thumbnail

ಮಂಗಳೂರು ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಎಸ್​​ಡಿಪಿಐ ಕೈವಾಡ: ನಳೀನ್ ಕುಮಾರ್ ಕಟೀಲ್​

By

Published : Jan 31, 2021, 2:47 AM IST

Updated : Jan 31, 2021, 4:54 AM IST

ಮಂಗಳೂರು: ನಗರದಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಎಸ್​ಡಿಪಿಐ ಕೈವಾಡವಿದೆ‌ ಎಂದು ಸಂಸದ ನಳಿನ್ ಕುಮಾರ್ ಕಟೀಲ್​​ ಆರೋಪಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಹತ್ತಾರು ತಿಂಗಳಲ್ಲಿ ಎಸ್​​ಡಿಪಿಐ ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಬಹಿರಂಗಗೊಂಡಿದೆ‌. ಹಿಂದೆ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹತ್ಯೆಗಳಲ್ಲಿಯೂ ಎಸ್​​ಡಿಪಿಐ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ಗ್ರಾಪಂ ಚುನಾವಣಾ ಸಂದರ್ಭ ಪಾಕ್ ಪರ ಘೋಷಣೆ ಮಾಡಿತ್ತು. 'ಮಾಯಾ ಗ್ಯಾಂಗ್' ಮತ್ತು 'ಕಾರ್ಖಾನ ಗ್ಯಾಂಗ್' ಮುಂತಾದ ಗ್ಯಾಂಗ್ ಗಳನ್ನು ಕಟ್ಟಿಕೊಂಡು ಇಂತಹ ಕೃತ್ಯಗಳಲ್ಲಿ ತೊಡಗಿರೋದು ಬಯಲಾಗಿದೆ. ಈ ಬಗ್ಗೆ ಪೂರ್ಣ ತನಿಖೆಯಾಗಿ ರಾಷ್ಟ್ರ ವಿರೋಧಿ ಕೃತ್ಯಗಳಿದ್ದಲ್ಲಿ ಎಸ್​​ಡಿಪಿಐನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಪ್ರಕರಣವನ್ನು ಬೇಧಿಸಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದು ಕಟೀಲು ಹೇಳಿದರು.
Last Updated : Jan 31, 2021, 4:54 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.