thumbnail

By

Published : Jan 5, 2021, 3:43 PM IST

ETV Bharat / Videos

ನನ್ನ ಮಗಳಿಂದಾಗಿ ದಾವಣಗೆರೆಗೆ ಕೊರೊನಾ ಬಂದಿಲ್ಲ: ಸಂಸದ ಸಿದ್ದೇಶ್ವರ್​​

ದಾವಣಗೆರೆ: ಕೊರೊನಾ ಬಂದ ಹೊಸತರಲ್ಲಿ ದಾವಣಗೆರೆ ಜಿಲ್ಲೆ ಗ್ರೀನ್​ ಝೋನ್​​ನಲ್ಲಿತ್ತು. ಆದರೆ ತದನಂತರದ ದಿನಗಳಲ್ಲಿ ನಮ್ಮ ಜಿಲ್ಲೆಗೂ ಕೊರೊನಾ ಮಹಾಮಾರಿ ಆವರಿಸಿತು. ನನ್ನ ಮಗಳು ಅಶ್ವಿನಿ ಕೂಡ ಕೊರೊನಾ ರೋಗಕ್ಕೆ ತುತ್ತಾಗಿದ್ದಳು. ತದನಂತರ ಮತ್ತೊಬ್ಬ ಮಗನಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ನನ್ನ ಮಗಳಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಹಬ್ಬಿಲ್ಲ. ಬದಲಾಗಿ ದಾವಣಗೆರೆ ಜಾಲಿನಗರದಿಂದ ಇದು ಪ್ರಾರಂಭಗೊಂಡಿತು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರವಾಗಿತ್ತು. ಆದರೆ ಜಿಲ್ಲೆಯಲ್ಲಿ ಕೊರೊನಾ ಕೇಸ್​​ಗಳು ಹಂತ ಹಂತವಾಗಿ ಇಳಿಮುಖವಾಗಲು ಜಿಲ್ಲಾಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದು ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್​​ಗಳಿಗೆ ಸನ್ಮಾನ ಸಮಾರಂಭದಲ್ಲಿ ಸಂಸದ ಸಿದ್ದೇಶ್ವರ್​​ ಪ್ರಶಂಸೆ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.