ETV Bharat / sukhibhava

ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಿಲ್ಲ: ವೈದ್ಯರು

author img

By ETV Bharat Karnataka Team

Published : Oct 10, 2023, 6:08 PM IST

ಮಾನಸಿಕ ಆರೋಗ್ಯ ವಿಚಾರವನ್ನು ಅರ್ಥೈಸಿಕೊಳ್ಳುವಿಕೆ ಮತ್ತು ಜಾಗೃತಿಯ ಕೊರತೆ ಜನರಲ್ಲಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ.

80percent  of Indians do not receive treatment for mental health problems
80percent of Indians do not receive treatment for mental health problems

ನವದೆಹಲಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ವಿಚಾರದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಇದರ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇದೆ. ನಿರ್ಲಕ್ಷ್ಯ ಮತ್ತು ಕಳಂಕದ ರೀತಿಯಲ್ಲೇ ಈ ಸಮಸ್ಯೆಯನ್ನು ಅವರು ನೋಡುತ್ತಾರೆ ಎಂದು ಎಂದು ವೈದ್ಯರು ಹೇಳುತ್ತಿದ್ದಾರೆ.

ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಶಿಕ್ಷಣ ವ್ಯವಸ್ಥೆಯ ಅಂತರ್ಭಾಗವಾಗಬೇಕು ಎಂಬ ಅರಿವು ಮೂಡಿಸುವ ಪ್ರಯತ್ನ ನಡೆಸಬೇಕು. ಮಾನಸಿಕ ಸಮಸ್ಯೆಗಳ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು. ಮಾನಸಿಕ ಆರೋಗ್ಯ ವಿಚಾರದ ಅರ್ಥೈಸಿಕೊಳ್ಳುವಿಕೆ ಮತ್ತು ಜಾಗೃತಿಯ ಕೊರತೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಪ್ರಕರಣಗಳು ಪತ್ತೆಯಾಗುವುದೇ ಇಲ್ಲ ಎಂದು ಏಮ್ಸ್​​ನ ಸೈಕಿಯಾಟ್ರಿಕ್​ ವಿಭಾಗದ ಡಾ.ನಂದ ಕುಮಾರ್​​ ತಿಳಿಸಿದರು.

ಅನಾರೋಗ್ಯಕ್ಕೆ ಒಳಗಾಗದೇ ಆಕೆ ಅಥವಾ ಆತನಿಗೆ ಚಿಕಿತ್ಸೆ ಬೇಕು ಎಂದು ತಿಳಿದುಕೊಳ್ಳದೇ ಇದ್ದರೆ, ಅವರು ಹೇಗೆ ಚಿಕಿತ್ಸೆ ಪಡೆಯುತ್ತಾರೆ? ರೋಗಲಕ್ಷಣಗಳನ್ನು ಗುರುತಿಸುವ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವ ಸಮಯದ ನಡುವೆ ಸಾಮಾನ್ಯವಾಗಿ ದೊಡ್ಡ ಅಂತರವಿರುತ್ತದೆ. ಹೀಗಾಗಿ ಸಂಕೀರ್ಣತೆಗಳು ಹೆಚ್ಚುತ್ತವೆ ಎಂದರು.

ಮಾನಸಿಕ ಆರೋಗ್ಯ ಸಮಸ್ಯೆಗಳು ವಿಶಾಲ ವ್ಯಾಪ್ತಿ ಹೊಂದಿವೆ. ನಿದ್ರಾಹೀನತೆ, ಸೌಮ್ಯ ಆತಂಕ ಮತ್ತು ಖಿನ್ನತೆಯಿಂದ ತೀವ್ರತರ ಮನಸ್ಥಿತಿ ಸಮಸ್ಯೆ, ಸೈಕೋಸಿಸ್​​ನಂತಹ ಹಲವು ಸಮಸ್ಯೆಗಳಿರುತ್ತದೆ. ಸಮಸ್ಯೆ ಇದ್ದಲ್ಲಿ ರೋಗಿಗೆ ನಿಖರ ಸಮಸ್ಯೆಯನ್ನು ಅರಿತುಕೊಳ್ಳಲು ಅಥವಾ ಗುರುತಿಸಲು ಕಷ್ಟವಾಗುತ್ತದೆ ಎಂದು ಡಾ.ಕುಮಾರ್​ ತಿಳಿಸಿದ್ದಾರೆ.

