ETV Bharat / state

ಪ್ರಾಣಾಪಾಯದಿಂದ ಪಾರಾದ 25ಕ್ಕೂ ಅಧಿಕ ಪ್ರಯಾಣಿಕರು! - Durgamba bus accident in sagar kundapur

ಸಾಗರದಿಂದ ಭಟ್ಕಳ ಮಾರ್ಗವಾಗಿ ಕುಂದಾಪುರಕ್ಕೆ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಕಸಲಗದ್ದೆ ಸಮೀಪ ಕಾರಿಗೆ ಜಾಗ ಬಿಡಲು ಹೋಗಿ ರಸ್ತೆಯಿಂದ ಕೆಳಗಿಳಿದು ಪಲ್ಟಿಯಾಗುವ ಹಂತದಲ್ಲಿತ್ತು.

ಕಸಲಗದ್ದೆ ಸಮೀಪ ರಸ್ತೆಯಿಂದ ಕೆಳಗಿಳಿದ ಬಸ್​​
author img

By

Published : Oct 23, 2019, 10:36 AM IST

Updated : Oct 23, 2019, 10:45 AM IST

ಭಟ್ಕಳ: ಎದುರಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. ಈ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಠವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಲೂಕಿನ ಕಸಲಗದ್ದೆ ಸಮೀಪ ಈ ಘಟನೆ ಸಂಭವಿಸಿದೆ. ಸಾಗರದಿಂದ ಕುಂದಾಪುರ ಕಡೆಗೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ ಸಾಗರ ರಸ್ತೆಯ ಕಸಲಗದ್ದೆ ಕ್ರಾಸ್ ಸಮೀಪ ಎದುರಿನಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿದ್ದರಿಂದ ಬಸ್ ರಸ್ತೆಯಿಂದ ಕೆಳಗಿಳಿದು ಪಲ್ಟಿಯಾಗುವ ಹಂತ ತಲುಪಿತ್ತು. ಈ ವೇಳೆ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆಯಿಂದ ಕೆಳಗಿಳಿದ ಬಸ್ಸನ್ನು ತನ್ನ ನಿಯಂತ್ರಣಕ್ಕೆ ಪಡೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.

ಕಸಲಗದ್ದೆ ಸಮೀಪ ರಸ್ತೆಯಿಂದ ಕೆಳಗಿಳಿದ ಬಸ್​​

ಸಾಕಷ್ಟು ಪ್ರಯಾಣಿಕರಿದ್ದ ಹಿನ್ನೆಲೆ ಕೆಳಗಿಳಿದ ಬಸ್ಸಿನ ಚಕ್ರ ಮಣ್ಣಿನಲ್ಲಿ ಹೂತು ಹೋಗಿತ್ತು.ಇನ್ನೇನು 3-4 ಕಿ.ಮೀ ಕ್ರಮಿಸಿದರೆ ಪ್ರಯಾಣಿಕರು ಭಟ್ಕಳಕ್ಕೆ ತಲುಪುತ್ತಿದ್ದರು. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಪಘಾತಕ್ಕೆ ಕಾರಣವಾದ ಜಿಯೋ ಅಂಡರ್ ಗ್ರೌಂಡ್ ಸಂಪರ್ಕ

ಭಟ್ಕಳದಿಂದ ಸಾಗರ ರಸ್ತೆ ಮಾರ್ಗವಾಗಿ ಮಾರುಕೇರಿಯಲ್ಲಿರುವ ಜಿಯೋ ಟೆಲಿಫೋನ್ ಟವರಿಗೆ ಅಂಡರ್ ಗ್ರೌಂಡ್​ ತಂತಿ ಸಂಪರ್ಕ ಸಲುವಾಗಿ ರಸ್ತೆ ಬದಿ ಹೊಂಡ ತೆಗೆಯಲಾಗಿದೆ. ಹೊಂಡದ ಮಣ್ಣನ್ನು ರಸ್ತೆ ಪಕ್ಕದಲ್ಲೇ ಹಾಕುತ್ತಿರುವುದರಿಂದ ರಸ್ತೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಎರಡೂ ಬದಿಯಿಂದ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದು ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಹಾಗೂ ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

