ಯೂತ್​ ಕಾಂಗ್ರೆಸ್​ ಮುಖಂಡನ ಮೇಲೆ ಕ್ರಿಕೆಟ್​​ ಬ್ಯಾಟ್​​​ನಿಂದ ಮಾರಣಾಂತಿಕ ಹಲ್ಲೆ: ವಿಡಿಯೋ

By

Published : Feb 14, 2020, 12:44 PM IST

Updated : Feb 14, 2020, 2:30 PM IST

thumbnail
ಯೂತ್​ ಕಾಂಗ್ರೆಸ್​ ಮುಖಂಡನೊಬ್ಬನ ಮೇಲೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಯುವ ಕಾಂಗ್ರೆಸ್​ ಮುಖಂಡ ಜಯನ್​ ಮೇಲೆ ಕ್ರಿಕೆಟ್​ ಬ್ಯಾಟ್​​ನಿಂದ ಹಲ್ಲೆ ನಡೆಸಲಾಗಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್​ ಮೇಲೆ ಬಂದ ಡಿಸಿಸಿಇ ಅಧ್ಯಕ್ಷ ಹಾಗೂ ಮತ್ತೋರ್ವ ವ್ಯಕ್ತಿ ಈ ಕೃತ್ಯವೆಸಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನ ತಿರುವನಂತಪುರಂನ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ಯಾಂಕ್​​ನಲ್ಲಿ ನಡೆದ ಅವ್ಯವಹಾರದ ಬಗ್ಗೆ ದೂರು ದಾಖಲು ಮಾಡಿದ್ದಕ್ಕಾಗಿ ಈ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.
Last Updated : Feb 14, 2020, 2:30 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.