ETV Bharat / bharat

ತೆಲಂಗಾಣ: ಮಕ್ಕಳ ಕೊಲೆ ಬಳಿಕ ಪೋಷಕರ ಆತ್ಮಹತ್ಯೆ: ಒಂದೇ ದಿನ 8 ಸಾವು! - SUICIDE CASE

author img

By ETV Bharat Karnataka Team

Published : Sep 2, 2024, 5:26 PM IST

ಟೆಕ್ಕಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದೆಡೆ ತಾಯಿಯೊಬ್ಬರು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Eight Dead As Techie And Housewife Kill Family Before Committing Suicide In Separate Incidents In Telangana
ಸಾಂದರ್ಭಿಕ ಚಿತ್ರ (FIle)

ಹೈದರಾಬಾದ್ (ತೆಲಂಗಾಣ): ಕೌಟುಂಬಿಕ ಕಲಹ ಮಾಡಿದ ಸಾಲದಿಂದ ಬೇಸತ್ತು ಮಕ್ಕಳು ಸೇರಿ ಒಟ್ಟು 8 ಜನ ಕೊನೆಯುಸಿರೆಳೆದ ಪ್ರತ್ಯೇಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆನ್‌ಲೈನ್ ಗೇಮ್‌ ಚಟಕ್ಕೆ ಸಿಲುಕಿದ್ದ ಗಾಜುಲರಾಮರಂನಲ್ಲಿ ವಾಸವಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಾಲ ತೀರಿಸಲು ದಾರಿ ಕಾಣದೆ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಂಗಾರೆಡ್ಡಿ ಮೂಲದ ತಾಯಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಕುರಿತು ಪ್ರತ್ಯೇಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿವೆ.

ಟೆಕ್ಕಿ ಕುಟುಂಬ: ಮೂಲತಃ ರೆಡ್ಡಿ ಕಾಲೋನಿಯ ಸಾಫ್ಟ್‌ವೇರ್ ಇಂಜಿನಿಯರ್ ವೆಂಕಟೇಶ್ (40) ತಮ್ಮ ಪತ್ನಿ ವರ್ಷಿಣಿ ಮತ್ತು 11 ಮತ್ತು 2 ವರ್ಷದ ಇಬ್ಬರು ಮಕ್ಕಳೊಂದಿಗೆ ಕುತ್ಬುಳ್ಳಾಪುರದ ಗಾಜುಲರಾಮರಂನಲ್ಲಿ ವಾಸಿಸುತ್ತಿದ್ದರು. ಆನ್‌ಲೈನ್ ಗೇಮ್‌ ವ್ಯಸನಿಯಾಗಿದ್ದ ವೆಂಕಟೇಶ್, ಸ್ನೇಹಿತರು, ಕುಟುಂಬಸ್ಥರು, ಪರಿಚಯಸ್ಥರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆರಂಭದಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಖುಷಿಗಾಗಿ ಆಟ ಆಡಲು ಪ್ರಾರಂಭಿಸಿದ್ದ ವೆಂಕಟೇಶ್, ನಿಧಾನವಾಗಿ ಅದಕ್ಕೆ ದಾಸನಾಗಿದ್ದರು. ಕೈಯಲ್ಲಿ ಫೋನ್ ನೋಡಿದಾಗಲೆಲ್ಲ ಆಟವೇ ಅವನ ಪ್ರಪಂಚವಾಗಿತ್ತು. ಆಡುತ್ತಲೇ ದೊಡ್ಡ ಮೊತ್ತ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಸಾಲದೆಂಬಂತೆ ಆಟವಾಡಲು ಹಣಕ್ಕಾಗಿ ಸಾಲದ ಆ್ಯಪ್‌ಗಳು, ಸ್ನೇಹಿತರು ಮತ್ತು ಪರಿಚಯಸ್ಥರಿಂದ ನಾನಾ ನೆಪ ಹೇಳಿ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದರು.

