ಯಾರ ಪ್ರಚಾರ ಮಾಡಿದಾರೆ ಅನ್ನೋದು ಮುಖ್ಯವಲ್ಲ, ಜನರ ಆಯ್ಕೆಯೇ ಅಂತಿಮ: ಜಮೀರ್ ಅಹ್ಮದ್
ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಎರಡು ಕ್ಷೇತ್ರಗಳ ಪೈಕಿ ಶಿವಾಜಿನಗರ ಪ್ರಮುಖ ಕ್ಷೇತ್ರವಾಗಿದ್ದು, ಇಲ್ಲಿ ರಿಜ್ವಾನ್ ಗೆಲುವಿಗೆ ಮತದಾರರೇ ಮುಖ್ಯಕಾರಣ. ಇವರ ನಿರ್ಧಾರದ ಮುಂದೆ ಬೇರೆಲ್ಲವೂ ಗೌಣ ಎಂದು ರಿಜ್ವಾನ್ ಪರ ಪ್ರಚಾರ ಮಾಡಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.