ವಿಜಯಪುರ: ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ನಗರದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ನಗರದ ನಂಜನಗೂಡು ರಾಯರ ಮಠ ಹಾಗೂ ಕೃಷ್ಣ ವಾದಿರಾಜ ಮಠದಲ್ಲಿ ನೂರಾರು ಭಕ್ತರು ಪ್ರಾರ್ಥನೆ ಮಾಡುವ ಮೂಲಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಬೇಡಿಕೊಂಡರು.
ಪಂಡಿತ್ ಬಿಂದು ಮಾಧವಾಚಾರ್ಯ, ಗೋಪಾಲ ನಾಯ್ಕ, ಆರ್.ಆರ್.ಕುಲಕರ್ಣಿ, ರವಿ ಆಚಾರ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು.