ಮೇಕೆದಾಟು ಯೋಜನೆ ಜಾರಿಗೆ ತಂದಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ: ಎಮ್. ಲಕ್ಷ್ಮಣ್

By

Published : Aug 2, 2021, 3:24 PM IST

thumbnail

ಮೇಕೆದಾಟು ಯೋಜನೆ ಕುರಿತು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ‌ ವಕ್ತಾರ ಎಮ್‌.ಲಕ್ಷ್ಮಣ್, ಮೇಕೆದಾಟು ಯೋಜನೆಗೆ 2013ರಲ್ಲಿ ಕಾವೇರಿ ಮತ್ತು ಆರ್ಕಾವತಿ ನದಿ ಸೇರುವ ಸ್ಥಳವಾದ ಮೇಕೆದಾಟುವಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುಮೋದನೆ ನೀಡಲಾಗಿತ್ತು. ಈ ಯೋಜನೆಯಿಂದ ರಾಜ್ಯಕ್ಕೆ ಕುಡಿಯುವ ನೀರಿನ ಅನುಕೂಲವಾಗುತ್ತದೆ. ಅಲ್ಲದೆ ತಮಿಳುನಾಡಿಗೂ ಸಹ ಇದರ ಉಪಯೋಗವಾಗಲಿದೆ. ಅದಕ್ಕಾಗಿ ಡಿಪಿಆರ್​ಅನ್ನು ಆಗಲೇ ಮಾಡಲಾಗಿತ್ತು. ಆದರೆ ಈ ಯೋಜನೆಯನ್ನು‌ ನಾವೇ ಮಾಡಿದ್ದು ಎಂದು ಹೇಳುವ ಸಂಸದ ಪ್ರತಾಪ್‌ ಸಿಂಹ ಒಬ್ಬ ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದರು. ಹೀಗೆ ಇನ್ನೂ ಹಲವಾರು ವಿಷಯಗಳ ಕುರಿತು ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.