ETV Bharat / bharat

ಕಂಟೈನರ್ ಚಾಲಕನ ಕೈ ಕಾಲು ಕಟ್ಟಿ ₹12 ಕೋಟಿ ಮೌಲ್ಯದ 1,600 ಐಫೋನ್​ ಕಳವು - iPhones Looted

author img

By ETV Bharat Karnataka Team

Published : Sep 2, 2024, 10:29 AM IST

ಕೋಟ್ಯಂತರ ರೂಪಾಯಿ ಮೌಲ್ಯದ 1,600 ಐಫೋನ್​ಗಳನ್ನು ಕಂಟೈನರ್‌ನಿಂದ ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಕಳ್ಳರು ಪರಾರಿಯಾಗಿದ್ದಾರೆ.

a container carrying Apple iPhones worth Rs 12 crore was looted
ಐಫೋನ್​ ಲೂಟಿ ಪ್ರಕರಣ (ETV Bharat)

ಸಾಗರ್(ಮಧ್ಯ ಪ್ರದೇಶ): ಅಂದಾಜು 12 ಕೋಟಿ ರೂ ಮೌಲ್ಯದ ಆ್ಯಪಲ್​ ಐಫೋನ್​ಗಳನ್ನು​ ಸಾಗಿಸುತ್ತಿದ್ದ ಕಂಟೈನರ್‌ವೊಂದನ್ನು ಕಳ್ಳರು ಲೂಟಿ ಮಾಡಿರುವ ಘಟನೆ ಲಖ್ನಾಡನ್​-ಝಾನ್ಸಿ ಹೆದ್ದಾರಿಯಲ್ಲಿ ಆಗಸ್ಟ್​ 15ರಂದು ನಡೆದಿದೆ. ಕಂಟೈನರ್​ ಚಾಲಕನ ಕೈ ಕಾಲು ಕಟ್ಟಿ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದ ಕಂಟೈನರ್​ನಲ್ಲಿ ಚಾಲಕ ಮತ್ತು ಸೆಕ್ಯೂರಿಟಿ ಗಾರ್ಡ್​ ಇದ್ದರು. ಸೆಕ್ಯೂರಿಟಿ ಗಾರ್ಡ್ ಯುವಕನೊಬ್ಬನನ್ನು ​ಸಹಚರ ಎಂದು ಹೇಳಿ ಕ್ಯಾಬಿನ್​ಗೆ ಹತ್ತಿಸಿಕೊಂಡಿದ್ದಾನೆ. ನರಸಿಂಗಪುರದಲ್ಲಿ ವಾಹನ ನಿಲ್ಲಿಸಿದಾಗ ಸೆಕ್ಯೂರಿಟಿ ಮತ್ತು ಆತನ ಸಹಚರ ಸೇರಿ ಚಾಲಕನಿಗೆ ಮಾದಕ ವಸ್ತು ನೀಡಿ ಜ್ಞಾನ ತಪ್ಪಿಸಿ, ಕಂಟೈನರ್​ನಲ್ಲಿದ್ದ ಐಫೋನ್​ಗಳನ್ನು ಕದ್ದೊಯ್ದಿದ್ದಾರೆ.

ಕಳ್ಳರು ಕಂಟೈನರ್​ ಗೇಟ್​ ಅನ್ನು ಎಚ್ಚರದಿಂದ ತೆಗೆದಿದ್ದು, ಬೀಗಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ಪೆಟ್ಟಿಗೆಯಲ್ಲಿದ್ದ 1,600 ಐಫೋನ್​ಗಳನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ಐದು ಪೊಲೀಸ್​ ತಂಡ ರಚಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಟೋಲ್ ಪ್ಲಾಜಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆ್ಯಪ​ಲ್​ ಕಂಪನಿ ಅಧಿಕಾರಿಗಳು, ಸಾರಿಗೆ ಕಂಪನಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಮೇವಾಟಿ ಗ್ಯಾಂಗ್​ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ ವಂದೇ ಭಾರತ್​​ ಸ್ಲೀಪರ್​ ಕೋಚ್​ ರೈಲುಗಳು ಸೇವೆಗೆ ಲಭ್ಯ: ಅಶ್ವಿನಿ ವೈಷ್ಣವ್

ಸಾಗರ್(ಮಧ್ಯ ಪ್ರದೇಶ): ಅಂದಾಜು 12 ಕೋಟಿ ರೂ ಮೌಲ್ಯದ ಆ್ಯಪಲ್​ ಐಫೋನ್​ಗಳನ್ನು​ ಸಾಗಿಸುತ್ತಿದ್ದ ಕಂಟೈನರ್‌ವೊಂದನ್ನು ಕಳ್ಳರು ಲೂಟಿ ಮಾಡಿರುವ ಘಟನೆ ಲಖ್ನಾಡನ್​-ಝಾನ್ಸಿ ಹೆದ್ದಾರಿಯಲ್ಲಿ ಆಗಸ್ಟ್​ 15ರಂದು ನಡೆದಿದೆ. ಕಂಟೈನರ್​ ಚಾಲಕನ ಕೈ ಕಾಲು ಕಟ್ಟಿ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದ ಕಂಟೈನರ್​ನಲ್ಲಿ ಚಾಲಕ ಮತ್ತು ಸೆಕ್ಯೂರಿಟಿ ಗಾರ್ಡ್​ ಇದ್ದರು. ಸೆಕ್ಯೂರಿಟಿ ಗಾರ್ಡ್ ಯುವಕನೊಬ್ಬನನ್ನು ​ಸಹಚರ ಎಂದು ಹೇಳಿ ಕ್ಯಾಬಿನ್​ಗೆ ಹತ್ತಿಸಿಕೊಂಡಿದ್ದಾನೆ. ನರಸಿಂಗಪುರದಲ್ಲಿ ವಾಹನ ನಿಲ್ಲಿಸಿದಾಗ ಸೆಕ್ಯೂರಿಟಿ ಮತ್ತು ಆತನ ಸಹಚರ ಸೇರಿ ಚಾಲಕನಿಗೆ ಮಾದಕ ವಸ್ತು ನೀಡಿ ಜ್ಞಾನ ತಪ್ಪಿಸಿ, ಕಂಟೈನರ್​ನಲ್ಲಿದ್ದ ಐಫೋನ್​ಗಳನ್ನು ಕದ್ದೊಯ್ದಿದ್ದಾರೆ.

ಕಳ್ಳರು ಕಂಟೈನರ್​ ಗೇಟ್​ ಅನ್ನು ಎಚ್ಚರದಿಂದ ತೆಗೆದಿದ್ದು, ಬೀಗಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ಪೆಟ್ಟಿಗೆಯಲ್ಲಿದ್ದ 1,600 ಐಫೋನ್​ಗಳನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ಐದು ಪೊಲೀಸ್​ ತಂಡ ರಚಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಟೋಲ್ ಪ್ಲಾಜಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆ್ಯಪ​ಲ್​ ಕಂಪನಿ ಅಧಿಕಾರಿಗಳು, ಸಾರಿಗೆ ಕಂಪನಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಮೇವಾಟಿ ಗ್ಯಾಂಗ್​ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ ವಂದೇ ಭಾರತ್​​ ಸ್ಲೀಪರ್​ ಕೋಚ್​ ರೈಲುಗಳು ಸೇವೆಗೆ ಲಭ್ಯ: ಅಶ್ವಿನಿ ವೈಷ್ಣವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.