ಭಟ್ಕಳ: ಎದುರಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. ಈ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಠವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಲೂಕಿನ ಕಸಲಗದ್ದೆ ಸಮೀಪ ಈ ಘಟನೆ ಸಂಭವಿಸಿದೆ. ಸಾಗರದಿಂದ ಕುಂದಾಪುರ ಕಡೆಗೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ ಸಾಗರ ರಸ್ತೆಯ ಕಸಲಗದ್ದೆ ಕ್ರಾಸ್ ಸಮೀಪ ಎದುರಿನಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿದ್ದರಿಂದ ಬಸ್ ರಸ್ತೆಯಿಂದ ಕೆಳಗಿಳಿದು ಪಲ್ಟಿಯಾಗುವ ಹಂತ ತಲುಪಿತ್ತು. ಈ ವೇಳೆ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆಯಿಂದ ಕೆಳಗಿಳಿದ ಬಸ್ಸನ್ನು ತನ್ನ ನಿಯಂತ್ರಣಕ್ಕೆ ಪಡೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.

ಕಸಲಗದ್ದೆ ಸಮೀಪ ರಸ್ತೆಯಿಂದ ಕೆಳಗಿಳಿದ ಬಸ್​​

ಸಾಕಷ್ಟು ಪ್ರಯಾಣಿಕರಿದ್ದ ಹಿನ್ನೆಲೆ ಕೆಳಗಿಳಿದ ಬಸ್ಸಿನ ಚಕ್ರ ಮಣ್ಣಿನಲ್ಲಿ ಹೂತು ಹೋಗಿತ್ತು.ಇನ್ನೇನು 3-4 ಕಿ.ಮೀ ಕ್ರಮಿಸಿದರೆ ಪ್ರಯಾಣಿಕರು ಭಟ್ಕಳಕ್ಕೆ ತಲುಪುತ್ತಿದ್ದರು. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಪಘಾತಕ್ಕೆ ಕಾರಣವಾದ ಜಿಯೋ ಅಂಡರ್ ಗ್ರೌಂಡ್ ಸಂಪರ್ಕ

ಭಟ್ಕಳದಿಂದ ಸಾಗರ ರಸ್ತೆ ಮಾರ್ಗವಾಗಿ ಮಾರುಕೇರಿಯಲ್ಲಿರುವ ಜಿಯೋ ಟೆಲಿಫೋನ್ ಟವರಿಗೆ ಅಂಡರ್ ಗ್ರೌಂಡ್​ ತಂತಿ ಸಂಪರ್ಕ ಸಲುವಾಗಿ ರಸ್ತೆ ಬದಿ ಹೊಂಡ ತೆಗೆಯಲಾಗಿದೆ. ಹೊಂಡದ ಮಣ್ಣನ್ನು ರಸ್ತೆ ಪಕ್ಕದಲ್ಲೇ ಹಾಕುತ್ತಿರುವುದರಿಂದ ರಸ್ತೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಎರಡೂ ಬದಿಯಿಂದ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದು ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಹಾಗೂ ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

Intro:ಭಟ್ಕಳ: ತಾಲೂಕಿನ ಸಾಗರ ರೋಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸಿನ ಎದುರಿಗೆ ಬಂದ ಕಾರು ಮುಂದೆ ಸಂಚರಿಸಲು ಜಾಗ ಬಿಟ್ಟುಕೊಡುವ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದ ಪರಿಣಾಮ ಬಸ್ ಒಂದು ಕಡೆ ವಾಲಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಪಲ್ಟಿಯಾಗ ಬಹುದಾದ ಬಸ್ಸನ್ನು ಅನಾಹುತದಿಂದ ತಪ್ಪಿದ್ದಾನೆBody:ಭಟ್ಕಳ: ತಾಲೂಕಿನ ಸಾಗರ ರೋಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸಿನ ಎದುರಿಗೆ ಬಂದ ಕಾರು ಮುಂದೆ ಸಂಚರಿಸಲು ಜಾಗ ಬಿಟ್ಟುಕೊಡುವ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದ ಪರಿಣಾಮ ಬಸ್ ಒಂದು ಕಡೆ ವಾಲಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಪಲ್ಟಿಯಾಗ ಬಹುದಾದ ಬಸ್ಸನ್ನು ಅನಾಹುತದಿಂದ ತಪ್ಪಿದ್ದಾನೆ



