ಭಾರತ-ಚೀನಾ ಶಾಂತಿ ಮಾತುಕತೆ ಮೂಲಕ ಲಡಾಖ್ ಗಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು: ದಲೈ ಲಾಮಾ
![ETV Thumbnail thumbnail](https://etvbharatimages.akamaized.net/etvbharat/prod-images/320-214-15828821-thumbnail-3x2-lek.jpg)
ಜಮ್ಮು: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಜಮ್ಮುಗೆ ಭೇಟಿ ನೀಡಿದ ಬಳಿಕ ಲೇಹ್ಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಪೂರ್ವ ಲಡಾಖ್ನಲ್ಲಿನ ಗಡಿ ನಿಯಂತ್ರಣ ರೇಖೆಯ ಕುರಿತು ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳು ಪರಸ್ಪರ ಶಾಂತಿ ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಮಿಲಿಟರಿ ಬಲ ಬಳಕೆ ಹಳೆಯದು ಎಂದು ಚೀನಾದ ವಿಸ್ತರಣಾ ನೀತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.