thumbnail

By

Published : Jan 31, 2021, 4:49 PM IST

ETV Bharat / Videos

ಶಶಿಕಲಾ ನಟರಾಜನ್​​ ಭೇಟಿ ಮಾಡಲು ರೆಸಾರ್ಟ್​ನತ್ತ ಧಾವಿಸುತ್ತಿರುವ ಅಭಿಮಾನಿಗಳು

ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ ವಿಶ್ರಾಂತಿಗಾಗಿ ದೇವನಹಳ್ಳಿಯ ಪ್ರೇಸ್ಟಿಜ್​ ಗಾಲ್ಫ್ ಶೈರ್ ರೆಸಾರ್ಟ್​ಗೆ ಬಂದಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಚಿನ್ನಮ್ಮ ಅಂತಾನೇ ಕರೆಸಿಕೊಳ್ಳುವ ಶಶಿಕಲಾರನ್ನು ಭೇಟಿ ಮಾಡುವ ಸಲುವಾಗಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರೆಸಾರ್ಟ್​ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶಶಿಕಲಾ ಆಪ್ತರಿಗೆ ಮಾತ್ರ ರೆಸಾರ್ಟ್ ​ಒಳಗೆ ಅವಕಾಶ ನೀಡಲಾಗಿದೆ. ರೆಸಾರ್ಟ್​ ಒಳಗೆ ಪ್ರವೇಶ ನೀಡುವಂತೆ ಬೆಂಬಲಿಗರು ಪೊಲೀಸರನ್ನು ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ರೆಸಾರ್ಟ್ ​ಒಳಗೆ ಪ್ರವೇಶ ನಿರಾಕರಿಸಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.