ETV Bharat / bharat

ವಿದ್ಯಾರ್ಥಿ ಹೋರಾಟದಿಂದ ರಾಜಕೀಯ ನೇತಾರ: ಸೀತಾರಾಂ ಯೆಚೂರಿ ಸವೆದು ಬಂದ ಹಾದಿ ಹೀಗಿದೆ - Sitaram Yechury Biography

author img

By ETV Bharat Karnataka Team

Published : Sep 12, 2024, 5:23 PM IST

ಸಿಪಿಐ(ಎಂ) ಪಕ್ಷದ ಪ್ರಖರ ನೇತಾರರಾಗಿದ್ದ ಸೀತಾರಾಂ ಯೆಚೂರಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ರಾಜಕೀಯ ಮತ್ತು ಸಾಮಾಜಿಕ ಹೆಜ್ಜೆಗಳು ಮಾತ್ರ ಅಚ್ಚಳಿಯದೆ ಉಳಿಯಲಿವೆ. ವಿದ್ಯಾರ್ಥಿ ಹೋರಾಟದಿಂದ ಹಿಡಿದು ರಾಜಕೀಯ ರಂಗಕ್ಕೆ ಧುಮುಕಿದ ಅವರ ಪಯಣದ ಮಾಹಿತಿ ಇಲ್ಲಿದೆ.

ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ (Getty Images)

ನವದೆಹಲಿ: ದೀರ್ಘಕಾಲದ ಅನಾರೋಗ್ಯಕ್ಕೀಡಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಗುರುವಾರ ನಿಧನರಾದರು ಎಂದು ಆಸ್ಪತ್ರೆ ಮತ್ತು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ರಾಜಕೀಯ ಕ್ಷೇತ್ರದ ಹಿರಿಯ ನಾಯಕರ ಆರೋಗ್ಯ ಕ್ಷೀಣಿಸಿತ್ತು. ಇಲ್ಲಿನ ಏಮ್ಸ್​​ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಮಧ್ಯಾಹ್ನ 3.05 ಕ್ಕೆ ಕೊನೆಯುಸಿರೆಳೆದರು ಎಂದು ಪಕ್ಷ ತಿಳಿಸಿದೆ.

ಯೆಚೂರಿ ರಾಜಕೀಯ ಪಯಣ: ಯೆಚೂರಿ ಅವರು ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದರು. ಬಳಿಕ ಅವರ ಕುಟುಂಬ ಆಂಧ್ರಪ್ರದೇಶದ ಅಂದಿನ ರಾಜಧಾನಿ ಹೈದರಾಬಾದ್‌ಗೆ ವರ್ಗವಾಯಿತು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಅವರು ಆಂಧ್ರಪ್ರದೇಶ ರಾಜ್ಯ ರಸ್ತೆ ನಿಗಮದ ಎಂಜಿನಿಯರ್ ಆಗಿದ್ದರು. ಅವರ ತಾಯಿ ಕಲ್ಪಕಂ ಯೆಚೂರಿ ಸರ್ಕಾರಿ ಅಧಿಕಾರಿಯಾಗಿದ್ದರು. 1969 ರ ತೆಲಂಗಾಣ ಆಂದೋಲನದ ನಂತರ ಯೆಚೂರಿ ದೆಹಲಿಗೆ ಸ್ಥಳಾಂತರಗೊಂಡರು. ಅಲ್ಲಿಯೇ ಉನ್ನತ ಶಿಕ್ಷಣ ಪೂರೈಸಿದರು. ಶಾಲಾ ದಿನಗಳಲ್ಲಿ ಕಮ್ಯುನಿಸ್ಟ್ ಚಳವಳಿಯಿಂದ ಪ್ರಭಾವಿತರಾಗಿದ್ದರು.

1973 ರಲ್ಲಿ ಅವರು ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪೂರ್ಣಗೊಳಿಸಿದರು. ಬಳಿಕ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟಕ್ಕೆ (SFI) ಸೇರಿದರು. ಇದಾದ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್​ವಾದಿ)ಗೆ ಸೇರಿದರು. 1975 ರಲ್ಲಿ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಅರ್ಥಶಾಸ್ತ್ರದಲ್ಲಿ ತಮ್ಮ ಎಂಎ ಸ್ನಾಯಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ತರುವಾಯ, ಅವರು ಪಿಹೆಚ್‌ಡಿಗಾಗಿ ಜೆಎನ್‌ಯು ಸೇರಿದರು. ಆದ್ರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧನವಾದ ಕಾರಣ ಪದವಿ ಪೂರ್ಣಗೊಳ್ಳಲಿಲ್ಲ.

