thumbnail

By

Published : Sep 30, 2019, 8:30 PM IST

ETV Bharat / Videos

ರಾಯಣ್ಣನನ್ನ ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್​ವೈ ಬಗ್ಗೆ ಮಾತನಾಡ್ತಾರೆ.. ಭೀಮಾಶಂಕರ್​ ಪಾಟೀಲ್ ಕಿಡಿ

ದಾವಣಗೆರೆ:ಸಂಗೊಳ್ಳಿ ರಾಯಣ್ಣನನ್ನ ನಡು ರಸ್ತೆಯಲ್ಲಿ ನಿಲ್ಲಿಸಿದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ. ಜನರಿಗೆ ಟೊಳ್ಳು ಯಾರು, ಗಟ್ಟಿ ಯಾರು ಎಂದು ಗೊತ್ತಿದೆ. ಬಿಎಸ್​ವೈ ವಿಷಯಕ್ಕೆ ಬಂದರೆ ಸುಟ್ಟು ಭಸ್ಮ ಆಗುತ್ತೀರಿ ಎಂದು ಪರೋಕ್ಷವಾಗಿ ಕೆ ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್​ ಪಾಟೀಲ್ ಕಿಡಿಕಾರಿದ್ದಾರೆ. ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ, ಅವರಿಗೆ ಭಂಗ ತರುತ್ತಿದ್ದಾರೆ. ಧರ್ಮ ಕಾಪಾಡಿದವರು ಯಡಿಯೂರಪ್ಪ, ಅವರಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಬಿಎಸ್​ವೈ ವಿರುದ್ಧ ತೊಡೆ ತಟ್ಟಿದ್ರೆ ನಾವೂ ತೊಡೆತಟ್ಟಲು ರೆಡಿ ಇದ್ದೇವೆ. ಜಿಲ್ಲಾ ಪಂಚಾಯತ್​ನಲ್ಲಿ ಅವರ ಮಗ ಗೆಲ್ಲಲು ಬಿಎಸ್​ವೈ ಪ್ರಚಾರಕ್ಕೆ ಬರಬೇಕಾಯಿತು.‌ ಇಂತವರಿಂದ ಬಿಜೆಪಿ ಹೇಗೆ ಉಳಿಯುತ್ತೆ. ಇದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.