ETV Bharat / state

ಕಿವಿಚುಚ್ಚಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ಮಗು ಸಾವು ಆರೋಪ: ಸಿಬ್ಬಂದಿ ವಿರುದ್ಧ ಸಂಬಂಧಿಕರ ಆಕ್ರೋಶ - A CHILD DIED IN HOSPITAL

ಕಿವಿ ಚುಚ್ಚಿಸಲು ಕರೆತಂದಿದ್ದ ಮಗವೊಂದು ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

child-died-in-hospital-at-chamarajagara
ಮೃತ ಮಗುವಿನ ಪೋಷಕರು (ETV Bharat)
author img

By ETV Bharat Karnataka Team

Published : Feb 3, 2025, 5:26 PM IST

ಚಾಮರಾಜನಗರ : ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಹಂಗಳ ಗ್ರಾಮದ ಆನಂದ್ ಮತ್ತು ಶುಭಾ ದಂಪತಿಯ 6 ತಿಂಗಳ ಗಂಡು ಶಿಶು ಅಸುನೀಗಿದೆ. ಶುಭಾ ಬೊಮ್ಮಲಾಪುರ ಸಮೀಪದ ಶೆಟ್ಟಹಳ್ಳಿ ಗ್ರಾಮದರಾಗಿದ್ದು, ಬಾಣಂತನಕ್ಕೆ ತವರಿಗೆ ಬಂದಿದ್ದರು. ಮಗುವಿಗೆ 6 ತಿಂಗಳಾದ ಹಿನ್ನೆಲೆ ಕಿವಿ ಚುಚ್ಚಿಸಲು ಮುಂದಾಗಿದ್ದೆವು. ಈ ವೇಳೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಮಗುವಿನ ಎರಡು ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟಿದ್ದು, ಚುಚ್ಚುಮದ್ದು ನೀಡಿದ ಸ್ವಲ್ಪಹೊತ್ತಿಗೆ ಬಾಯಲ್ಲಿ ನೊರೆ ಬಂದು ಮಗು ಅಸುನೀಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಗುಂಡ್ಲುಪೇಟೆ ಟಿಹೆಚ್ಒ ಡಾ. ಅಲೀಂ‌ ಪಾಷಾ ಮಾತನಾಡಿದರು (ETV Bharat)

ಟಿಹೆಚ್ಒ ಪ್ರತಿಕ್ರಿಯೆ: ಈ ಕುರಿತು ಗುಂಡ್ಲುಪೇಟೆ ಟಿಹೆಚ್ಒ ಡಾ. ಅಲೀಂ‌ ಪಾಷಾ ಪ್ರತಿಕ್ರಿಯೆ ನೀಡಿದ್ದು, ''ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ವೈದ್ಯರ ನಿರ್ಲಕ್ಷ್ಯ ದೃಢಪಟ್ಟರೆ ಸೂಕ್ತ ಕ್ರಮವನ್ನು ಉನ್ನತಾಧಿಕಾರಿಗಳು ಕೈಗೊಳ್ಳುತ್ತಾರೆ. ಮಗುವಿನ ಸಾವಿಗೆ ನ್ಯಾಯ ಸಿಗಬೇಕು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಆಟವಾಡುವಾಗ ಹಾವು ಕಚ್ಚಿ 2 ವರ್ಷದ ಬಾಲಕ ಸಾವು - BOY DIES AFTER SNAKE BITE

ಚಾಮರಾಜನಗರ : ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಹಂಗಳ ಗ್ರಾಮದ ಆನಂದ್ ಮತ್ತು ಶುಭಾ ದಂಪತಿಯ 6 ತಿಂಗಳ ಗಂಡು ಶಿಶು ಅಸುನೀಗಿದೆ. ಶುಭಾ ಬೊಮ್ಮಲಾಪುರ ಸಮೀಪದ ಶೆಟ್ಟಹಳ್ಳಿ ಗ್ರಾಮದರಾಗಿದ್ದು, ಬಾಣಂತನಕ್ಕೆ ತವರಿಗೆ ಬಂದಿದ್ದರು. ಮಗುವಿಗೆ 6 ತಿಂಗಳಾದ ಹಿನ್ನೆಲೆ ಕಿವಿ ಚುಚ್ಚಿಸಲು ಮುಂದಾಗಿದ್ದೆವು. ಈ ವೇಳೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಮಗುವಿನ ಎರಡು ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟಿದ್ದು, ಚುಚ್ಚುಮದ್ದು ನೀಡಿದ ಸ್ವಲ್ಪಹೊತ್ತಿಗೆ ಬಾಯಲ್ಲಿ ನೊರೆ ಬಂದು ಮಗು ಅಸುನೀಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಗುಂಡ್ಲುಪೇಟೆ ಟಿಹೆಚ್ಒ ಡಾ. ಅಲೀಂ‌ ಪಾಷಾ ಮಾತನಾಡಿದರು (ETV Bharat)

ಟಿಹೆಚ್ಒ ಪ್ರತಿಕ್ರಿಯೆ: ಈ ಕುರಿತು ಗುಂಡ್ಲುಪೇಟೆ ಟಿಹೆಚ್ಒ ಡಾ. ಅಲೀಂ‌ ಪಾಷಾ ಪ್ರತಿಕ್ರಿಯೆ ನೀಡಿದ್ದು, ''ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ವೈದ್ಯರ ನಿರ್ಲಕ್ಷ್ಯ ದೃಢಪಟ್ಟರೆ ಸೂಕ್ತ ಕ್ರಮವನ್ನು ಉನ್ನತಾಧಿಕಾರಿಗಳು ಕೈಗೊಳ್ಳುತ್ತಾರೆ. ಮಗುವಿನ ಸಾವಿಗೆ ನ್ಯಾಯ ಸಿಗಬೇಕು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಆಟವಾಡುವಾಗ ಹಾವು ಕಚ್ಚಿ 2 ವರ್ಷದ ಬಾಲಕ ಸಾವು - BOY DIES AFTER SNAKE BITE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.