ETV Bharat / bharat

ಚೆಕ್​ ಬೌನ್ಸ್​ ಪ್ರಕರಣ: ಭಾರತ ತಂಡದ ಮಾಜಿ ಕ್ರಿಕೆಟಿಗ ಅರೆಸ್ಟ್

author img

By ETV Bharat Karnataka Team

Published : Feb 1, 2024, 10:50 AM IST

Updated : Feb 1, 2024, 11:24 AM IST

90ರ ದಶಕದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಶಾಂತ್ ವೈದ್ಯ ಅವರನ್ನು ಮಹಾರಾಷ್ಟ್ರ ಪೊಲೀಸರು ಚೆಕ್ ಬೌನ್ಸ್‌ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಜಾಮೀನು ರಹಿತ ಅರೆಸ್ಟ್​ ವಾರೆಂಟ್
ಜಾಮೀನು ರಹಿತ ಅರೆಸ್ಟ್​ ವಾರೆಂಟ್

ನಾಗಪುರ(ಮಹಾರಷ್ಟ್ರ): ಚೆಕ್​ ಬೌನ್ಸ್​ ಪ್ರಕರಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರಶಾಂತ್ ವೈದ್ಯ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ವೈದ್ಯ ವಿರುದ್ಧ ಜಾಮೀನುರಹಿತ ಅರೆಸ್ಟ್​ ವಾರೆಂಟ್ ಜಾರಿ ಮಾಡಲಾಗಿತ್ತು.

ಪ್ರಕರಣದ ವಿವರ: ಪ್ರಶಾಂತ್​ ವೈದ್ಯ ಅವರು ಸ್ಥಳೀಯ ವ್ಯಾಪಾರಿಯಿಂದ ಉಕ್ಕು ಖರೀದಿಸಿ ಚೆಕ್​ ನೀಡಿದ್ದರು. ಈ ಚೆಕ್​ ಬೌನ್ಸ್​ ಆಗಿತ್ತು. ಹಣ ಮರು ಪಾವತಿಸುವಂತೆ ವ್ಯಾಪಾರಿ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಪ್ರಶಾಂತ್​ ನಿರಾಕರಿಸಿದ್ದಾರೆ. ಹೀಗಾಗಿ ವ್ಯಾಪಾರಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ, ಪ್ರಶಾಂತ್​ ಅವರಿಗೆ ಆದೇಶ ನೀಡಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಜಾಮೀನುರಹಿತ ಅರೆಸ್ಟ್​ ವಾರೆಂಟ್ ಜಾರಿಗೊಳಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವ ಪ್ರಶಾಂತ್​ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಶಾಂತ್​ ವೈದ್ಯ 1990ರಲ್ಲಿ ಭಾರತ ಪರ ನಾಲ್ಕು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ವಿದರ್ಭ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಕ್ಯಾಪ್ಟನ್‌ ಆಗಿರುತ್ತಿದ್ದರೆ ಭಾರತ ಮೊದಲ ಟೆಸ್ಟ್‌ ಸೋಲುತ್ತಿರಲಿಲ್ಲ: ಮೈಕಲ್​ ವಾನ್​

ನಾಗಪುರ(ಮಹಾರಷ್ಟ್ರ): ಚೆಕ್​ ಬೌನ್ಸ್​ ಪ್ರಕರಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರಶಾಂತ್ ವೈದ್ಯ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ವೈದ್ಯ ವಿರುದ್ಧ ಜಾಮೀನುರಹಿತ ಅರೆಸ್ಟ್​ ವಾರೆಂಟ್ ಜಾರಿ ಮಾಡಲಾಗಿತ್ತು.

ಪ್ರಕರಣದ ವಿವರ: ಪ್ರಶಾಂತ್​ ವೈದ್ಯ ಅವರು ಸ್ಥಳೀಯ ವ್ಯಾಪಾರಿಯಿಂದ ಉಕ್ಕು ಖರೀದಿಸಿ ಚೆಕ್​ ನೀಡಿದ್ದರು. ಈ ಚೆಕ್​ ಬೌನ್ಸ್​ ಆಗಿತ್ತು. ಹಣ ಮರು ಪಾವತಿಸುವಂತೆ ವ್ಯಾಪಾರಿ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಪ್ರಶಾಂತ್​ ನಿರಾಕರಿಸಿದ್ದಾರೆ. ಹೀಗಾಗಿ ವ್ಯಾಪಾರಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ, ಪ್ರಶಾಂತ್​ ಅವರಿಗೆ ಆದೇಶ ನೀಡಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಜಾಮೀನುರಹಿತ ಅರೆಸ್ಟ್​ ವಾರೆಂಟ್ ಜಾರಿಗೊಳಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವ ಪ್ರಶಾಂತ್​ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಶಾಂತ್​ ವೈದ್ಯ 1990ರಲ್ಲಿ ಭಾರತ ಪರ ನಾಲ್ಕು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ವಿದರ್ಭ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಕ್ಯಾಪ್ಟನ್‌ ಆಗಿರುತ್ತಿದ್ದರೆ ಭಾರತ ಮೊದಲ ಟೆಸ್ಟ್‌ ಸೋಲುತ್ತಿರಲಿಲ್ಲ: ಮೈಕಲ್​ ವಾನ್​

Last Updated : Feb 1, 2024, 11:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.