ಉತ್ತರ ಕನ್ನಡದಲ್ಲಿ ಮಳೆಯೋ ಮಳೆ, ಜನಜೀವನ ಅಸ್ತವ್ಯಸ್ತ - kannad News
🎬 Watch Now: Feature Video

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಲಾಶಯಗಳಿಂದ ಹೆಚ್ಚುವರಿ ನೀರು ಹೊರಬಿಟ್ಟ ಹಿನ್ನೆಲೆ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮಳೆ ವರದಿಗೆ ತೆರಳಿ ಹಿಚ್ಕಡ ದ್ವೀಪದಲ್ಲಿ ಸಿಲುಕ್ಕಿದ್ದ ನಾಲ್ವರು ಪತ್ರಕರ್ತರನ್ನು ರಕ್ಷಣೆ ಮಾಡಲಾಗಿದೆ.