thumbnail

By

Published : Mar 3, 2022, 8:53 AM IST

Updated : Feb 3, 2023, 8:18 PM IST

ETV Bharat / Videos

ಉಕ್ರೇನ್​ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ.. ಕುಟುಂಬಸ್ಥರು ಹೇಳೋದೇನು?

ತುಮಕೂರು: ಯುದ್ಧ ಪೀಡಿತ ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಆಗುತ್ತಿದೆ. ಆದರೆ ತುಮಕೂರು ಮೂಲದ ಸಂಪತ್ ಎನ್ನುವ ವಿದ್ಯಾರ್ಥಿಗೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆತನ ಪೋಷಕರು ಆರೋಪಿಸಿದ್ದಾರೆ. ಅಧಿಕಾರಿಗಳು ಸಂಪತ್ನನ್ನು ಸಂಪರ್ಕಿಸಿದ್ದರೆ ಇಷ್ಟೊತ್ತಿಗಾಗಲೇ ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದನು. ಯುದ್ಧ ನಡೆಯುತ್ತಿರುವ ಪ್ರದೇಶದಲ್ಲೇ ಸಂಪತ್​ ಇದ್ದಿದ್ದರಿಂದ ಸರ್ಕಾರವನ್ನೂ ಸಹ ನಾವು ದೂರಲು ಸಾಧ್ಯವಿಲ್ಲ. ಇನ್ನು ನವೀನ್ ಎಂಬ ವಿದ್ಯಾರ್ಥಿ ಮೃತಪಟ್ಟ ನಂತರ ರಾಯಭಾರಿ ಕಚೇರಿ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಖಾರ್ಕಿವ್ ನಗರವನ್ನು ಬಿಟ್ಟು ತಕ್ಷಣ ಹೊರಬರುವಂತೆ ತಿಳಿಸಿದ್ದಾರೆ. ಸಂಪತ್​ ತಾನಿರುವ ಜಾಗದಿಂದ ಹೊರಟಿದ್ದಾನೆ ಎಂದು ಸಂಪತ್ ಸಹೋದರ ಸಂತೋಷ್ ತಿಳಿಸಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.