ರೈತರಿಂದ ಹೆದ್ದಾರಿ ತಡೆ ಕುರಿತು ಬೆಂಗಳೂರು ನಗರ ಪೊಲೀಸ್​​ ಆಯುಕ್ತರು ಹೇಳಿದ್ದು ಹೀಗೆ

By

Published : Feb 5, 2021, 4:48 PM IST

thumbnail
ಬೆಂಗಳೂರು: ರೈತರ ಪ್ರತಿಭಟನೆ ಕುರಿತು ಇದುವರೆಗೆ ಯಾರೂ ಅನುಮತಿ ಕೇಳಲು ಬಂದಿಲ್ಲ. ಹೀಗಾಗಿ ಸಾಂಕೇತಿಕವಾಗಿ ಎರಡು ಮೂರು ಗಂಟೆ ಹೆದ್ದಾರಿ ಬಂದ್​​ ಮಾಡಬಹುದು ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ತಿಳಿಸಿದರು. ನಾಳೆ ರೈತರಿಂದ ಹೆದ್ದಾರಿ ತಡೆ ಕುರಿತು ಮಾತನಾಡಿದ ಆಯುಕ್ತರು, ಸದ್ಯಕ್ಕೆ ಯಾರು ಅನುಮತಿ ಕೇಳಲು ಬಂದಿಲ್ಲ. ಮಾಧ್ಯಮ ಮೂಲದಿಂದ ನಮಗೆ ಮಾಹಿತಿ ಬಂದಿದೆ.‌ ಹೀಗಾಗಿ ಸಾಂಕೇತಿಕವಾಗಿ ಎರಡು ಮೂರು ಗಂಟೆ ಬಂದ್ ಮಾಡಬಹುದು. ಅಧಿಕಾರಿಗಳು ಆಯಾ ಹಂತದಲ್ಲಿ ಬಂದೋಬಸ್ತ್ ಮಾಡ್ತಾರೆ. ಸಂಜೆವರೆಗೂ ನೋಡ್ತೇವೆ, ಯಾರಾದ್ರು ಅನುಮತಿ ಕೇಳಲು ಬರ್ತಾರಾ ಎಂದು. ನಾವು ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿದ್ದೇವೆ. ಶಾಂತಿ ಭಂಗಕ್ಕೆ ಅವಕಾಶ ಇರೋದಿಲ್ಲ. ಜನರಿಗೆ ತೊಂದರೆ ಕೊಡಲು ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.