ಯಾದಗಿರಿ: ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಕೂರು ನೇತೃತ್ವದಲ್ಲಿ ಸ್ಯಾನಿಟೈಸರ್ ಸ್ಪ್ರೇ ಟನಲ್ ಸ್ಥಾಪಿಸಲಾಗಿದೆ.
ಸೈದಾಪುರ ಪಟ್ಟಣದಲ್ಲಿ ತರಕಾರಿ ಖರೀದಿಸಲು ನೂರಾರು ಜನರು ಬರುತ್ತಾರೆ. ಹೀಗಾಗಿ ಜನರ ಆರೋಗ್ಯ ಕಾಪಾಡುವ ನಿಟ್ಟನಲ್ಲಿ ಮಾರುಕಟ್ಟೆಯ ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್ ಸ್ಪ್ರೇ ಟನಲ್ ನಿರ್ಮಾಣ ಮಾಡಲಾಗಿದೆ. ಸಹಾಯ ಆಯುಕ್ತರಾದ ಶಂಕರಗೌಡ ಸೋಮನಾಳ ಟನಲ್ ಉದ್ಘಾಟಿಸಿದರು.
ಇದೇ ವೇಳೆ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ಕ್ಷೇತ್ರದ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಆಹಾರ ಧಾನ್ಯ ವಿತರಣೆ ಮಾಡದರು.ಗುರುಮಿಟ್ಕಲ್ ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜು ಆವರಣದಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಷ್ರೇ ಟನಲ್ ಪ್ರಾರಂಭಿಸಲಾಗಿತ್ತು, ಎರಡನೆಯದಾಗಿ ಸೈದಾಪುರ ಪಟ್ಟಣದಲ್ಲಿ ಟನಲ್ ಪ್ರಾರಂಭಿಸಲಾಗಿದೆ.