thumbnail

By

Published : Jan 21, 2023, 2:04 PM IST

Updated : Feb 3, 2023, 8:39 PM IST

ETV Bharat / Videos

ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಭೇಟಿ ಕೊಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಅಶ್ವತ್ಥ​ ನಾರಾಯಣ  ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದರು. ಇನ್ನು ಮೊದಲ ಬಾರಿಗೆ ಜೆಪಿ ನಡ್ಡಾ ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ ಭೇಟಿ ನೀಡಿದ್ದು, ಆಶ್ರಮದ ಪ್ರಣವ ಮಂಟಪದ ದರ್ಶನ ಮಾಡಿದ್ದಲ್ಲದೇ ಸಿದ್ದೇಶ್ವರ ಶ್ರೀಗಳು ವಾಸವಿದ್ದ ಕೋಣೆಗೆ ಭೇಟಿ ನೀಡಿದರು.

ಇದಕ್ಕೂ ಮೊದಲು ಜೆಪಿ ನಡ್ಡಾ ಗುಲ್ಬರ್ಗಾದಿಂದ ವಿಶೇಷ ವಿಮಾನದ ಮೂಲಕ ವಿಜಯಪುರದ ಸೈನಿಕ ಶಾಲೆಗೆ  ಆಗಮಿಸಿ ಅಲ್ಲಿಂದ  ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಸ್ಥಳವಾಗಿರುವ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.‌ 

ಆಗಮಿಸಿದ ಮುಖಂಡರಿಗೆ ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿರಚಿತ ಇಂಗ್ಲೀಷ ಭಾಷೆಯ ಪುಸ್ತಕ ನೀಡಿದರು. ನಂತರ ಮಾತನಾಡಿದ ಜೆ ಪಿ ನಡ್ಡಾ ನಾನು ಮಾನವೀಯತೆಯಿಂದ ಕೆಲಸ ಮಾಡುವ ಜೊತೆಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬಂತೆ ‌ನಡೆಯೋದಾಗಿ‌ ಹೇಳಿದರು. 

ಇದನ್ನೂ ಓದಿ: ಮನುಷ್ಯನಿಗೆ ಧರ್ಮ ಇರಬೇಕು, ಧರ್ಮಕ್ಕೋಸ್ಕರ ಮನುಷ್ಯನಿಲ್ಲ: ಸಿದ್ದರಾಮಯ್ಯ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.