ಎತ್ತುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖದೀಮರು ಆರೆಸ್ಟ್​ - ಶಿಗ್ಗಾವಿ ಪೊಲೀಸ ಕಾರ್ಯಚರಣೆ

🎬 Watch Now: Feature Video

thumbnail

By

Published : Nov 9, 2019, 9:39 PM IST

ಹಾವೇರಿ ಜಿಲ್ಲೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ರೈತರ ಎತ್ತುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಶಿಗ್ಗಾವಿ ಪೊಲೀಸರು ಬಂಧಿಸಿದ್ದಾರೆ. ದಾದಾಪೀರ ಕಡೇಮನಿ (33) , ಖಾದರಸಾಬ್ ಜಟಗೇರಿ (36), ಅಬ್ದುಲ್ ಸುತಾರ (34) ಬಂಧಿತರು. ಇವರಿಂದ ಒಂದೂವರೆ ಲಕ್ಷಕ್ಕೂ ಅಧಿಕ ರೂ. ಬೆಲೆಬಾಳುವ ನಾಲ್ಕು ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಎತ್ತುಗಳ ಸಾಗಾಣಿಕೆಗೆ ಬಳಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ. ಶಿಗ್ಗಾವಿ​ ಮತ್ತು ತಡಸ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣಗಳು ದಾಖಲಾದ ಹಿನ್ನೆಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.