ಚಿರತೆ ಬಾಯಿಂದ ಕುರಿ ಬಿಡಿಸಿಕೊಂಡು ಬಂದ ಕುರಿಗಾಹಿ: ಕೊನೆಗೂ ಬೋನಿಗೆ ಬಿದ್ದ ಚಿರತೆ - Sheep rescued from leopard

By ETV Bharat Karnataka Team

Published : Sep 14, 2024, 3:47 PM IST

Updated : Sep 14, 2024, 3:59 PM IST

thumbnail
ಚಿರತೆ ಬಾಯಿಂದ ಕುರಿ ಬಿಡಿಸಿಕೊಂಡು ಬಂದ ಕುರಿಗಾಹಿ (ETV Bharat)

ಚಾಮರಾಜನಗರ: ಚಿರತೆಯನ್ನು ಅಟ್ಟಾಡಿಸಿ, ಬೆದರಿಸಿ ಚಿರತೆ ಹೊತ್ತೊಯ್ದಿದ್ದ ಕುರಿಯನ್ನು ಬಚಾಬ್ ಮಾಡಿ ತಂದ ಘಟನೆ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರದಂದು ಈ ರೋಚಕ ಘಟನೆ ನಡೆದಿದೆ‌. ಕೆಂಪನಪಾಳ್ಯ ಗ್ರಾಮದ ಮುದುಮಲೆ ಗುಡ್ಡದ ಸಮೀಪ ಚಿರತೆಯೊಂದು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ಕುರಿಯನ್ನು ಎತ್ತುಕೊಂಡು ಹೋಗುತ್ತಿತ್ತು. ಈ ವೇಳೆ, ಕುರಿಗಾಹಿ ಮಂಜು ಚಿತ್ರಪ್ಪ ಅದನ್ನು ಗಮನಿಸಿ ಬೆನ್ನಟ್ಟಿಕೊಂಡು ಹೋಗಿ, ಹೆದರಿಸಿದ ವೇಳೆ ಗಾಬರಿಗೊಂಡ ಚಿರತೆಯು ಕುರಿಯನ್ನು ಬಿಟ್ಟು ನೀರಿನ ಪೈಪ್​ ಒಳಗೆ ಸೇರಿಕೊಂಡಿದೆ.

ಕುರಿಗಾಹಿ ಮಂಜು ಚಿತ್ರಪ್ಪ ಬದುಕಿದೆಯಾ ಬಡ ಜೀವವೇ ಎಂದು ಕುರಿಯನ್ನು ಕರೆತಂದಿದ್ದಾನೆ. ಬಳಿಕ, ಅರಣ್ಯ ಇಲಾಖೆಗೆ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಬೋನ್​ ಮೂಲಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

"ಈಗಾಗಲೇ ಮೂರು ಕುರಿಗಳನ್ನು ಚಿರತೆ ಎತ್ತೊಯ್ದಿವೆ. ಇದನ್ನು ನಾವು ಬಿಡಿಸಿಕೊಂಡು ಬಂದೆವು. ಮೂರು ಕುರಿಗಳು ಎತ್ತೊಯ್ದಿರುವ ಬಗ್ಗೆ ನಾವು ಯಾರಿಗೂ ಹೇಳಿರಲಿಲ್ಲ. ಹಾಗಾಗಿ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ." ಎನ್ನುತ್ತಾರೆ ಮಂಜು ಚಿತ್ರಪ್ಪ.

ಇದನ್ನೂ ನೋದಿ: ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ: ರಾತ್ರಿ ಹೊರ ಬರಲು ಹೆದರುತ್ತಿರುವ ಜನರು! - man died in elephant attack

Last Updated : Sep 14, 2024, 3:59 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.