ಎಂದಿನಂತೆ ಸಾಗರದಿಂದ ಭಟ್ಕಳದ ಕಡೆಗೆ ಪ್ರಯಾಣಿಕರನ್ನು ಹೊತ್ತುತರುತ್ತಿದ್ದ ಖಾಸಗಿ ಬಸ್ ಸಾಗರ ರಸ್ತೆಯ ಕಸಲಗದ್ದೆ ಕ್ರಾಸ್ ಸಮೀಪ ಎದುರಿನಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಈ ವೇಳೆ ಬಸ್ ನಲ್ಲಿ 25ಕ್ಕೂ ಅಧಿಕ ಪ್ರಯಾಣಿಕರಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಕೆಳಗಿಳಿದ ಬಸ್ಸನ್ನು ತನ್ನ ನಿಯಂತ್ರಣಕ್ಕೆ ಪಡೆದು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಸಾಕಷ್ಟು ಪ್ರಯಾಣಿಕರಿದ್ದ ಹಿನ್ನೆಲೆ ಕೆಳಗಿಳಿದ ಬಸ್ ಚಕ್ರ ಮಣ್ಣಿನಲ್ಲಿ ಹೂಗಿದು ಹೋಗಿತ್ತು .ಇನ್ನೇನು 3-4 ಕಿ.ಮಿ ತಲುಪುದರೆ ಪ್ರಯಾಣಿಕರು ಭಟ್ಕಳಕ್ಕೆ ತಲುಪುದಕ್ಕೂ ಮುಂಚೆ ಈ ಅವಘಡ ಪ್ರಯಾಣಿಕರಿಗೆ ಬಿತಿ ಹುಟ್ಟಿಸಿತ್ತು.ಈ ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲವಾಗಿದೆ

ಅಪಘಾತಕ್ಕೆ ಕಾರಣವಾದ ಜಿಯೋ ಅಂಡರ್ ಗ್ರೌಂಡ ಸಂಪರ್ಕ: ಒಂದುದಿಂದ ಸಾಗರ ರೋಡ್ ಮಾರ್ಗವಾಗಿ ಮಾರುಕೇರಿಯಲ್ಲಿ ಇರುವ ಜಿಯೋ ಟವರಿಗೆ ಅಂಡರ್ ಗ್ರೌಂಡ ತಂತಿ ಸಂಪರ್ಕಕ್ಕೆ ರಸ್ತೆ ಬದಿಯಲ್ಲಿ ಹೊಂಡ ತೆಗೆಯುತ್ತಿದ್ದು ತೆಗೆದ ಮಣ್ಣು ರಸ್ತೆ ಪಕ್ಕದಲ್ಲೇ ಹಾಕುತ್ತಿರುವುದರಿಂದ ರಸ್ತೆ ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಇದರಿಂದ ಎರಡು ಬದಿಯಿಂದ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತಿದ್ದೆ. ಈ ಬಗ್ಗೆ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅಪಘಾತ ನಡೆಯಲು ಕೂಡ ಇದೆ ಕಾರಣ ಎಂದು ಪ್ರತ್ಯೇಕ್ಷದರ್ಶಿಗಲು ಹೇಳಿದ್ದಾರೆConclusion:ಉದಯ ನಾಯ್ಕ ಭಟ್ಕಳ
Last Updated : Oct 23, 2019, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.