thumbnail

By

Published : Aug 19, 2020, 4:36 PM IST

Updated : Aug 19, 2020, 5:15 PM IST

ETV Bharat / Videos

600 ಅಡಿಕೆ, ಬಾಳೆ ಗಿಡಗಳ ಧ್ವಂಸ: ಸಂಬಂಧಿಕರಿಂದಲೇ ನಡೀತಾ ಕೃತ್ಯ?

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ನೂರಾರು ಅಡಿಕೆ ಮರಗಳು ಮತ್ತು ಬಾಳೆಗಿಡಗಳನ್ನು ಕಡಿದು ಹಾಕಲಾಗಿದೆ. ರೈತ ನಾಗರಾಜ್ ಎಂಬುವರಿಗೆ ಸೇರಿದ 2 ಎಕರೆ 31 ಗುಂಟೆ ಜಮೀನಿನಲ್ಲಿದ್ದ 600 ಅಡಿಕೆ ಗಿಡಗಳು ಮತ್ತು ಬಾಳೆ ಗಿಡಗಳನ್ನು ರಾತ್ರೋರಾತ್ರಿ ಸಂಬಂಧಿಕರೇ ಕಡಿದು ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹನುಮಯ್ಯ ಎಂಬುವರ ಮಗ ನಾಗರಾಜ್ ತೋಟದ ಸಂರಕ್ಷಣೆ ಮಾಡಿದ್ದರು. ಅನೇಕ ದಿನಗಳಿಂದ ಈ ಕುರಿತ ಜಮೀನು ವಿವಾದ ನಡೆದಿತ್ತು. ಸಂಬಂಧಿಕರೇ ಗಿಡಗಳನ್ನು ಕಡಿದು ಹಾಕುವುದಾಗಿ ಎಚ್ಚರಿಕೆ ನೀಡಿ ಹೋಗಿದ್ದರು ಎಂದು ರೈತ ನಾಗರಾಜ ಆರೋಪಿಸಿದ್ದಾರೆ.
Last Updated : Aug 19, 2020, 5:15 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.