ಉಡುಪಿ: ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಗೆ ತಲುಪಿದ್ದ ಅಳಿವಿನಂಚಿನಲ್ಲಿರುವ ಬಿಳಿ ಪ್ರಬೇಧದ ಗೂಬೆಯನ್ನು ರಕ್ಷಿಸುವಲ್ಲಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಯಶಸ್ವಿಯಾಗಿದ್ದಾರೆ.
ಬಿಳಿ ಗೂಬೆಯು ಅಂಬಲಪಾಡಿ ಸಿಡ್ನಿ ಮೆಂಡೊನ್ಸಾ ಅವರ ಮನೆಯಲ್ಲಿ ಕಂಡುಬಂದಿತ್ತು, ನಾಯಿ- ಬೆಕ್ಕುಗಳಿಗೆ ಸುಲಭವಾಗಿ ಆಹಾರವಾಗಬಹುದಾಗಿದ್ದ ಗೂಬೆಯು ಸಮಿತಿಯ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ಬದುಕುಳಿದಿದೆ.
ಓದಿ: ಈ ಟಿವಿ ಭಾರತ ಫಲಶೃತಿ: ಅನಾಥ ಕರುಗಳ ಪಾಲಿಗೆ ಆಸರೆಯಾದ 'ಚೈತ್ರಾ ಗೋಶಾಲೆ'
ಗೂಬೆಯನ್ನು ರಕ್ಷಿಸಿರುವ ಸಮಿತಿಯ ಕಾರ್ಯಕರ್ತರು, ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಅರಣ್ಯವೀಕ್ಷಕ ಪರಶುರಾಮ ಮೇಟಿ ಅವರ ವಶಕ್ಕೆ ನೀಡಿದ್ದಾರೆ. ಗೂಬೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಬಿಡುವುದಾಗಿ ಉಪವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.