ನಮ್ಮನ್ನ ಸ್ಟಾರ್ ಮಾಡಿರೋದೇ ನೀವು: ಪುನೀತ್ ಈ ಮಾತನ್ನ ಹೇಳಿದ್ದು ಯಾರಿಗೆ ಗೊತ್ತಾ?

By

Published : Mar 22, 2021, 6:10 PM IST

thumbnail
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆ ಆಗೋದಿಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಯುವರತ್ನ ಚಿತ್ರತಂಡ, ರಾಜ್ಯಾದ್ಯಂತ ಯುವ ಸಂಭ್ರಮ ಯಾತ್ರೆ ಶುರು ಮಾಡಿದೆ. ಭಾನುವಾರ ಕಲಬುರಗಿ, ಬೆಳಗಾವಿ, ಹಾಗು ಹುಬ್ಬಳ್ಳಿಗೆ ಯುವರತ್ನ ಪುನೀತ್​ ರಾಜ್​ಕುಮಾರ್​, ನಟರಾದ ಡಾಲಿ ಧನಂಜಯ್, ರವಿಶಂಕರ್ ಗೌಡ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೂಡಿ ಯುವ ಸಂಭ್ರಮ ಯಾತ್ರೆ ಮಾಡುತ್ತಿದೆ. ನಿನ್ನೆ ಹುಬ್ಬಳ್ಳಿಯ ಅರ್ಬನ್ ಒಯಾಸಿಸ್ ಮಾಲ್ ಹತ್ತಿರ ಸಾವಿರಾರು ಅಭಿಮಾನಿಗಳು ಪವರ್ ಸ್ಟಾರ್​ಗೆ ಮೂರು ಕ್ರೇನ್ ಮೂಲಕ ದೊಡ್ಡ ಹೂವು, ಸೇಬಿನ ಹಾರ ಹಾಕುವ ಅಭಿಮಾನ ಮೆರೆದಿದ್ದರು. ಈ ವೇಳೆ ಮಾತನಾಡಿದ ಪುನೀತ್​, ನೀವೇ ನಮ್ಮ ನಿಜವಾದ ಸ್ಟಾರ್​ಗಳು ಎಂದು ಅಭಿಮಾನಿಗಳನ್ನು ಹುರಿದುಂಬಿಸಿದರು. ಈ ಕ್ಷಣವನ್ನ ಹೊಂಬಾಳೆ ಫಿಲ್ಮ್ಸ್​ ತಂಡ ಚಿತ್ರೀಕರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.