ಅಗತ್ಯವಿಲ್ಲದಿದ್ದರೆ ಇಲ್ಲಿ ಬಿಡಿ, ಅಗತ್ಯವಾದುದನ್ನು ತೆಗೆದುಕೊಳ್ಳಿ.. - Wall of kindnes function at doddaballapur
🎬 Watch Now: Feature Video
ಅಶಕ್ತರು, ದುರ್ಬಲರಿಗೆ ರಕ್ಷಣೆಯ ಗೋಡೆಯಾಗಿರುತ್ತಾರೆ ಪೊಲೀಸರು. ಅದಕ್ಕೂ ಒಂದು ಹೆಜ್ಜೆ ಮುಂದಿಟ್ಟ ದೊಡ್ಡಬಳ್ಳಾಪುರ ಪೊಲೀಸರು ಹಸಿದವರಿಗೆ ಕರುಣೆಯ ಗೋಡೆಯಾಗಿದ್ದಾರೆ. ಸಕಲ ಸಂಪತ್ತು ಇರೋ ಜನ ಬಳಸಲಾಗದ ವಸ್ತುಗಳನ್ನ ಕಸಕ್ಕೆ ಹಾಕ್ತಾರೆ. ಆದರೆ, ಹಸಿದ ಜನ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇವರಿಬ್ಬರ ನಡುವೆ ಸೇತುವೆಯಾಗುವ ಕರುಣೆಯ ಗೋಡೆಗೆ ದೊಡ್ಡಬಳ್ಳಾಪುರ ಪೊಲೀಸರು ಸಾಕ್ಷಿಯಾಗಿದ್ದಾರೆ.