ಟಿಪ್ಪು ಸುಲ್ತಾನ್ ವಿವಾದ: ಸರ್ಕಾರದ ನಿರ್ಧಾರಕ್ಕೆ ಹೆಚ್. ವಿಶ್ವನಾಥ್ ಆಕ್ಷೇಪ
ಮೈಸೂರು: ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಅವರ ಇತಿಹಾಸ ಕೈಬಿಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಲವು ಮುಖಂಡರು ಧ್ವನಿಗೂಡಿಸಿದರೆ. ಈ ಬಗ್ಗೆ ಮಾತನಾಡಿರುವ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಇತಿಹಾಸದಲ್ಲಿ ನಾಯಕ-ಖಳನಾಯಕ ಇರುತ್ತಾರೆ. ಆದರೆ ಅದರ ಬಗ್ಗೆ ಪರಾಮರ್ಶೆ ಮಾಡಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಟಿಪ್ಪು ಸುಲ್ತಾನ್ ಎಂದೆಂದಿಗೂ ಮೈಸೂರು ಹುಲಿ ಎಂದು ಬಣ್ಣಿಸಿದ್ದಾರೆ.
ಟಿಪ್ಪು ಸುಲ್ತಾನ್ ಶೃಂಗೇರಿ, ದೇವನಹಳ್ಳಿ, ನಂಜನಗೂಡು ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಒಳ್ಳೆಯ ಕೆಲಸ ಮಾಡಿರುವ ಬಗ್ಗೆ ಇತಿಹಾಸದಲ್ಲಿದೆ. ಈ ಕುರಿತು ಚರ್ಚೆ ನಡೆದು ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.