1977-78ರ ಅವಧಿಯಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ನಂತರ, (1977-78) ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರೊಂದಿಗೆ ಜೆಎನ್‌ಯುನಲ್ಲಿ ಎಡಪಂಥೀಯ ವಿಚಾರಧಾರೆಯನ್ನು ಬೆಳೆಸಿದರು.

ಯೆಚೂರಿಯವರು SFI ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ 1978 ರಲ್ಲಿ ಅದರ ಅಧ್ಯಕ್ಷರಾಗಿ ನೇಮಕಗೊಂಡರು. 1980 ರಿಂದ 1986ರ ವರೆಗೆ ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದರು. 1984 ರಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಗೆ ಚುನಾಯಿತರಾದರು. ಬಳಿಕ ಸಂಘಟನೆಯ ಪೂರ್ಣಾವಧಿಯ ಸದಸ್ಯರಾದರು.

2005 ರಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2015 ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ - ಮಾರ್ಕ್ಸ್‌ವಾದಿಯ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಯೆಚೂರಿ ಅವಿರೋಧವಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರ ಉತ್ತರಾಧಿಕಾರಿಯಾದರು. 2022 ಏಪ್ರಿಲ್‌ನಲ್ಲಿ ಯೆಚೂರಿ ಸತತ ಮೂರನೇ ಬಾರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದರು.

ನಾಯಕರ ಸಂತಾಪ: ಯೆಚೂರಿ ಅವರ ನಿಧನಕ್ಕೆ ಪಕ್ಷಾತೀತವಾಗಿ ನಾಯಕರು ಸಂತಾಪ ಸೂಚಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯೆಚೂರಿ ಅವರನ್ನು ಸ್ನೇಹಿತ ಎಂದು ಬಣ್ಣಿಸಿದ್ದಾರೆ. "ಸೀತಾರಾಮ್ ಯೆಚೂರಿ ಜಿ ಅವರು ಸ್ನೇಹಿತರಾಗಿದ್ದರು. ದೇಶದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಅವರೊಂದಿಗೆ ಸುದೀರ್ಘ ಚರ್ಚೆಗಳನ್ನು ಮಿಸ್​ ಮಾಡಿಕೊಳ್ಳುವೆ" ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇನ್ನಿಲ್ಲ - Sitaram Yechury dies at 72

ನವದೆಹಲಿ: ದೀರ್ಘಕಾಲದ ಅನಾರೋಗ್ಯಕ್ಕೀಡಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಗುರುವಾರ ನಿಧನರಾದರು ಎಂದು ಆಸ್ಪತ್ರೆ ಮತ್ತು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ರಾಜಕೀಯ ಕ್ಷೇತ್ರದ ಹಿರಿಯ ನಾಯಕರ ಆರೋಗ್ಯ ಕ್ಷೀಣಿಸಿತ್ತು. ಇಲ್ಲಿನ ಏಮ್ಸ್​​ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಮಧ್ಯಾಹ್ನ 3.05 ಕ್ಕೆ ಕೊನೆಯುಸಿರೆಳೆದರು ಎಂದು ಪಕ್ಷ ತಿಳಿಸಿದೆ.