ಮೈಮೇಲೆ ಸಾಲದ ಭಾರ ಹೆಚ್ಚಾಗುತ್ತಿದ್ದಂತೆ ವೆಂಕಟೇಶ್, ಪತ್ನಿಗೆ ವಿಷಯ ತಿಳಿಸಿದ್ದ. ಆದರೆ, ಅಷ್ಟು ಹಣ ಎಲ್ಲಿಂದ ತರುವುದು, ಚಿನ್ನಾಭರಣ ಮಾರಿದರೂ ಮಾಡಿದ ಸಾಲ ತೀರಿಸಲಾಗುವುದಿಲ್ಲ ಎಂದು ಪತ್ನಿ ವರ್ಷಿಣಿ ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದರು. ಬೇರೆ ದಾರಿ ಕಾಣದ ವೆಂಕಟೇಶ್, ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದ. ಆದರೆ, ತಾನೊಬ್ಬನೇ ಆತ್ಮಹತ್ಯೆ ಮಾಡಿಕೊಂಡರೆ ಸಾಲಗಾರರು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಾರೆಂದು ತಿಳಿದು ಶನಿವಾರ (ಆ.31) ರಾತ್ರಿ 10 ಗಂಟೆಯ ನಂತರ ಮಲಗಿದ್ದ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಪತ್ನಿಯನ್ನೂ ಉಸಿರುಗಟ್ಟಿಸಿ ಕೊಂದಿದ್ದಾನೆ. ಎಲ್ಲರೂ ಸತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸಿ ತಂದೆಗೆ ಸೆಲ್ಫಿ ವಿಡಿಯೋ ಮಾಡಿದ ವೆಂಕಟೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆಗೆ ಸಂದೇಶ: ಮೆಸೇಜ್ ನೋಡಿ ಆತಂಕಗೊಂಡ ವೆಂಕಟೇಶನ ತಂದೆ, ಮೊದಲು ಮಗನಿಗೆ ಕರೆ ಮಾಡಿದ್ದಾರೆ. ಸ್ಪಂದಿಸದಿದ್ದಾಗ ಸೊಸೆಗೆ ಕರೆ ಮಾಡಿದ್ದಾರೆ. ಯಾರಿಂದಲೂ ಪ್ರತಿಕ್ರಿಯೆ ಬರದ ಹಿನ್ನೆಲೆ ಪಕ್ಕದ ಮನೆಯವರನ್ನು ಸಂಪರ್ಕಿಸಿದ್ದಾರೆ. ಪಕ್ಕದ ಫ್ಲಾಟ್​ನವರು ಬಂದು ಬಾಗಿಲು ತಟ್ಟಿದ್ದಾರೆ. ತೆರೆಯದಿದ್ದರಿಂದ ಬಾಗಿಲು ಒಡೆದು ಬಂದು ನೋಡಿದಾಗ ಎಲ್ಲರೂ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಜೀಡಿಮೆಟ್ಲ ಪೊಲೀಸರು ಪರಿಶೀಲನೆ ಬಳಿಕ ಮಾಹಿತಿ ನೀಡಿದ್ದಾರೆ. ಇದೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೆಲ್ಫಿ ವಿಡಿಯೋವನ್ನೂ ಸಂಗ್ರಹಿಸಿದ್ದಾರೆ.

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಇಂತಹದ್ದೇ ಘಟನೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ತಾಯಿಯೊಬ್ಬಳು ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದಾಶಿವಪೇಟೆ ಮಂಡಲದ ರುದ್ರಾರಾಮ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿಯ ಅತಿಯಾದ ಕುಡಿತದ ಚಟದಿಂದ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಏಳು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮಕ್ಕಳೊಂದಿಗೆ ಪಟಂಚೇರುವಿನ ರುದ್ರಾರಾಮಕ್ಕೆ ಬಂದಿದ್ದರು. ಪತಿ ಇಸ್ನಾಪುರದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದ. ವಾರದ ಹಿಂದೆಯಷ್ಟೇ ಆತನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೂ, ಕುಡಿಯುವದನ್ನು ಬಿಟ್ಟಿರಲಿಲ್ಲ. ಭಾನುವಾರ ಬೆಳಗಿನ ಹೊತ್ತಾದರೂ ಮನೆಯ ಬಾಗಿಲು ತೆರೆದಿರಲಿಲ್ಲ. ಅನುಮಾನ ಬಂದು ಅಕ್ಕ-ಪಕ್ಕದವರು ಬಾಗಿಲು ಒಡೆದು ನೋಡಿದಾಗ ಮಕ್ಕಳ ಬಾಯಲ್ಲಿ ನೊರೆ ಬರುತ್ತಿರುವುದು ಕಾಣಿಸಿದೆ. ತಾಯಿ ಸೇರಿದಂತೆ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಪತಂಚೇರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಖಿನ್ನತೆಯಿಂದ ನರರೋಗ ತಜ್ಞ ಆತ್ಮಹತ್ಯೆ - maulana azad medical college