ಯುವ ಜನತೆಯ ಸಮಸ್ಯೆ ನಿರ್ಲಕ್ಷ್ಯ: ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಹದಿ ಹರೆಯದವರ ಸಮಸ್ಯೆ ಎಂದು ತಪ್ಪಾಗಿ ಗುರುತಿಸುವ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಇದರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇದು ಮಾನಸಿಕ ಸಮಸ್ಯೆ ಎಂಬ 'ಬಿರುದು' ಹೊಂದಿದ್ದು, ಇವರಿಗೆ ಚಿಕಿತ್ಸೆ ನೀಡುವ ಬದಲಾಗಿ ತಾರತಮ್ಯದಿಂದ ಕಾಣುವ ಪ್ರವೃತ್ತಿ ಇದೆ ಎಂದರು.

ಮನೋವಿಜ್ಞಾನಿ ಸೃಷ್ಟಿ ಅಸ್ತಾನ ಮಾತನಾಡಿ, ಸರಿಯಾದ ಸಮಯದಲ್ಲಿ ನೀಡುವ ಚಿಕಿತ್ಸೆಯಿಂದಾಗಿ ಜನರು ಸಹಾಯ ಕೇಳುವುದನ್ನು ತಡೆಗಟ್ಟಬಹುದು. ಈ ಚಿಕಿತ್ಸೆಯು ಖಾಸಗಿ ವಲಯದಲ್ಲಿ ಕೊಂಚ ವೆಚ್ಚದಾಯಕ. ಈ ನಡುವೆ ಸರ್ಕಾರ ಇದಕ್ಕೆ ಚಿಕಿತ್ಸೆ ಆರಂಭಿಸಿದ್ದು, ಅನೇಕ ಮಂದಿ ಅನಾನುಕೂಲತೆಯಿಂದ ಹೋಗುವುದಿಲ್ಲ ಎಂದರು.

ಮಾನಸಿಕ ಆರೋಗ್ಯ ವಿಷಯದಲ್ಲಿ ವೃತ್ತಿಪರರ ಸಂಖ್ಯೆ ಕೂಡ ಹೆಚ್ಚು ಗಣನೀಯವಾಗಿಲ್ಲ. 2016ರಲ್ಲಿ 6000 ಇದ್ದ ಸಂಖ್ಯೆ 2023ರಲ್ಲಿ 9000 ಇದೆ. ಈ ನಿಟ್ಟಿನಲ್ಲಿ ಮನೋ ವಿಜ್ಞಾನಿಗಳ ಸಂಖ್ಯೆ ಕೂಡ ಅಧಿಕವಾಗಬೇಕಿದೆ. ಮನೋ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ವೃತ್ತಿಪರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕುಮಾರ್​ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವಾಗುವ ಅಂಶ: ಎನ್​ಸಿಆರ್​ಬಿ ದತ್ತಾಂಶದ ಪ್ರಕಾರ, 2016ರಲ್ಲಿ 1.3 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೆ, 2021ರಲ್ಲಿ 1.64 ಲಕ್ಷ ವರದಿಯಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆ, ಖಿನ್ನತೆಗಳು ಕೂಡ ಅನೇಕ ಪ್ರಕರಣದಲ್ಲಿ ಆತ್ಮಹತ್ಯೆಗೆ ಕಾರಣವಾಗಿದೆ.

ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತವೆ. ಇದು ಅನೇಕ ಬಾರಿ ಗಣನೆಗೆ ಬರುವುದಿಲ್ಲ. ದೇಹಿಕ ಮತ್ತು ಮಾನಸಿಕ ಚಟುವಟಿಕೆಯಂತಹ ಸಾಮಾಜಿಕ ಒಗ್ಗಟ್ಟಿನ ಪ್ರೋತ್ಸಾಹ ಮಾದರಿಗಳು ಅವಶ್ಯಕ. ಅನೇಕ ಯುವಕರು ಹದಿಹರೆಯದ ಖಿನ್ನತೆ, ದೌರ್ಜನ್ಯ, ಆತಂಕ, ನಿದ್ರಾಹೀನತೆ, ಡಿಜಿಟಲ್​ ಸಾಧನಗಳ ಮೇಲಿನ ಅವಲಂಬನೆ ಮತ್ತು ಇತರೆ ವ್ಯಸನಗಳಿಂದ ಬಳಲುತ್ತಿದ್ದು, ಅನೇಕ ಬಾರಿ ಆತ್ಮಹತ್ಯೆಗೆ ಕಾರಣವಾಗುತ್ತದೆ.

