ದೇಶಾದ್ಯಂತ ಮಿಡತೆಗಳ ಹಾವಳಿ: ಕೀಟಶಾಸ್ತ್ರಜ್ಞರು ಏನಂತಾರೆ?
ಕೊಪ್ಪಳ: ಕೊರೊನಾ ಭೀತಿಯ ನಡುವೆಯೇ ಇದೀಗ ರೈತರಿಗೆ ಮಿಡತೆಗಳು ಕಾಡುತ್ತಿವೆ. ಈಗಾಗಲೇ ಮಿಡತೆಗಳು ದೇಶಕ್ಕೆ ಕಾಲಿಟ್ಟಿದ್ದು, ರಾಜ್ಯಕ್ಕೂ ಕೂಡ ಕಾಲಿಡುವ ಆತಂಕ ರೈತರನ್ನು ಆವರಿಸಿದೆ. ಆದರೆ ಕೊಪ್ಪಳ ಜಿಲ್ಲೆಗೆ ಮಿಡತೆಗಳು ಕಾಲಿಡುವ ಸಾಧ್ಯತೆ ತೀರಾ ಕಡಿಮೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಒಂದು ವೇಳೆ ಜಿಲ್ಲೆಗೆ ಕಾಲಿಟ್ಟರೆ ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಕೊಪ್ಪಳ ಕೇಂದ್ರದ ಕೀಟ ವಿಭಾಗದ ತಜ್ಞ ಡಾ. ಬದರಿ ಪ್ರಸಾದ್ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.