ತುಮಕೂರು : ಜಿಲ್ಲೆಯ ಗಡಿಭಾಗವಾದ ಪಾವಗಡ ಭಾಗದಲ್ಲಿ ಖತರ್ನಾಕ್ ಕದರಿ ಗ್ಯಾಂಗ್ ಸಂಚರಿಸುತ್ತಿದ್ದು, ಸಾರ್ವಜನಿಕರಲ್ಲಿ ತಾವು ಪೊಲೀಸ್ ಎಂದು ನಂಬಿಸಿ ಚಿನ್ನಾಭರಣವನ್ನು ದೋಚುತ್ತಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಯಸ್ಸಾದ ಮಹಿಳೆಯರೇ ಈ ಗ್ಯಾಂಗ್ನ ಟಾರ್ಗೆಟ್ ಆಗಿದ್ದಾರೆ. ಕದರಿ ಗ್ಯಾಂಗ್ ನ ಮಟ್ಟ ಹಾಕಲು ಎಲ್ಲಾ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪಾವಗಡ ಸೇರಿದಂತೆ ಹಲವು ಕಡೆ ಈ ಗ್ಯಾಂಗ್ ತಮ್ಮ ಕೈಚಳಕ ತೋರಿಸುತ್ತಿದ್ದು, ಇವರ ಬಲೆಗಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಪೊಲೀಸ್ ಹಾಗೂ ತುಮಕೂರು ಪೊಲೀಸರು ಜಂಟಿ ಕಾರ್ಯ ಚರಣೆಯಲ್ಲಿ ತೊಡಗಿದ್ದಾರೆ.