ಐಐಟಿ, ಐಐಎಂ ಮತ್ತು ಮೆಡಿಕಲ್​ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಸ್ಪರ್ಧೆಯ ಕೋಚಿಂಗ್​ ತಾಣವಾಗಿರುವ ಕೋಟಾದಲ್ಲಿ ಪದೇ ಪದೇ ಇಂತಹ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ ಎಂದು ಇದೆ ವೇಳೆ ಉಲ್ಲೇಖಿಸಿದರು. ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಅದನ್ನು ತಡೆಗಟ್ಟುವ ಸಂಬಂಧ ನಾವು ಜಾಗೃತಿ ಸೃಷ್ಟಿಸಬೇಕಿದ್ದು, ಈ ಸಂಬಂಧ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.

ದೈಹಿಕ ಆರೋಗ್ಯದಿಂದ ಮಾನಸಿಕ ಆರೋಗ್ಯವನ್ನು ಬೇರ್ಪಡಿಸಲಾಗದು. ಎರಡೂ ಕೂಡ ಒಂದಕ್ಕೊಂದು ಸಂಬಂಧ ಹೊಂದಿವೆ. ಮನಸ್ಸು ಮತ್ತು ದೇಹದ ಕುರಿತು ಶಾಲೆ ಮತ್ತು ಕಾಲೇಜು ಮಟ್ಟದಲ್ಲೇ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಮಾನಸಿಕ ಆರೋಗ್ಯ ವಿಷಯವನ್ನು ಆರಂಭದಲ್ಲೇ ಪತ್ತೆ ಮಾಡಬಹುದು ಎಂದು ಡಾ.ಕುಮಾರ್ ವಿವರಿಸಿದರು.

ಇದನ್ನೂ ಓದಿ: ವಾಯು ಮಾಲಿನ್ಯದ ಹೆಚ್ಚಳ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣ: ಆರೋಗ್ಯ ತಜ್ಞರಿಂದ ಎಚ್ಚರಿಕೆ

ನವದೆಹಲಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ವಿಚಾರದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಇದರ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇದೆ. ನಿರ್ಲಕ್ಷ್ಯ ಮತ್ತು ಕಳಂಕದ ರೀತಿಯಲ್ಲೇ ಈ ಸಮಸ್ಯೆಯನ್ನು ಅವರು ನೋಡುತ್ತಾರೆ ಎಂದು ಎಂದು ವೈದ್ಯರು ಹೇಳುತ್ತಿದ್ದಾರೆ.

ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಶಿಕ್ಷಣ ವ್ಯವಸ್ಥೆಯ ಅಂತರ್ಭಾಗವಾಗಬೇಕು ಎಂಬ ಅರಿವು ಮೂಡಿಸುವ ಪ್ರಯತ್ನ ನಡೆಸಬೇಕು. ಮಾನಸಿಕ ಸಮಸ್ಯೆಗಳ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು. ಮಾನಸಿಕ ಆರೋಗ್ಯ ವಿಚಾರದ ಅರ್ಥೈಸಿಕೊಳ್ಳುವಿಕೆ ಮತ್ತು ಜಾಗೃತಿಯ ಕೊರತೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಪ್ರಕರಣಗಳು ಪತ್ತೆಯಾಗುವುದೇ ಇಲ್ಲ ಎಂದು ಏಮ್ಸ್​​ನ ಸೈಕಿಯಾಟ್ರಿಕ್​ ವಿಭಾಗದ ಡಾ.ನಂದ ಕುಮಾರ್​​ ತಿಳಿಸಿದರು.

