ವಿಜಯಪುರದಿಂದ ಕಲಬುರಗಿಗೆ ಬಸ್​ ಸೇವೆ ಸ್ಥಗಿತ: ಜಿಲ್ಲಾಧಿಕಾರಿ

By

Published : Mar 20, 2020, 5:12 PM IST

thumbnail
ವಿಜಯಪುರ: ಇಲ್ಲಿಂದ ಕಲಬುರಗಿgಎ ಪ್ರಯಾಣಿಸುವ ಬಸ್​ಗಳ ಸಂಚಾರವನ್ನು ಸ್ಥತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡನಾಡಿದ ಅವರು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಿನ್ನೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್​​ಗಳ ಸಂಚಾರ ಸ್ಥಗಿತ ಮಾಡಲಾಗಿತ್ತು. ಇಂದಿನಿಂದ ಕಲಬುರಗಿ ಜಿಲ್ಲೆಗೆ ಹೋಗುವ ಬಸ್​​ಗಳ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ ಎಂದರು. ಜಿಲ್ಲೆಯಲ್ಲಿ 165 ಜನ ಹೋಮ್ ಕ್ವರೆಂಟೈನ್​​ನಲ್ಲಿದ್ದಾರೆ. ಕೆಲವರು ಆರೋಗ್ಯಾಧಿಕಾರಿಗಳ ಕಣ್ಣು ತಪ್ಪಸಿಕೊಂಡು ಹೊರಡಗೆ ತಿರುಗಾಡುವ ಕಾರಣ ಅವರ ಪಕ್ಕದ ಮನೆಯವರ ನಂಬರ್ ತೆಗೆದುಕೊಳ್ಳಲಾಗಿದೆ. ಜಿಲ್ಲೆಗೆ ಬರುವ ವಿದೇಶಿಗರ ಮೇಲೂ ನಿಗಾ ಇಡಲಾಗಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.