ETV Bharat / bharat

ಮದುವೆ ಮುಗಿಸಿ ಮರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ಸಾವು - MADHYA PRADESH ACCIDENT

ಮದುವೆ ಮುಗಿಸಿ ಮರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

bhind-road-accident-5-died-dumper-truck-smashes-loading-vehicle
ಮಧ್ಯ ಪ್ರದೇಶದ ಭೀಂಡ್‌ನಲ್ಲಿ ಭೀಕರ ರಸ್ತೆ ಅಪಘಾತ (IANS)
author img

By ETV Bharat Karnataka Team

Published : Feb 18, 2025, 11:29 AM IST

ಭೀಂಡ್​(ಮಧ್ಯ ಪ್ರದೇಶ): ಡಂಪರ್​ ಟ್ರಕ್‌ವೊಂದು ನಿಯಂತ್ರಣ ಕಳೆದುಕೊಂಡು ವ್ಯಾನ್​ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಮಧ್ಯ ಪ್ರದೇಶದ ಭೀಂಡ್​ ಜಿಲ್ಲೆಯಲ್ಲಿ ಸಂಭವಿಸಿತು.

ಮದುವೆ ಸಂಭ್ರಮ ಮುಗಿಸಿ ವ್ಯಾನ್​ನಲ್ಲಿ 8 ಮಂದಿ ವಾಪಸಾಗುತ್ತಿದ್ದರು. ಭೀಂಡ್‌ನ ಜವಾಹರಪುರ ಗ್ರಾಮದ ಬಳಿ ಮುಂಜಾನೆ 5 ಗಂಟೆಗೆ ರಸ್ತೆ ಬದಿಯಲ್ಲಿ ವ್ಯಾನ್‌ ನಿಲ್ಲಿಸಿದ್ದರು. ಕೆಲವರು ವಾಹನದಿಂದ ಇಳಿದು ರಸ್ತೆ ಬದಿ ನಿಂತಿದ್ದರೆ, ಇನ್ನು ಕೆಲವರು ವ್ಯಾನ್​ನಲ್ಲೇ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಡಂಪರ್​ ಟ್ರಕ್​ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು ಎಂದು ಎಸ್​ಪಿ ಅಸಿತ್​ ಯಾದವ್​ ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 7 ಮಂದಿಯನ್ನು ಗ್ವಾಲಿಯರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಸ್ಥರಿಂದ ರಸ್ತೆ ತಡೆ: ಐವರ ಸಾವಿನ ಬೆನ್ನಲ್ಲೇ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ರಸ್ತೆ ಅಗಲೀಕರಣ ಹಾಗೂ ಆಡಳಿತ ದೋಷದ ಕುರಿತು ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

24 ಗಂಟೆಯಲ್ಲಿ ಎರಡನೇ ಭೀಕರ ಅಪಘಾತ: ಈ ಪ್ರದೇಶದಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ದುರಂತ ಇದು. ಇಲ್ಲಿನ ಕಿರಿದಾದ ರಸ್ತೆಗಳೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಭಾನುವಾರ ಮದುವೆ ಮುಗಿಸಿ ಮರಳುತ್ತಿದ್ದ ಯುವಕನೊಬ್ಬನಿಗೆ ಟ್ರಕ್ ಗುದ್ದಿ, ಆತ ಭೀಕರವಾಗಿ ಸಾವನ್ನಪ್ಪಿದ್ದ. ಈ ಘಟನೆಯಿಂದಾಗಿ ಜವಾಹರಪುರ ಗ್ರಾಮದ ಬಾಸ್ ಹೆದ್ದಾರಿಯ ಎರಡೂ ಬದಿಗಳಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: ಕಾಲ್ತುಳಿತದ ನಂತರ ದೆಹಲಿ ರೈಲು ನಿಲ್ದಾಣದಲ್ಲಿ ಜನದಟ್ಟಣೆ ನಿರ್ವಹಣೆಗೆ CRPF ನಿಯೋಜನೆ

ಭೀಂಡ್​(ಮಧ್ಯ ಪ್ರದೇಶ): ಡಂಪರ್​ ಟ್ರಕ್‌ವೊಂದು ನಿಯಂತ್ರಣ ಕಳೆದುಕೊಂಡು ವ್ಯಾನ್​ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಮಧ್ಯ ಪ್ರದೇಶದ ಭೀಂಡ್​ ಜಿಲ್ಲೆಯಲ್ಲಿ ಸಂಭವಿಸಿತು.

ಮದುವೆ ಸಂಭ್ರಮ ಮುಗಿಸಿ ವ್ಯಾನ್​ನಲ್ಲಿ 8 ಮಂದಿ ವಾಪಸಾಗುತ್ತಿದ್ದರು. ಭೀಂಡ್‌ನ ಜವಾಹರಪುರ ಗ್ರಾಮದ ಬಳಿ ಮುಂಜಾನೆ 5 ಗಂಟೆಗೆ ರಸ್ತೆ ಬದಿಯಲ್ಲಿ ವ್ಯಾನ್‌ ನಿಲ್ಲಿಸಿದ್ದರು. ಕೆಲವರು ವಾಹನದಿಂದ ಇಳಿದು ರಸ್ತೆ ಬದಿ ನಿಂತಿದ್ದರೆ, ಇನ್ನು ಕೆಲವರು ವ್ಯಾನ್​ನಲ್ಲೇ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಡಂಪರ್​ ಟ್ರಕ್​ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು ಎಂದು ಎಸ್​ಪಿ ಅಸಿತ್​ ಯಾದವ್​ ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 7 ಮಂದಿಯನ್ನು ಗ್ವಾಲಿಯರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಸ್ಥರಿಂದ ರಸ್ತೆ ತಡೆ: ಐವರ ಸಾವಿನ ಬೆನ್ನಲ್ಲೇ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ರಸ್ತೆ ಅಗಲೀಕರಣ ಹಾಗೂ ಆಡಳಿತ ದೋಷದ ಕುರಿತು ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

24 ಗಂಟೆಯಲ್ಲಿ ಎರಡನೇ ಭೀಕರ ಅಪಘಾತ: ಈ ಪ್ರದೇಶದಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ದುರಂತ ಇದು. ಇಲ್ಲಿನ ಕಿರಿದಾದ ರಸ್ತೆಗಳೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಭಾನುವಾರ ಮದುವೆ ಮುಗಿಸಿ ಮರಳುತ್ತಿದ್ದ ಯುವಕನೊಬ್ಬನಿಗೆ ಟ್ರಕ್ ಗುದ್ದಿ, ಆತ ಭೀಕರವಾಗಿ ಸಾವನ್ನಪ್ಪಿದ್ದ. ಈ ಘಟನೆಯಿಂದಾಗಿ ಜವಾಹರಪುರ ಗ್ರಾಮದ ಬಾಸ್ ಹೆದ್ದಾರಿಯ ಎರಡೂ ಬದಿಗಳಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: ಕಾಲ್ತುಳಿತದ ನಂತರ ದೆಹಲಿ ರೈಲು ನಿಲ್ದಾಣದಲ್ಲಿ ಜನದಟ್ಟಣೆ ನಿರ್ವಹಣೆಗೆ CRPF ನಿಯೋಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.