thumbnail

By

Published : Nov 24, 2019, 8:56 AM IST

ETV Bharat / Videos

ವಿದ್ಯಾರ್ಥಿಗಳ ಕೈಚಳಕ, ಗೋಡೆ ಮೇಲೆ ಅರಳಿತು ಪರಿಸರ ಜಾಗೃತಿ ಕುರಿತ ವರ್ಣಚಿತ್ರ

ಚೆನ್ನೈ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ವಾಲ್​ ಪೇಂಟಿಂಗ್​' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಸುಮಾರು 1500 ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡೂವರೆ ಕಿ.ಮೀ ಉದ್ದದ ಗೋಡೆಯಲ್ಲಿ ಒಂದೇ ದಿನದಲ್ಲಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಲಾಯ್ತು. ತಮಿಳು ಸಂಸ್ಕ್ರತಿ, ಪರಿಸರ, ಪ್ಲಾಸ್ಟಿಕ್​ ಬಳಕೆ ಪರಿಣಾಮಗಳು ಮೊದಲಾದ ವಿಷಯದಲ್ಲಿ ಗೋಡೆ ಮೇಲೆ ಆಕರ್ಷಕ ವರ್ಣಚಿತ್ರಗಳು ಮೂಡಿಬಂದವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.