ರಾಯಚೂರಿನ ಈ ಬ್ಯಾಂಕ್​ ಶಾಖೆಯಲ್ಲಿ 3ನೇ ಬಾರಿ ಕಳ್ಳತನ ಯತ್ನ.. ಖದೀಮರಿಗೆ ಸಿಕ್ಕಿದ್ದೇನು?

By

Published : Jul 14, 2022, 1:21 PM IST

Updated : Feb 3, 2023, 8:24 PM IST

thumbnail
ರಾಯಚೂರು: ಲಿಂಗಸೂಗೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್​ ಶಾಖೆಯಲ್ಲಿ ಮತ್ತೊಮ್ಮೆ ಕಳ್ಳತನ ಯತ್ನ ನಡೆದಿದೆ. ಒಂದೇ ವರ್ಷದಲ್ಲಿ ಸತತ ಮೂರನೇ ಬಾರಿಗೆ ಖದೀಮರು ಬ್ಯಾಂಕ್​ ಶಾಖೆಗೆ ನುಗ್ಗಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸೆರೆಯಾಗಿವೆ. ಬ್ಯಾಂಕ್​ನಲ್ಲಿನ ವಾಶ್​ ರೂಂನ ಕಿಟಕಿ ಒಡೆದು ಕಳ್ಳರು ನುಗ್ಗಿದ್ದಾರೆ. ಒಳಗಡೆ‌ ಹೋಗಿ ಸಿಸಿ ಕ್ಯಾಮರಾ ಕಿತ್ತೆಸೆದಿದ್ದಾರೆ. ಬ್ಯಾಂಕ್​ನಲ್ಲಿ ಏನೂ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.