಕ್ಕಳ ತಾಯಿಯಾಗಿರುವ ನಾನು ಅವರ ಅವಶ್ಯಕತೆ ಇದ್ದಾಗಲೆಲ್ಲ ಜೊತೆಯಾಗಿದ್ದೇನೆ. ಇದೀಗ ನಿಮ್ಮ ಅವಶ್ಯಕತೆಗೆ ಜೊತೆಯಾಗುತ್ತಿದ್ದೇನೆ. ನಿಮಗಾಗಿ ನಾನು ಹೋರಾಡುತ್ತೇನೆ. ನಿಮ್ಮ ಹೋರಾಟದಲ್ಲಿ ನಾನು ಮುಂದಾಗುತ್ತೇನೆ. ನಿಮ್ಮನ್ನು ನಾನು ಬೀಳದಂತೆ ಕಾಪಾಡುತ್ತೇನೆ. ಯುಡಿಎಫ್​ ಅಭ್ಯರ್ಥಿಯಾಗಿ ನನ್ನನ್ನು ನೀವು ಸ್ವೀಕಾರ ಮಾಡಿದ್ದಕ್ಕೆ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ' ಎಂದರು.

35 ವರ್ಷದ ರಾಜಕೀಯ ಅನುಭವ: 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ 1989ರಲ್ಲಿ ನನ್ನ ತಂದೆ ಜೊತೆಗೆ ಪ್ರಚಾರ ಆರಂಭಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿ ಮತ್ತು ಸಹೋದರನಿಗಗಾಗಿ ಅನೇಕ ಪ್ರಚಾರ ನಡೆಸಿದ್ದು, 35 ವರ್ಷದ ರಾಜಕೀಯ ಅನುಭವ ನನಗಿದೆ.

ಅವಕಾಶ ನೀಡಿದ್ದಕ್ಕೆ ದಶಕಗಳ ಬಳಿಕ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪ್ರಿಯಾಂಕಾ ಗಾಂಧಿ ಪರ ಪ್ರಚಾರದಲ್ಲಿ ಭಾಗಿಯಾದರು. ಈ ಕುರಿತು ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನನ್ನ ತಾಯಿ ನನ್ನ ಪರ ಪ್ರಚಾರಕ್ಕೆ ಆಗಮಿಸಿದ್ದು, ಇದೊಂದು ವಿಭಿನ್ನ ಅನುಭವ ಆಗಿದೆ. ಯುಡಿಎಫ್​ ಅಭ್ಯರ್ಥಿಯಾಗಿ ಕಾಂಗ್ರೆಸ್​ ಅಧ್ಯಕ್ಷರು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವ ಆಗಿರಲಿದೆ ಎಂದರು.

ಕಳೆದ ಕೆಲವು ತಿಂಗಳ ಹಿಂದೆ ನಾನು ಮುಂಡಕ್ಕೈ ಮತ್ತು ಚುರಮಾಲಾಗೆ ನನ್ನ ಸಹೋದರನೊಂದಿಗೆ ಆಗಮಿಸಿದಾಗ, ಅಲ್ಲಿನ ಭೀಕರತೆಯನ್ನು ಕಣ್ಣಾರೆ ಕಂಡೆ. ಮಕ್ಕಳು ತಮ್ಮ ಸಂಪೂರ್ಣ ಕುಟುಂಬವನ್ನೇ ಕಳೆದುಕೊಂಡರು. ಭೂ ಕುಸಿತದಲ್ಲಿ ಎಲ್ಲವನ್ನು ಕಳೆದುಕೊಂಡವರನ್ನು ಭೇಟಿ ನೀಡಿದೆ. ಈ ವೇಳೆ ಜನರು ತಮ್ಮ ನೋವನ್ನು ಮರೆತು ಒಬ್ಬರಿಗೆ ಒಬ್ಬರು ಸಹಾಯಕ್ಕೆ ಮುಂದಾದರು. ನಿಮ್ಮ ಈ ಧೈರ್ಯದ ಉತ್ಸಾಹ ನನ್ನನ್ನು ಕಲುಕಿತು. ನಿಮ್ಮ ಸಮುದಾಯದ, ಕುಟುಂಬದ ಭಾಗವಾಗುವುದು ನನಗೆ ಹೆಮ್ಮೆಯಾಗಲಿದೆ ಎಂದು ತಿಳಿಸಿದರು.

ಮೌಲ್ಯಗಳಿಂದಲೇ ಹೋರಾಟ: ಇದೀಗ ನಾವು ವಿಚಿತ್ರ ಸಮಯದಲ್ಲಿದ್ದೇವೆ. ದ್ವೇಷವನ್ನು ಹರಡುವ, ಜನರನ್ನು ವಿಭಾಗಿಸುವ ಅಧಿಕಾರ ಹೊಂದಿರುವವರ ಸಮಯದಲ್ಲಿ ನಾವಿದ್ದೇವೆ. ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ದೇಶದ ನಿರ್ಮಾಣದ ಮೌಲ್ಯ ಇದಲ್ಲ. ಆ ವೇಳೆ ನಾವು ಸತ್ಯಮೇವ ಜಯತೆ ಎಲ್ಲಾ ಧಾರ್ಮಿಕ ಮೌಲ್ಯ, ಸತ್ಯ, ನ್ಯಾಯ ಮತ್ತು ಸಮಾನತೆಗಾಗಿ ನಾವು ಹೋರಾಡುತ್ತಿದ್ದೇವೆ. ಈ ಮೌಲ್ಯಗಳೇ ನನ್ನ ಸಹೋದರನಿಗೆ ದೇಶಾದ್ಯಂತ 8,000 ಕಿ.ಮೀ ಸಾಗುವಂತೆ ಮಾಡಿತು. ನಿಮ್ಮ ಬೆಂಬಲವಿಲ್ಲದೆ ಇದನ್ನು ಆತ ಮಾಡಲು ಸಾಧ್ಯವಿರಲಿಲ್ಲ ಎಂದರು.

ನನ್ನ ಸಹೋದರನ ವಿರುದ್ಧ ಜಗತ್ತೇ ತಿರುಗಿ ಬಿದ್ದಾಗ ನೀವು ಅವನ ಪರವಾಗಿ ನಿಂತಿರಿ. ನನ್ನ ಇಡೀ ಕುಟುಂಬ ನಿಮಗೆ ಕೃತಜ್ಞವಾಗಿರುತ್ತದೆ. ಕ್ಷೇತ್ರ ತೊರೆಯುವುದು ಸಹೋದರನಿಗೆ ಬೇಸರದ ಸಂಗತಿಯಾಗಿದೆ. ಆದರೆ, ನಾನು ನಿಮ್ಮ ಮತ್ತು ಅವನ ನಡುವಿನ ಬಂಧನವನ್ನು ಮತ್ತಷ್ಟು ಬಲಗೊಳಿಸುತ್ತೇನೆ ಎಂದು ಮಾತು ನೀಡುತ್ತೇನೆ ಎಂದರು. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ: ವಯನಾಡಿನಲ್ಲಿ ಬೃಹತ್​ ರೋಡ್​ ಶೋ ಬಳಿಕ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

ವಯನಾಡು (ಕೇರಳ): ವಯನಾಡು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್​ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ನನ್ನ ಹೊಸ ಪ್ರಯಾಣ ಆರಂಭವಾಗಿದ್ದು, ನನಗೆ ಮಾರ್ಗದರ್ಶಕರು ನೀವೇ ಎಂದು ವಯನಾಡಿನ ಜನಕ್ಕೆ ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಮುನ್ನ ತಮ್ಮ ಚೊಚ್ಚಲ ಭಾಷಣ ಮಾಡಿದ ಅವರು, 'ಇದು ನನ್ನ ಹೊಸ ಪಯಣ. ನೀವೇ ನನ್ನ ಮಾರ್ಗದರ್ಶಕರು. ಇದು ನನಗೆ ಜವಾಬ್ದಾರಿ ಕೂಡ. ನಮ್ಮ ಕುಟುಂಬ ನಡುವಿನ ನಂಬಿಕೆಯ ಸಂಕೇತ ನೀವು. ಇಬ್ಬರು ಮಕ್ಕಳ ತಾಯಿಯಾಗಿರುವ ನಾನು ಅವರ ಅವಶ್ಯಕತೆ ಇದ್ದಾಗಲೆಲ್ಲ ಜೊತೆಯಾಗಿದ್ದೇನೆ. ಇದೀಗ ನಿಮ್ಮ ಅವಶ್ಯಕತೆಗೆ ಜೊತೆಯಾಗುತ್ತಿದ್ದೇನೆ. ನಿಮಗಾಗಿ ನಾನು ಹೋರಾಡುತ್ತೇನೆ. ನಿಮ್ಮ ಹೋರಾಟದಲ್ಲಿ ನಾನು ಮುಂದಾಗುತ್ತೇನೆ. ನಿಮ್ಮನ್ನು ನಾನು ಬೀಳದಂತೆ ಕಾಪಾಡುತ್ತೇನೆ. ಯುಡಿಎಫ್​ ಅಭ್ಯರ್ಥಿಯಾಗಿ ನನ್ನನ್ನು ನೀವು ಸ್ವೀಕಾರ ಮಾಡಿದ್ದಕ್ಕೆ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ' ಎಂದರು.

35 ವರ್ಷದ ರಾಜಕೀಯ ಅನುಭವ: 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ 1989ರಲ್ಲಿ ನನ್ನ ತಂದೆ ಜೊತೆಗೆ ಪ್ರಚಾರ ಆರಂಭಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿ ಮತ್ತು ಸಹೋದರನಿಗಗಾಗಿ ಅನೇಕ ಪ್ರಚಾರ ನಡೆಸಿದ್ದು, 35 ವರ್ಷದ ರಾಜಕೀಯ ಅನುಭವ ನನಗಿದೆ.

ಅವಕಾಶ ನೀಡಿದ್ದಕ್ಕೆ ದಶಕಗಳ ಬಳಿಕ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪ್ರಿಯಾಂಕಾ ಗಾಂಧಿ ಪರ ಪ್ರಚಾರದಲ್ಲಿ ಭಾಗಿಯಾದರು. ಈ ಕುರಿತು ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನನ್ನ ತಾಯಿ ನನ್ನ ಪರ ಪ್ರಚಾರಕ್ಕೆ ಆಗಮಿಸಿದ್ದು, ಇದೊಂದು ವಿಭಿನ್ನ ಅನುಭವ ಆಗಿದೆ. ಯುಡಿಎಫ್​ ಅಭ್ಯರ್ಥಿಯಾಗಿ ಕಾಂಗ್ರೆಸ್​ ಅಧ್ಯಕ್ಷರು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವ ಆಗಿರಲಿದೆ ಎಂದರು.

