thumbnail

By

Published : Feb 4, 2021, 4:37 PM IST

ETV Bharat / Videos

ವಾವ್!​​ ಮಹಾರಾಜ್ ವಾವ್!​​: ರಾಜ್ಯಸಭೆಯಲ್ಲಿ ಸಿಂಧಿಯಾ, ದಿಗ್ವಿಜಯ್​ ನಡುವೆ ಹಾಸ್ಯಾಸ್ಪದ ಚರ್ಚೆ!

ನವದೆಹಲಿ: ರಾಜ್ಯಸಭೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್​ ಸಂಸದ ದಿಗ್ವಿಜಯ್ ಸಿಂಗ್ ಹಾಗೂ ಬಿಜೆಪಿ ಸಂಸದೆ ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ಹಾಸ್ಯಾಸ್ಪದ ಚರ್ಚೆ ನಡೆಯಿತು. 2019ರ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ರೈತರ ಸುಧಾರಣೆಗೋಸ್ಕರ ಅನೇಕ ಭರವಸೆ ನೀಡಿತ್ತು. ಈ ವೇಳೆ ಕೃಷಿ ಸಚಿವರಾಗಿದ್ದ ಶರದ್​ ಪವಾರ್​ ಕೃಷಿಯಲ್ಲಿ ಖಾಸಗಿ ವಲಯ ಸಹಭಾಗಿತ್ವದ ಅಗತ್ಯವಿದೆ ಎಂದಿದ್ದರು ಎಂದು ಸಿಂಧಿಯಾ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದಿಗ್ವಿಜಯ್​ ಸಿಂಗ್​ ವಾವ್​! ಮಹಾರಾಜ್​ ವಾವ್!, ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್​ನಲ್ಲಿದ್ದಾಗ ಎಷ್ಟೊಂದು ಬಲವಾಗಿ ಪಕ್ಷ ನಿಷ್ಠೆ ಇಟ್ಟುಕೊಂಡಿದ್ರೂ ಈಗಲೂ ಬಿಜೆಪಿಗೆ ಬಂದು ಅಷ್ಟೇ ಬಲವಾಗಿ ಪಕ್ಷನಿಷ್ಠೆ ಇಟ್ಟುಕೊಂಡಿದ್ದೀರಿ. ನಿಮಗೆ ನನ್ನ ಅಭಿನಂದನೆಗಳು ಎಂದು ಹಾಸ್ಯ ಚಟಾಕಿ ಹಾರಿಸಿದ್ರು!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.