ಹೈದರಾಬಾದ್ (ತೆಲಂಗಾಣ): ಕೌಟುಂಬಿಕ ಕಲಹ ಮಾಡಿದ ಸಾಲದಿಂದ ಬೇಸತ್ತು ಮಕ್ಕಳು ಸೇರಿ ಒಟ್ಟು 8 ಜನ ಕೊನೆಯುಸಿರೆಳೆದ ಪ್ರತ್ಯೇಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆನ್‌ಲೈನ್ ಗೇಮ್‌ ಚಟಕ್ಕೆ ಸಿಲುಕಿದ್ದ ಗಾಜುಲರಾಮರಂನಲ್ಲಿ ವಾಸವಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಾಲ ತೀರಿಸಲು ದಾರಿ ಕಾಣದೆ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಂಗಾರೆಡ್ಡಿ ಮೂಲದ ತಾಯಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಕುರಿತು ಪ್ರತ್ಯೇಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿವೆ.

ಟೆಕ್ಕಿ ಕುಟುಂಬ: ಮೂಲತಃ ರೆಡ್ಡಿ ಕಾಲೋನಿಯ ಸಾಫ್ಟ್‌ವೇರ್ ಇಂಜಿನಿಯರ್ ವೆಂಕಟೇಶ್ (40) ತಮ್ಮ ಪತ್ನಿ ವರ್ಷಿಣಿ ಮತ್ತು 11 ಮತ್ತು 2 ವರ್ಷದ ಇಬ್ಬರು ಮಕ್ಕಳೊಂದಿಗೆ ಕುತ್ಬುಳ್ಳಾಪುರದ ಗಾಜುಲರಾಮರಂನಲ್ಲಿ ವಾಸಿಸುತ್ತಿದ್ದರು. ಆನ್‌ಲೈನ್ ಗೇಮ್‌ ವ್ಯಸನಿಯಾಗಿದ್ದ ವೆಂಕಟೇಶ್, ಸ್ನೇಹಿತರು, ಕುಟುಂಬಸ್ಥರು, ಪರಿಚಯಸ್ಥರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆರಂಭದಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಖುಷಿಗಾಗಿ ಆಟ ಆಡಲು ಪ್ರಾರಂಭಿಸಿದ್ದ ವೆಂಕಟೇಶ್, ನಿಧಾನವಾಗಿ ಅದಕ್ಕೆ ದಾಸನಾಗಿದ್ದರು. ಕೈಯಲ್ಲಿ ಫೋನ್ ನೋಡಿದಾಗಲೆಲ್ಲ ಆಟವೇ ಅವನ ಪ್ರಪಂಚವಾಗಿತ್ತು. ಆಡುತ್ತಲೇ ದೊಡ್ಡ ಮೊತ್ತ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಸಾಲದೆಂಬಂತೆ ಆಟವಾಡಲು ಹಣಕ್ಕಾಗಿ ಸಾಲದ ಆ್ಯಪ್‌ಗಳು, ಸ್ನೇಹಿತರು ಮತ್ತು ಪರಿಚಯಸ್ಥರಿಂದ ನಾನಾ ನೆಪ ಹೇಳಿ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದರು.

ಮೈಮೇಲೆ ಸಾಲದ ಭಾರ ಹೆಚ್ಚಾಗುತ್ತಿದ್ದಂತೆ ವೆಂಕಟೇಶ್, ಪತ್ನಿಗೆ ವಿಷಯ ತಿಳಿಸಿದ್ದ. ಆದರೆ, ಅಷ್ಟು ಹಣ ಎಲ್ಲಿಂದ ತರುವುದು, ಚಿನ್ನಾಭರಣ ಮಾರಿದರೂ ಮಾಡಿದ ಸಾಲ ತೀರಿಸಲಾಗುವುದಿಲ್ಲ ಎಂದು ಪತ್ನಿ ವರ್ಷಿಣಿ ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದರು. ಬೇರೆ ದಾರಿ ಕಾಣದ ವೆಂಕಟೇಶ್, ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದ. ಆದರೆ, ತಾನೊಬ್ಬನೇ ಆತ್ಮಹತ್ಯೆ ಮಾಡಿಕೊಂಡರೆ ಸಾಲಗಾರರು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಾರೆಂದು ತಿಳಿದು ಶನಿವಾರ (ಆ.31) ರಾತ್ರಿ 10 ಗಂಟೆಯ ನಂತರ ಮಲಗಿದ್ದ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಪತ್ನಿಯನ್ನೂ ಉಸಿರುಗಟ್ಟಿಸಿ ಕೊಂದಿದ್ದಾನೆ. ಎಲ್ಲರೂ ಸತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸಿ ತಂದೆಗೆ ಸೆಲ್ಫಿ ವಿಡಿಯೋ ಮಾಡಿದ ವೆಂಕಟೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆಗೆ ಸಂದೇಶ: ಮೆಸೇಜ್ ನೋಡಿ ಆತಂಕಗೊಂಡ ವೆಂಕಟೇಶನ ತಂದೆ, ಮೊದಲು ಮಗನಿಗೆ ಕರೆ ಮಾಡಿದ್ದಾರೆ. ಸ್ಪಂದಿಸದಿದ್ದಾಗ ಸೊಸೆಗೆ ಕರೆ ಮಾಡಿದ್ದಾರೆ. ಯಾರಿಂದಲೂ ಪ್ರತಿಕ್ರಿಯೆ ಬರದ ಹಿನ್ನೆಲೆ ಪಕ್ಕದ ಮನೆಯವರನ್ನು ಸಂಪರ್ಕಿಸಿದ್ದಾರೆ. ಪಕ್ಕದ ಫ್ಲಾಟ್​ನವರು ಬಂದು ಬಾಗಿಲು ತಟ್ಟಿದ್ದಾರೆ. ತೆರೆಯದಿದ್ದರಿಂದ ಬಾಗಿಲು ಒಡೆದು ಬಂದು ನೋಡಿದಾಗ ಎಲ್ಲರೂ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಜೀಡಿಮೆಟ್ಲ ಪೊಲೀಸರು ಪರಿಶೀಲನೆ ಬಳಿಕ ಮಾಹಿತಿ ನೀಡಿದ್ದಾರೆ. ಇದೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೆಲ್ಫಿ ವಿಡಿಯೋವನ್ನೂ ಸಂಗ್ರಹಿಸಿದ್ದಾರೆ.

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಇಂತಹದ್ದೇ ಘಟನೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ತಾಯಿಯೊಬ್ಬಳು ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದಾಶಿವಪೇಟೆ ಮಂಡಲದ ರುದ್ರಾರಾಮ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿಯ ಅತಿಯಾದ ಕುಡಿತದ ಚಟದಿಂದ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಏಳು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮಕ್ಕಳೊಂದಿಗೆ ಪಟಂಚೇರುವಿನ ರುದ್ರಾರಾಮಕ್ಕೆ ಬಂದಿದ್ದರು. ಪತಿ ಇಸ್ನಾಪುರದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದ. ವಾರದ ಹಿಂದೆಯಷ್ಟೇ ಆತನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೂ, ಕುಡಿಯುವದನ್ನು ಬಿಟ್ಟಿರಲಿಲ್ಲ. ಭಾನುವಾರ ಬೆಳಗಿನ ಹೊತ್ತಾದರೂ ಮನೆಯ ಬಾಗಿಲು ತೆರೆದಿರಲಿಲ್ಲ. ಅನುಮಾನ ಬಂದು ಅಕ್ಕ-ಪಕ್ಕದವರು ಬಾಗಿಲು ಒಡೆದು ನೋಡಿದಾಗ ಮಕ್ಕಳ ಬಾಯಲ್ಲಿ ನೊರೆ ಬರುತ್ತಿರುವುದು ಕಾಣಿಸಿದೆ. ತಾಯಿ ಸೇರಿದಂತೆ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಪತಂಚೇರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಖಿನ್ನತೆಯಿಂದ ನರರೋಗ ತಜ್ಞ ಆತ್ಮಹತ್ಯೆ - maulana azad medical college

ETV Bharat Logo

Copyright © 2024 Ushodaya Enterprises Pvt. Ltd., All Rights Reserved.