ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರರ ಬದುಕು
ಕಲಬುರಗಿ: ನದಿಯಲ್ಲಿ ಮೀನು ಹಿಡಿದು ಬದುಕು ಸಾಗಿಸುತ್ತಿದ್ದ ಕುಟುಂಬ ಪ್ರವಾಹದಿಂದಾಗಿ ಅಕ್ಷರಶಃ ಬೀದಿಗೆ ಬಂದಿದೆ. ನಿತ್ಯ ಹಸಿದ ಹೊಟ್ಟೆ ತುಂಬಿಸುತ್ತಿದ್ದ ನದಿ ಉಗ್ರ ರೂಪ ತಳೆದು ಇದೀಗ ಮೀನುಗಾರರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಮಳಖೇಡ ಗ್ರಾಮದಲ್ಲಿ ಕಾಗಿಣಾ ನದಿ ಉಕ್ಕಿ ಹರಿದ ಪರಿಣಾಮ ಮೀನುಗಾರರ ಗುಡಿಸಲು ನೀರಿನಿಂದ ಮುಳುಗಿದೆ. ಅಲ್ಲದೇ ಮೀನು ಹಿಡಿಯಲು ಬಳಸುವ ಬಲೆ ಸೇರಿ ಎಲ್ಲವೂ ನೀರು ಪಾಲಾಗಿದೆ.
Last Updated : Sep 25, 2020, 9:28 PM IST