ಅನಾರೋಗ್ಯಕ್ಕೆ ಒಳಗಾಗದೇ ಆಕೆ ಅಥವಾ ಆತನಿಗೆ ಚಿಕಿತ್ಸೆ ಬೇಕು ಎಂದು ತಿಳಿದುಕೊಳ್ಳದೇ ಇದ್ದರೆ, ಅವರು ಹೇಗೆ ಚಿಕಿತ್ಸೆ ಪಡೆಯುತ್ತಾರೆ? ರೋಗಲಕ್ಷಣಗಳನ್ನು ಗುರುತಿಸುವ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವ ಸಮಯದ ನಡುವೆ ಸಾಮಾನ್ಯವಾಗಿ ದೊಡ್ಡ ಅಂತರವಿರುತ್ತದೆ. ಹೀಗಾಗಿ ಸಂಕೀರ್ಣತೆಗಳು ಹೆಚ್ಚುತ್ತವೆ ಎಂದರು.

ಮಾನಸಿಕ ಆರೋಗ್ಯ ಸಮಸ್ಯೆಗಳು ವಿಶಾಲ ವ್ಯಾಪ್ತಿ ಹೊಂದಿವೆ. ನಿದ್ರಾಹೀನತೆ, ಸೌಮ್ಯ ಆತಂಕ ಮತ್ತು ಖಿನ್ನತೆಯಿಂದ ತೀವ್ರತರ ಮನಸ್ಥಿತಿ ಸಮಸ್ಯೆ, ಸೈಕೋಸಿಸ್​​ನಂತಹ ಹಲವು ಸಮಸ್ಯೆಗಳಿರುತ್ತದೆ. ಸಮಸ್ಯೆ ಇದ್ದಲ್ಲಿ ರೋಗಿಗೆ ನಿಖರ ಸಮಸ್ಯೆಯನ್ನು ಅರಿತುಕೊಳ್ಳಲು ಅಥವಾ ಗುರುತಿಸಲು ಕಷ್ಟವಾಗುತ್ತದೆ ಎಂದು ಡಾ.ಕುಮಾರ್​ ತಿಳಿಸಿದ್ದಾರೆ.

ಯುವ ಜನತೆಯ ಸಮಸ್ಯೆ ನಿರ್ಲಕ್ಷ್ಯ: ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಹದಿ ಹರೆಯದವರ ಸಮಸ್ಯೆ ಎಂದು ತಪ್ಪಾಗಿ ಗುರುತಿಸುವ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಇದರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇದು ಮಾನಸಿಕ ಸಮಸ್ಯೆ ಎಂಬ 'ಬಿರುದು' ಹೊಂದಿದ್ದು, ಇವರಿಗೆ ಚಿಕಿತ್ಸೆ ನೀಡುವ ಬದಲಾಗಿ ತಾರತಮ್ಯದಿಂದ ಕಾಣುವ ಪ್ರವೃತ್ತಿ ಇದೆ ಎಂದರು.

ಮನೋವಿಜ್ಞಾನಿ ಸೃಷ್ಟಿ ಅಸ್ತಾನ ಮಾತನಾಡಿ, ಸರಿಯಾದ ಸಮಯದಲ್ಲಿ ನೀಡುವ ಚಿಕಿತ್ಸೆಯಿಂದಾಗಿ ಜನರು ಸಹಾಯ ಕೇಳುವುದನ್ನು ತಡೆಗಟ್ಟಬಹುದು. ಈ ಚಿಕಿತ್ಸೆಯು ಖಾಸಗಿ ವಲಯದಲ್ಲಿ ಕೊಂಚ ವೆಚ್ಚದಾಯಕ. ಈ ನಡುವೆ ಸರ್ಕಾರ ಇದಕ್ಕೆ ಚಿಕಿತ್ಸೆ ಆರಂಭಿಸಿದ್ದು, ಅನೇಕ ಮಂದಿ ಅನಾನುಕೂಲತೆಯಿಂದ ಹೋಗುವುದಿಲ್ಲ ಎಂದರು.

