thumbnail

By

Published : Mar 22, 2021, 6:10 PM IST

ETV Bharat / Videos

ಡಿಸ್ನಿಲ್ಯಾಂಡ್ ಮತ್ತು ರೋಪ್ ವೇ ಮಾಡಲು ಬಿಡುವುದಿಲ್ಲ: ಪ್ರೊ. ರಂಗರಾಜು

ಮೈಸೂರು: ಕೆಆರ್​​ಎಸ್​​ನಲ್ಲಿ ಡಿಸ್ನಿಲ್ಯಾಂಡ್ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಲು ಬಿಡುವುದಿಲ್ಲ ಎಂದು ಪಾರಂಪರಿಕ ತಜ್ಞ ಪ್ರೊ. ರಂಗರಾಜು ಹೇಳಿದರು. ಈಟಿವಿ ಭಾತರದೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಖಾಸಗಿ ಸಹಭಾಗಿತ್ವದಲ್ಲಿ ಕೆಆರ್​​ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಲು ತಯಾರಿ ನಡೆಸಿದ್ದು, ಇದು ಅಗತ್ಯವಿಲ್ಲ. ಕೆಆರ್​ಎಸ್ ಡ್ಯಾಂ ಪಕ್ಕದಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡಿದರೆ ಡ್ಯಾಮ್​ಗೆ ಅಪಾಯವಾಗುವ ಸಂಭವವಿದೆ. ಹಾಗೇ ಚಾಮುಂಡಿ ಬೆಟ್ಟದಲ್ಲಿ ಅಪಾರ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲವಿದೆ. ಇಲ್ಲಿ ರೋಪ್ ವೇ ನಿರ್ಮಾಣ ಮಾಡಿದರೆ ಇವುಗಳಿಗೆ ಅಪಾಯ ಉಂಟಾಗಲಿದೆ. ಜತೆಗೆ ಚಾಮುಂಡಿ ಬೆಟ್ಟಕ್ಕೆ 5 ರಸ್ತೆಗಳಿದ್ದು, ಯಾವುದೇ ಟ್ರಾಫಿಕ್ ಜಾಮ್ ಉಂಟಾಗುವುದಿಲ್ಲ. ಹಾಗಿದ್ದರೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯಾಕೆ ಬೇಕು ಎಂದು ರಂಗರಾಜು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.