ಯೆಚೂರಿ ರಾಜಕೀಯ ಪಯಣ: ಯೆಚೂರಿ ಅವರು ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದರು. ಬಳಿಕ ಅವರ ಕುಟುಂಬ ಆಂಧ್ರಪ್ರದೇಶದ ಅಂದಿನ ರಾಜಧಾನಿ ಹೈದರಾಬಾದ್‌ಗೆ ವರ್ಗವಾಯಿತು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಅವರು ಆಂಧ್ರಪ್ರದೇಶ ರಾಜ್ಯ ರಸ್ತೆ ನಿಗಮದ ಎಂಜಿನಿಯರ್ ಆಗಿದ್ದರು. ಅವರ ತಾಯಿ ಕಲ್ಪಕಂ ಯೆಚೂರಿ ಸರ್ಕಾರಿ ಅಧಿಕಾರಿಯಾಗಿದ್ದರು. 1969 ರ ತೆಲಂಗಾಣ ಆಂದೋಲನದ ನಂತರ ಯೆಚೂರಿ ದೆಹಲಿಗೆ ಸ್ಥಳಾಂತರಗೊಂಡರು. ಅಲ್ಲಿಯೇ ಉನ್ನತ ಶಿಕ್ಷಣ ಪೂರೈಸಿದರು. ಶಾಲಾ ದಿನಗಳಲ್ಲಿ ಕಮ್ಯುನಿಸ್ಟ್ ಚಳವಳಿಯಿಂದ ಪ್ರಭಾವಿತರಾಗಿದ್ದರು.

1973 ರಲ್ಲಿ ಅವರು ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪೂರ್ಣಗೊಳಿಸಿದರು. ಬಳಿಕ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟಕ್ಕೆ (SFI) ಸೇರಿದರು. ಇದಾದ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್​ವಾದಿ)ಗೆ ಸೇರಿದರು. 1975 ರಲ್ಲಿ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಅರ್ಥಶಾಸ್ತ್ರದಲ್ಲಿ ತಮ್ಮ ಎಂಎ ಸ್ನಾಯಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ತರುವಾಯ, ಅವರು ಪಿಹೆಚ್‌ಡಿಗಾಗಿ ಜೆಎನ್‌ಯು ಸೇರಿದರು. ಆದ್ರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧನವಾದ ಕಾರಣ ಪದವಿ ಪೂರ್ಣಗೊಳ್ಳಲಿಲ್ಲ.

1977-78ರ ಅವಧಿಯಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ನಂತರ, (1977-78) ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರೊಂದಿಗೆ ಜೆಎನ್‌ಯುನಲ್ಲಿ ಎಡಪಂಥೀಯ ವಿಚಾರಧಾರೆಯನ್ನು ಬೆಳೆಸಿದರು.

ಯೆಚೂರಿಯವರು SFI ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ 1978 ರಲ್ಲಿ ಅದರ ಅಧ್ಯಕ್ಷರಾಗಿ ನೇಮಕಗೊಂಡರು. 1980 ರಿಂದ 1986ರ ವರೆಗೆ ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದರು. 1984 ರಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಗೆ ಚುನಾಯಿತರಾದರು. ಬಳಿಕ ಸಂಘಟನೆಯ ಪೂರ್ಣಾವಧಿಯ ಸದಸ್ಯರಾದರು.

2005 ರಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2015 ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ - ಮಾರ್ಕ್ಸ್‌ವಾದಿಯ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಯೆಚೂರಿ ಅವಿರೋಧವಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರ ಉತ್ತರಾಧಿಕಾರಿಯಾದರು. 2022 ಏಪ್ರಿಲ್‌ನಲ್ಲಿ ಯೆಚೂರಿ ಸತತ ಮೂರನೇ ಬಾರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದರು.

ನಾಯಕರ ಸಂತಾಪ: ಯೆಚೂರಿ ಅವರ ನಿಧನಕ್ಕೆ ಪಕ್ಷಾತೀತವಾಗಿ ನಾಯಕರು ಸಂತಾಪ ಸೂಚಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯೆಚೂರಿ ಅವರನ್ನು ಸ್ನೇಹಿತ ಎಂದು ಬಣ್ಣಿಸಿದ್ದಾರೆ. "ಸೀತಾರಾಮ್ ಯೆಚೂರಿ ಜಿ ಅವರು ಸ್ನೇಹಿತರಾಗಿದ್ದರು. ದೇಶದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಅವರೊಂದಿಗೆ ಸುದೀರ್ಘ ಚರ್ಚೆಗಳನ್ನು ಮಿಸ್​ ಮಾಡಿಕೊಳ್ಳುವೆ" ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇನ್ನಿಲ್ಲ - Sitaram Yechury dies at 72

ETV Bharat Logo

Copyright © 2024 Ushodaya Enterprises Pvt. Ltd., All Rights Reserved.