ಶಿಕ್ಷಕಿ ವೃತ್ತಿಯ ಜೊತೆ ಅಣಬೆ ಕೃಷಿಗೂ ಇವರು ಸೈ... ಕೊಪ್ಪಳ ಜಿಲ್ಲೆ ಗಂಗಾವತಿಯ ವಾಣಿಶ್ರೀ ಅಣಬೆ ಕೃಷಿಯಲ್ಲಿ ಸಾಧನೆ..
ವ್ಯವಸಾಯದಲ್ಲಿ ತೊಡಗಿಕೊಳ್ಳಲು ಭೂಮಿಯೇ ಬೇಕು ಅಂತೇನಿಲ್ಲ. ಕೃಷಿಭೂಮಿ ಇಲ್ಲದೆಯೂ ಸಹ ವ್ಯವಸಾಯ ಮಾಡಿ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ಅದು ಹೇಗೆ ಅನ್ನೋದಕ್ಕೆ ಕೊಪ್ಪಳದ ಗಂಗಾವತಿಯ ವಾಣಿಶ್ರೀ ಅವರು ತೋರಿಸಿಕೊಟ್ಟಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಅಣಬೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ..