ಹಾಸನದ ಎಸ್​ಬಿಜಿ ಚಲನಚಿತ್ರ ಮಂದಿರಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರ ತಂಡ ಭೇಟಿ

By

Published : Jan 8, 2020, 11:29 PM IST

thumbnail
ನಗರದ ಎಸ್​ಬಿಜಿ ಚಲನಚಿತ್ರ ಮಂದಿರಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ಶಾನ್ವಿ ಶ್ರೀವಾಸ್ತವ ಹಾಗೂ ನಿರ್ದೇಶಕ ಸೇರಿದಂತೆ ಚಿತ್ರ ತಂಡ ಆಗಮಿಸಿ ಪ್ರೇಕ್ಷಕರನ್ನು ರಂಜಿಸಿದರು. ರಕ್ಷಿತ್ ಶೆಟ್ಟಿ ಹಾಗು ಶಾನ್ವಿ ಶ್ರೀವಾಸ್ತವ ಮಾತನಾಡಿ ಉತ್ತಮ ಕಥೆ, ಹಾಡುಗಳನ್ನು ನೀಡಿದಾಗ ಕನ್ನಡದ ಜನತೆ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ನಮ್ಮ ಚಲನ ಚಿತ್ರವೇ ಸಾಕ್ಷಿ. ಇಂತಹ ಪ್ರೋತ್ಸಾಹ ಮುಂದೆ ಉತ್ತಮ ಸಿನಿಮಾ ನಿರ್ಮಿಸಲು ಸಹಾಯಕ. ಇದೇ ರೀತಿ ಪ್ರೋತ್ಸಾಹ ಕೊಡುವ ಮೂಲಕ ಕನ್ನಡ ಸಿನಿಮಾ ಉಳಿಸಬೇಕು ಎಂದು ಅವರು ಸಿನಿಪ್ರಿಯರಲ್ಲಿ ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.