ಮಾನಸಿಕ ಆರೋಗ್ಯ ವಿಷಯದಲ್ಲಿ ವೃತ್ತಿಪರರ ಸಂಖ್ಯೆ ಕೂಡ ಹೆಚ್ಚು ಗಣನೀಯವಾಗಿಲ್ಲ. 2016ರಲ್ಲಿ 6000 ಇದ್ದ ಸಂಖ್ಯೆ 2023ರಲ್ಲಿ 9000 ಇದೆ. ಈ ನಿಟ್ಟಿನಲ್ಲಿ ಮನೋ ವಿಜ್ಞಾನಿಗಳ ಸಂಖ್ಯೆ ಕೂಡ ಅಧಿಕವಾಗಬೇಕಿದೆ. ಮನೋ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ವೃತ್ತಿಪರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕುಮಾರ್​ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವಾಗುವ ಅಂಶ: ಎನ್​ಸಿಆರ್​ಬಿ ದತ್ತಾಂಶದ ಪ್ರಕಾರ, 2016ರಲ್ಲಿ 1.3 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೆ, 2021ರಲ್ಲಿ 1.64 ಲಕ್ಷ ವರದಿಯಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆ, ಖಿನ್ನತೆಗಳು ಕೂಡ ಅನೇಕ ಪ್ರಕರಣದಲ್ಲಿ ಆತ್ಮಹತ್ಯೆಗೆ ಕಾರಣವಾಗಿದೆ.

ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತವೆ. ಇದು ಅನೇಕ ಬಾರಿ ಗಣನೆಗೆ ಬರುವುದಿಲ್ಲ. ದೇಹಿಕ ಮತ್ತು ಮಾನಸಿಕ ಚಟುವಟಿಕೆಯಂತಹ ಸಾಮಾಜಿಕ ಒಗ್ಗಟ್ಟಿನ ಪ್ರೋತ್ಸಾಹ ಮಾದರಿಗಳು ಅವಶ್ಯಕ. ಅನೇಕ ಯುವಕರು ಹದಿಹರೆಯದ ಖಿನ್ನತೆ, ದೌರ್ಜನ್ಯ, ಆತಂಕ, ನಿದ್ರಾಹೀನತೆ, ಡಿಜಿಟಲ್​ ಸಾಧನಗಳ ಮೇಲಿನ ಅವಲಂಬನೆ ಮತ್ತು ಇತರೆ ವ್ಯಸನಗಳಿಂದ ಬಳಲುತ್ತಿದ್ದು, ಅನೇಕ ಬಾರಿ ಆತ್ಮಹತ್ಯೆಗೆ ಕಾರಣವಾಗುತ್ತದೆ.

ಐಐಟಿ, ಐಐಎಂ ಮತ್ತು ಮೆಡಿಕಲ್​ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಸ್ಪರ್ಧೆಯ ಕೋಚಿಂಗ್​ ತಾಣವಾಗಿರುವ ಕೋಟಾದಲ್ಲಿ ಪದೇ ಪದೇ ಇಂತಹ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ ಎಂದು ಇದೆ ವೇಳೆ ಉಲ್ಲೇಖಿಸಿದರು. ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಅದನ್ನು ತಡೆಗಟ್ಟುವ ಸಂಬಂಧ ನಾವು ಜಾಗೃತಿ ಸೃಷ್ಟಿಸಬೇಕಿದ್ದು, ಈ ಸಂಬಂಧ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.

ದೈಹಿಕ ಆರೋಗ್ಯದಿಂದ ಮಾನಸಿಕ ಆರೋಗ್ಯವನ್ನು ಬೇರ್ಪಡಿಸಲಾಗದು. ಎರಡೂ ಕೂಡ ಒಂದಕ್ಕೊಂದು ಸಂಬಂಧ ಹೊಂದಿವೆ. ಮನಸ್ಸು ಮತ್ತು ದೇಹದ ಕುರಿತು ಶಾಲೆ ಮತ್ತು ಕಾಲೇಜು ಮಟ್ಟದಲ್ಲೇ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಮಾನಸಿಕ ಆರೋಗ್ಯ ವಿಷಯವನ್ನು ಆರಂಭದಲ್ಲೇ ಪತ್ತೆ ಮಾಡಬಹುದು ಎಂದು ಡಾ.ಕುಮಾರ್ ವಿವರಿಸಿದರು.

ಇದನ್ನೂ ಓದಿ: ವಾಯು ಮಾಲಿನ್ಯದ ಹೆಚ್ಚಳ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣ: ಆರೋಗ್ಯ ತಜ್ಞರಿಂದ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.