ಕೊರೊನಾ ಶಮನಕ್ಕೆ ಮಂಗಳೂರಿನಲ್ಲಿ ವಿಪ್ರ ಸಮಾಜದಿಂದ ದೇವರ ಜಪ!
ಕೊರೊನಾ ಭೀತಿ ದೂರವಾಗಲಿ ಎಂದು ಮಂಗಳೂರಿನ ವಿಪ್ರ ಸಮಾಜ ದೇವರ ಮೊರೆ ಹೋಗಿದೆ. ಇಂದು ಬೆಳ್ಳಂಬೆಳಗ್ಗೆ ನಗರದ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ವಿವಿಧ ದೇವರ ಜಪ ಮಾಡುವ ಮೂಲಕ ಕೊರೊನಾ ಶೀಘ್ರ ನಿಯಂತ್ರಣಕ್ಕೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಸಮಾಜದ ಎಲ್ಲ ಮುಖಂಡರು ಒಂದೆಡೆ ಸೇರಿ, ದನ್ವಂತರಿ ಮಂತ್ರ, ರುದ್ರ, ವಿಠ್ಠಲ ಸಹಸ್ರನಾಮವನ್ನು ಪಠಿಸಿದ್ದಾರೆ.