ಕಳೆದ ಕೆಲವು ತಿಂಗಳ ಹಿಂದೆ ನಾನು ಮುಂಡಕ್ಕೈ ಮತ್ತು ಚುರಮಾಲಾಗೆ ನನ್ನ ಸಹೋದರನೊಂದಿಗೆ ಆಗಮಿಸಿದಾಗ, ಅಲ್ಲಿನ ಭೀಕರತೆಯನ್ನು ಕಣ್ಣಾರೆ ಕಂಡೆ. ಮಕ್ಕಳು ತಮ್ಮ ಸಂಪೂರ್ಣ ಕುಟುಂಬವನ್ನೇ ಕಳೆದುಕೊಂಡರು. ಭೂ ಕುಸಿತದಲ್ಲಿ ಎಲ್ಲವನ್ನು ಕಳೆದುಕೊಂಡವರನ್ನು ಭೇಟಿ ನೀಡಿದೆ. ಈ ವೇಳೆ ಜನರು ತಮ್ಮ ನೋವನ್ನು ಮರೆತು ಒಬ್ಬರಿಗೆ ಒಬ್ಬರು ಸಹಾಯಕ್ಕೆ ಮುಂದಾದರು. ನಿಮ್ಮ ಈ ಧೈರ್ಯದ ಉತ್ಸಾಹ ನನ್ನನ್ನು ಕಲುಕಿತು. ನಿಮ್ಮ ಸಮುದಾಯದ, ಕುಟುಂಬದ ಭಾಗವಾಗುವುದು ನನಗೆ ಹೆಮ್ಮೆಯಾಗಲಿದೆ ಎಂದು ತಿಳಿಸಿದರು.

ಮೌಲ್ಯಗಳಿಂದಲೇ ಹೋರಾಟ: ಇದೀಗ ನಾವು ವಿಚಿತ್ರ ಸಮಯದಲ್ಲಿದ್ದೇವೆ. ದ್ವೇಷವನ್ನು ಹರಡುವ, ಜನರನ್ನು ವಿಭಾಗಿಸುವ ಅಧಿಕಾರ ಹೊಂದಿರುವವರ ಸಮಯದಲ್ಲಿ ನಾವಿದ್ದೇವೆ. ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ದೇಶದ ನಿರ್ಮಾಣದ ಮೌಲ್ಯ ಇದಲ್ಲ. ಆ ವೇಳೆ ನಾವು ಸತ್ಯಮೇವ ಜಯತೆ ಎಲ್ಲಾ ಧಾರ್ಮಿಕ ಮೌಲ್ಯ, ಸತ್ಯ, ನ್ಯಾಯ ಮತ್ತು ಸಮಾನತೆಗಾಗಿ ನಾವು ಹೋರಾಡುತ್ತಿದ್ದೇವೆ. ಈ ಮೌಲ್ಯಗಳೇ ನನ್ನ ಸಹೋದರನಿಗೆ ದೇಶಾದ್ಯಂತ 8,000 ಕಿ.ಮೀ ಸಾಗುವಂತೆ ಮಾಡಿತು. ನಿಮ್ಮ ಬೆಂಬಲವಿಲ್ಲದೆ ಇದನ್ನು ಆತ ಮಾಡಲು ಸಾಧ್ಯವಿರಲಿಲ್ಲ ಎಂದರು.

ನನ್ನ ಸಹೋದರನ ವಿರುದ್ಧ ಜಗತ್ತೇ ತಿರುಗಿ ಬಿದ್ದಾಗ ನೀವು ಅವನ ಪರವಾಗಿ ನಿಂತಿರಿ. ನನ್ನ ಇಡೀ ಕುಟುಂಬ ನಿಮಗೆ ಕೃತಜ್ಞವಾಗಿರುತ್ತದೆ. ಕ್ಷೇತ್ರ ತೊರೆಯುವುದು ಸಹೋದರನಿಗೆ ಬೇಸರದ ಸಂಗತಿಯಾಗಿದೆ. ಆದರೆ, ನಾನು ನಿಮ್ಮ ಮತ್ತು ಅವನ ನಡುವಿನ ಬಂಧನವನ್ನು ಮತ್ತಷ್ಟು ಬಲಗೊಳಿಸುತ್ತೇನೆ ಎಂದು ಮಾತು ನೀಡುತ್ತೇನೆ ಎಂದರು. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ: ವಯನಾಡಿನಲ್ಲಿ ಬೃಹತ್​ ರೋಡ್​ ಶೋ ಬಳಿಕ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.