ETV Bharat / state

ಅಪಾಯಕಾರಿ ಅಲೆಗಳ ನಡುವೆ ಯುವಕರ ಮೋಜು; ಸ್ಥಳೀಯರಿಂದ ತರಾಟೆ

author img

By

Published : Jul 11, 2021, 3:43 PM IST

ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರಿಂದ ಜಿಲ್ಲಾಡಳಿತ ಕೂಡ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು. ಹೀಗಿದ್ದರೂ ಸಹ ಯುವಕರು ಹಿಂಜರಿಯದೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದರು.

unsafe-crowds-gather-to-enjoy-in-karavara-beach
ಕಡಲಬ್ಬರದ ನಡುವೆ ಯುವಕರ ಮೋಜು ಮಸ್ತಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಷ್ಟಾದರೂ ಅಪಾಯಕಾರಿ ಅಲೆಗಳ ಅಬ್ಬರದ ನಡುವೆ ಹತ್ತಾರು ಯುವಕರು ಮೋಜು ಮಸ್ತಿಯಲ್ಲಿ ತೊಡಗಿದ್ದ ಘಟನೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಂಡುಬಂತು.

ಕಡಲಬ್ಬರದ ನಡುವೆ ಯುವಕರ ಮೋಜು ಮಸ್ತಿ

ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರಿಂದ ಜಿಲ್ಲಾಡಳಿತ ಕೂಡ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು. ಹೀಗಿದ್ದರೂ ಸಹ ಯುವಕರು ಹಿಂಜರಿಯದೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಯುವಕರನ್ನು ತರಾಟೆ ತೆಗೆದುಕೊಂಡಿದ್ದು, ಸಮುದ್ರದಿಂದ ಓಡಿಸಿದ್ದಾರೆ.

ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಕಡಲತೀರಗಳಿಗೆ ಬರುವ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕೂಡಲೇ ಸಂಜೆಯವರೆಗೂ ಕಡಲತೀರದ ಬಳಿ ಪೊಲೀಸ್ ಇಲ್ಲವೇ ಲೈಫ್ ಗಾರ್ಡ್ ಸಿಬ್ಬಂದಿ‌ ನೇಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಡ್ತಿದೆ ನೆಟ್​ವರ್ಕ್​​ ಸಮಸ್ಯೆ.. ಎತ್ತರದ ಪ್ರದೇಶದಲ್ಲಿ ಶೆಡ್​ ನಿರ್ಮಿಸಿಕೊಂಡ ವಿದ್ಯಾರ್ಥಿಗಳು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಷ್ಟಾದರೂ ಅಪಾಯಕಾರಿ ಅಲೆಗಳ ಅಬ್ಬರದ ನಡುವೆ ಹತ್ತಾರು ಯುವಕರು ಮೋಜು ಮಸ್ತಿಯಲ್ಲಿ ತೊಡಗಿದ್ದ ಘಟನೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಂಡುಬಂತು.

ಕಡಲಬ್ಬರದ ನಡುವೆ ಯುವಕರ ಮೋಜು ಮಸ್ತಿ

ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರಿಂದ ಜಿಲ್ಲಾಡಳಿತ ಕೂಡ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು. ಹೀಗಿದ್ದರೂ ಸಹ ಯುವಕರು ಹಿಂಜರಿಯದೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಯುವಕರನ್ನು ತರಾಟೆ ತೆಗೆದುಕೊಂಡಿದ್ದು, ಸಮುದ್ರದಿಂದ ಓಡಿಸಿದ್ದಾರೆ.

ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಕಡಲತೀರಗಳಿಗೆ ಬರುವ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕೂಡಲೇ ಸಂಜೆಯವರೆಗೂ ಕಡಲತೀರದ ಬಳಿ ಪೊಲೀಸ್ ಇಲ್ಲವೇ ಲೈಫ್ ಗಾರ್ಡ್ ಸಿಬ್ಬಂದಿ‌ ನೇಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಡ್ತಿದೆ ನೆಟ್​ವರ್ಕ್​​ ಸಮಸ್ಯೆ.. ಎತ್ತರದ ಪ್ರದೇಶದಲ್ಲಿ ಶೆಡ್​ ನಿರ್ಮಿಸಿಕೊಂಡ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.