ETV Bharat / bharat

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ತಮಿಳುನಾಡಿನ ನೆಲ್ಲೈಯಲ್ಲಿ 15 ಕೆಜಿ ಚಿನ್ನಾಭರಣ ವಶ - MANGALURU BANK ROBBERY

ಮಂಗಳೂರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲೈ ಮೂಲದ ಮೂವರನ್ನ ಬಂಧಿಸಿ ಅವರಿಂದ 15 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

mangaluru-bank-robbery
ಮಂಗಳೂರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು (ETV Bharat)
author img

By ETV Bharat Karnataka Team

Published : Jan 24, 2025, 3:51 PM IST

Updated : Jan 24, 2025, 4:14 PM IST

ತಿರುನೆಲ್ವೇಲಿ (ತಮಿಳುನಾಡು) : ಮಂಗಳೂರು ಸಹಕಾರಿ ಬ್ಯಾಂಕ್​ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲೈ ಮೂಲದ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 15 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್​ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್​ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿತ್ತು. ಅಲ್ಲಿದ್ದ ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.

ಮೂವರ ಬಂಧನ : ನೆಲ್ಲೈ ಜಿಲ್ಲೆಯ ಕಳಕ್ಕಾಡು ಸಮೀಪದ ಪದ್ಮನೇರಿ ಗ್ರಾಮದ ಮುರುಗಂಡಿ (36) ಮತ್ತು ಜೋಶುವಾ ಎಂಬಿಬ್ಬರನ್ನು ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ದಿನಗಳ ಹಿಂದೆ ಮಂಗಳೂರು ವಿಶೇಷ ಪೊಲೀಸರು ಬಂಧಿಸಿದ್ದರು.

ಅವರನ್ನು ಅಂಬಾಸಮುದ್ರಂ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರಿಂದ 2 ಕೆಜಿ ಚಿನ್ನ, 3 ಲಕ್ಷ ರೂ ನಗದು, ಮುಂಬೈ ನೋಂದಣಿ ಸಂಖ್ಯೆಯ ಕಾರು, ಎರಡು ದೇಶಿ ನಿರ್ಮಿತ ಬಂದೂಕುಗಳು ಮತ್ತು 3 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನೆಲ್ಲೈ ಜಿಲ್ಲೆಯವರಾದ ಕಣ್ಣನ್ ಮಣಿ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಹೆಚ್ಚುವರಿ ಚಿನ್ನಾಭರಣಗಳನ್ನು ನೆಲ್ಲೈಯಲ್ಲಿ ಬಚ್ಚಿಟ್ಟಿರುವುದಾಗಿ ಕರ್ನಾಟಕ ವಿಶೇಷ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

15 ಕೆಜಿ ಚಿನ್ನಾಭರಣ ವಶ : ಹೀಗಾಗಿ ನಿನ್ನೆ ಇನ್ಸ್ ಪೆಕ್ಟರ್ ರಾಜೇಂದ್ರನ್ ನೇತೃತ್ವದ ಪೊಲೀಸರ ತಂಡ ನೆಲ್ಲೈಗೆ ಆಗಮಿಸಿದ್ದರು. ಮುರುಗಂಡಿ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 15 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುರುಗಂಡಿ ಅವರ 65 ವರ್ಷದ ತಂದೆ ಷಣ್ಮುಗ ಸುಂದರಂ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರೂ ನೆಲ್ಲೈ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಅವರು ಮುಂಬೈನಲ್ಲಿ ನೆಲೆಸಿದ್ದರು. ವಿಶೇಷ ಪೊಲೀಸರು ಮೊದಲು ಮುಂಬೈನಲ್ಲಿ ಕಣ್ಣನ್ ಮಣಿಯನ್ನು ಬಂಧಿಸಿದರು. ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೈಯಲ್ಲಿ ತಲೆಮರೆಸಿಕೊಂಡಿದ್ದ ಮುರುಗಂಡಿ ಹಾಗೂ ಜೋಶುವಾ ಇಬ್ಬರನ್ನೂ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜಸ್ಥಾನ, ಉತ್ತರಪ್ರದೇಶದಂತಹ ಇತರ ರಾಜ್ಯಗಳ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ತಮಿಳುನಾಡಿನಲ್ಲಿ ಮೂವರು ಅರೆಸ್ಟ್ - KOTEKARU BANK ROBBERY CASE

ತಿರುನೆಲ್ವೇಲಿ (ತಮಿಳುನಾಡು) : ಮಂಗಳೂರು ಸಹಕಾರಿ ಬ್ಯಾಂಕ್​ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲೈ ಮೂಲದ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 15 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್​ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್​ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿತ್ತು. ಅಲ್ಲಿದ್ದ ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.

ಮೂವರ ಬಂಧನ : ನೆಲ್ಲೈ ಜಿಲ್ಲೆಯ ಕಳಕ್ಕಾಡು ಸಮೀಪದ ಪದ್ಮನೇರಿ ಗ್ರಾಮದ ಮುರುಗಂಡಿ (36) ಮತ್ತು ಜೋಶುವಾ ಎಂಬಿಬ್ಬರನ್ನು ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ದಿನಗಳ ಹಿಂದೆ ಮಂಗಳೂರು ವಿಶೇಷ ಪೊಲೀಸರು ಬಂಧಿಸಿದ್ದರು.

ಅವರನ್ನು ಅಂಬಾಸಮುದ್ರಂ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರಿಂದ 2 ಕೆಜಿ ಚಿನ್ನ, 3 ಲಕ್ಷ ರೂ ನಗದು, ಮುಂಬೈ ನೋಂದಣಿ ಸಂಖ್ಯೆಯ ಕಾರು, ಎರಡು ದೇಶಿ ನಿರ್ಮಿತ ಬಂದೂಕುಗಳು ಮತ್ತು 3 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನೆಲ್ಲೈ ಜಿಲ್ಲೆಯವರಾದ ಕಣ್ಣನ್ ಮಣಿ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಹೆಚ್ಚುವರಿ ಚಿನ್ನಾಭರಣಗಳನ್ನು ನೆಲ್ಲೈಯಲ್ಲಿ ಬಚ್ಚಿಟ್ಟಿರುವುದಾಗಿ ಕರ್ನಾಟಕ ವಿಶೇಷ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

15 ಕೆಜಿ ಚಿನ್ನಾಭರಣ ವಶ : ಹೀಗಾಗಿ ನಿನ್ನೆ ಇನ್ಸ್ ಪೆಕ್ಟರ್ ರಾಜೇಂದ್ರನ್ ನೇತೃತ್ವದ ಪೊಲೀಸರ ತಂಡ ನೆಲ್ಲೈಗೆ ಆಗಮಿಸಿದ್ದರು. ಮುರುಗಂಡಿ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 15 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುರುಗಂಡಿ ಅವರ 65 ವರ್ಷದ ತಂದೆ ಷಣ್ಮುಗ ಸುಂದರಂ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರೂ ನೆಲ್ಲೈ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಅವರು ಮುಂಬೈನಲ್ಲಿ ನೆಲೆಸಿದ್ದರು. ವಿಶೇಷ ಪೊಲೀಸರು ಮೊದಲು ಮುಂಬೈನಲ್ಲಿ ಕಣ್ಣನ್ ಮಣಿಯನ್ನು ಬಂಧಿಸಿದರು. ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೈಯಲ್ಲಿ ತಲೆಮರೆಸಿಕೊಂಡಿದ್ದ ಮುರುಗಂಡಿ ಹಾಗೂ ಜೋಶುವಾ ಇಬ್ಬರನ್ನೂ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜಸ್ಥಾನ, ಉತ್ತರಪ್ರದೇಶದಂತಹ ಇತರ ರಾಜ್ಯಗಳ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ತಮಿಳುನಾಡಿನಲ್ಲಿ ಮೂವರು ಅರೆಸ್ಟ್ - KOTEKARU BANK ROBBERY CASE

Last Updated : Jan 24, 2025, 4:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.