ಫರಿದಾಬಾದ್​ ರೈಲ್ವೆ ಕೆಳ ಸೇತುವೆಯಡಿ 10 ಅಡಿ ಮಳೆನೀರು: ಕಾರು ಸಿಲುಕಿ ಇಬ್ಬರು ಯುವಕರ ಸಾವು - Car got stuck two died

By ETV Bharat Karnataka Team

Published : Sep 14, 2024, 7:24 PM IST

thumbnail
ಫರಿದಾಬಾದ್​ ರೈಲ್ವೇ ಕೆಳಸೇತುವೆಯಡಿ 10 ಅಡಿ ಮಳೆನೀರು: ಕಾರು ಸಿಲುಕಿ ಇಬ್ಬರು ಯುವಕರು ಸಾವು (ETV Bharat)

ಫರಿದಾಬಾದ್​: ಹರಿಯಾಣದ ಫರಿದಾಬಾದ್​ನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಓಲ್ಡ್​ ಫರಿದಾಬಾದ್​ ರೈಲ್ವೆ ಅಂಡರ್​ ಪಾಸ್​ನಲ್ಲಿ ಸುಮಾರು 10 ಅಡಿ ನೀರು ತುಂಬಿದೆ. ಇದನ್ನು ಗಮನಿಸದೇ, ಗುರುಗ್ರಾಮ್​ ಎಚ್​ಡಿಎಫ್​ಸಿ ಬ್ಯಾಂಕ್​ ಮ್ಯಾನೇಜರ್​​ ಹಾಗೂ ಕ್ಯಾಷಿಯರ್​ ಶಾರ್ಟ್​ ಕಟ್​ ತೆಗೆದುಕೊಳ್ಳುವ ಸಲುವಾಗಿ ಅಂಡರ್​ಪಾಸ್​ಗೆ ಪ್ರವೇಶಿಸಿದ್ದು, ಅಂಡರ್​ಪಾಸ್​ನ ಮಳೆಯ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗುರುಗ್ರಾಮ್​ನಿಂದ ಫರಿದಾಬಾದ್​ಗೆ ಬರುತ್ತಿದ್ದ ಅವರು, ಅಂಡರ್​ಪಾಸ್​ನಲ್ಲಿ ನೀರು ತುಂಬಿರುವ ಬಗ್ಗೆ ತಿಳಿಯದೇ, ಶಾರ್ಟ್​ಕಟ್​ ತೆಗೆದುಕೊಳ್ಳುವ ಸಲುವಾಗಿ ಅಂಡರ್​ಪಾಸ್​ಗೆ ಕಾರು ನುಗ್ಗಿಸಿದ್ದಾರೆ. ಅಂಡರ್​ಪಾಸ್​ನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾರು ನೀರಿನಲ್ಲಿ ಮುಳುಗಿ ಸ್ವಯಂಚಾಲಿತವಾಗಿ ಲಾಕ್​ ಆಗಿದೆ. ಇದರಿಂದ ಕಾರಿನಲ್ಲಿದ್ದ ಯುವಕರಿಬ್ಬರು ಹೊರ ಬರಲಾಗದೇ, ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಕ್ಯಾಷಿಯರ್​ ವಿರಾಜ್​ ದ್ವಿವೇದಿ ಹಾಗೂ ಬ್ಯಾಂಕ್​ ಮ್ಯಾನೇಜರ್​ ಪುಣ್ಯ ಶ್ರೇಯ್​ ಶರ್ಮಾ ಸಾವನ್ನಪ್ಪಿದವರು.

ರೈಲ್ವೆ ಕೆಳ ಸೇತುವೆ ಬಳಿ ಪೊಲೀಸ್ ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಅಂಡರ್‌ಪಾಸ್‌ನಲ್ಲಿ ವಾಹನಗಳು ಹೋಗದಂತೆ ಎಲ್ಲರಿಗೂ ಸೂಚನೆ ನೀಡಲಾಗಿತ್ತು. ಇಬ್ಬರಿಗೂ ಆ ಮಾರ್ಗವಾಗಿ ಹೋಗದಂತೆ ಪೊಲೀಸರು ನಿಷೇಧ ಹೇರಿದ್ದರು. ಆದರೂ ಇಬ್ಬರೂ ಆ ಮಾರ್ಗವಾಗಿ ತೆರಳಿದ್ದರು. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ನೋಡಿ: ಗುಜರಾತ್​ನಲ್ಲಿ ಭಾರಿ ಮಳೆ: ಸರ್ದಾರ್ ಸರೋವರ್ ಅಣೆಕಟ್ಟೆಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - SARDAR SAROVAR DAM

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.