ಉಡುಪಿ : ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಗಣೇಶ್ ಅಥ್ಲೆಟಿಕ್ನಲ್ಲಿ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇವರು ಬೆಳಗ್ಗಿನ ಜಾವ ಸಮುದ್ರದಲ್ಲಿ ಚಿಪ್ಪು ತೆಗೆಯೋ ಕೆಲಸಕ್ಕೆ ಹೋದ್ರೆ 6 ಗಂಟೆಯ ನಂತರ ಮಾಸ್ಟರ್ ಅಥ್ಲೆಟಿಕ್ ತಯಾರಿ ಮಾಡ್ತಾರೆ. ಮನೆಯಲ್ಲಿ ಕಡು ಬಡತನ ಇದ್ರು ಕ್ರೀಡೆ ಅಂದ್ರೆ ಈತನಿಗೆ ಜೀವ. ಮೊದಲು ಸೆಂಟ್ರಿಂಗ್ ಕೆಲಸ ಮಾಡ್ತಾ ಕ್ರೀಡೆಯಲ್ಲಿ ತೊಡಗಿಸಿಕೊಂಡ ಗಣೇಶ್ ನಂತರ ಮಾಸ್ಟರ್ ಅಥ್ಲೆಟಿಕ್ ಆಗಿದ್ದಾರೆ.
ಎಸ್ಎಸ್ಎಲ್ಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಇವರು ಶ್ರೀಲಂಕಾ, ಬ್ರೂನೆಯಲ್ಲಿಯೂ ಪದಕ ಗೆದ್ದಿದ್ದಾರೆ. ಇನ್ನು ಗಣೇಶ್ ಹಲವಾರು ಮಕ್ಕಳಿಗೆ ತರಬೇತಿ ಕೊಡುತ್ತಿದ್ದಾರೆ. ಬಾಲ್ಯದಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಹುಚ್ಚು ಇದೀಗ ಸೈನ್ಯಕ್ಕೆ ಸೇರೋ ಯುವಕರಿಗೆ ತರಬೇತಿ ನೀಡುವಂತೆ ಮಾಡಿದೆ. ಗಣೇಶ್ ತರಬೇತಿ ನೀಡಿದ ಮಕ್ಕಳು ಇದೀಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿ ಸೇವೆ ಸಲ್ಲಿಸ್ತಿದ್ದಾರೆ.
ಗಣೇಶ್ ಈ ಹಿಂದೆ ಕಂಬಳದಲ್ಲಿ ಬರಿಗಾಲಿನಲ್ಲೇ ಓಡಿ ಮೊದಲ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.